Home / ಕವನ / ಕವಿತೆ / ಕಾಗೆಗೆ

ಕಾಗೆಗೆ

“ಕಾಗೆಯಂತೆಯೆ ಬಣ್ಣ ಆ ನರ ಪ್ರಾಣಿಗಹ!”
ಎನ್ನುವರು ಕರಿಯರನು ಜನರು ಕಂಡು
“ಆಹ! ಆಕೆಯ ಕೇಶ ಕಾಗೆಯೊಲೆ ಕಪ್ಪೆ”ಂದು
ಬಣ್ಣಿಸರು! ಜನರ ಮತಿಯೆಷ್ಟು ಮೊಂಡು!

ಅಹುದು! ದಿಟ! ನೀನೇನೊ ಕೊಂಚ ಕಪ್ಪಿರಬಹುದು!
‘ಅತಿಕಪ್ಪು’ ಎಂಬ ನುಡಿ ಸುಳ್ಳ ಸಂತೆ!
ನಿನ್ನ ಕಪ್ಪಿನ ಮೊಗಕೆ ಕಪ್ಪುಬಳಿಯುವ ಕಪ್ಪು
ಈ ಜಗದೊಳಿರಲು ನಿನಗೇಕೆ ಚಿಂತೆ?”

ನಿನ್ನದೇ ಠೀವಿಯೊಳು ಕೊರಳ ಬಿಳಿಗೆರೆಯ ನೀ
ಎಡೆಬಿಡದೆ ಕುಕ್ಕುತಿಹೆ ಕತವದೇನು?-
ಅದನು ಕೃಷ್ಣನು ಧರಿಪ ವೈಜಯಂತಿಗೆ ಜನರು
ಹೋಲಿಸರದೇಕೆಂಬ ಕೋಪವೇನು?

ನಿನ್ನ ರೂಪೊಳೆ ಬಂದು ಸತ್ತವರು ಪಿಂಡಗಳ
ಸ್ಪೀಕರಿಸುತಿರಲು ನಿನಗೇನು ಕೊರತೆ?
ನಿನ್ನ ನೋಡುತಲಿರಲು ಸ್ಫೂರ್ತಿಯುಕ್ಕುವುದಮಮ!
ಎಂದಿಗೂ ಬತ್ತದಲ ಭಾವದೊರತೆ!

ಮಾಂಸದೊಂದೇ ತುಂಡ ಕಂಡರೂ ನೀ ಕರೆದು
ನಿನ್ನ ಗೆಳೆಯರಿಗೆಲ್ಲ ಕೊಡುವೆ ಪಾಲು
ಕೂಲಿಗಳಿಗೀಯದೆಯೆ ಎಲ್ಲ ನುಂಗುತಲಿರುವ
ಕ್ಯಪಿಟಲಿಸ್ಟರಿಗಿಂತ ನೀನೆ ಮೇಲು!

ಸರ್ವಗುಣ ಪರಿಪೂರ್ಣನಾರಿಹನು ಧರೆಯೊಳಗೆ?
ಅದರಿಂದ ಸಹ್ಯವೆಲೆ ನಿನ್ನ ಕಂಠ
ಸರ್ವಗುಣಸಂಪನ್ನ ಏಕಗುಣಹೀನನಾ
ಟ್ರಾಜೆಡಿಯ ನಾಯಕನು ನಿನ್ನ ನಂಟ!

ಸವಿಗೊರಲು ನಿನಗಿಲ್ಲವಾದರೇಂ ವಾಯಸವೆ?
ನೀನೀವ ಕಾವಿಲ್ಲದಿರಲು ಪಿಕವು
ಮೊಟ್ಟೆ ಯೊಡೆದೀ ಜಗದಿ ಹಾಡಲೆಂದಿಗುಮರಿದು
ಕ್ಷಮ್ಯವದರಿಂ ನಿನ್ನಘೋರ ಸ್ವರವು!

“ಗುಣವಿಲ್ಲ ವಸ್ತುವೊಳೆ, ಕಾಂಬ ಹೃದಯದೊಳಿಹುದು”
ಎಂದು ಭಾರವಿ ಕವಿಯು ನುಡಿದನಂದೇ!–
ಎಷ್ಟು ದಿಟವೀ ಮಾತು? ಕವಿಧಾತ್ರಿ ನಿನಗೊಲಿದೆ
ಇಂತು ಸವಿಮಾತುಗಳ ಮುಡಿಪ ತಂದೆ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...