Home / ಕವನ / ಕವಿತೆ / ನೇಸರನು

ನೇಸರನು

ಉಕ್ಷೆಯನು ವರಿಸಲು ಜಗದಲಿ ಬರುವನು ಮೂಡಣದಿಕ್ಕನ್ನೆಯ ಮಗನು |
ಹಸುಮಗುವಾಗುತೆ ಪೊಣ್ಗದಿರಿಂದಲಿ ಹೊಳೆಯುವನಾಗಸದಿ ||
ನಸುಗೆಂಪಾಗಿಸ ಮುಖದಿಂ ಬೆಳಗುತೆ ಚೇತನ ಬೀರುವ ವಿಶ್ವದೊಳು |
ರಸವನು ತುಂಬುತೆ ಯೆಲ್ಲೆಡೆಯೊಳ್ತಾ ಚೇತನ ಗೊಳಿಸುವನು || ೧ ||

ಜಗದೊಳುಬರೆ ತಾ ಮರೆವನು ಪ್ರಿಯತಮೆ ತೊಡಗುವನಾಚಣ ಕಾರ್ಯದಲಿ |
ಜಿಗಿಯುತೆ ತೇರೇಳ್ಗುದುರೆಗಳೆಳೆಯಲು ಖಂಜನು ಸಾರಥಿರಥಹೊಡೆವಾ ||
ಮೊಗದೊಳು ತಾನುಗ್ರತೆಯನು ಪಡೆಯುತೆ ನಭದೊಳುರಭಸದಿ ಕ್ರಮಿಸುವನು |
ಜಗವನು ಕ್ರಮದಿಂ ಸುತ್ತಲು ತಪ್ಪದೆ ಪಡುವಣ ಬೆಟ್ಟದಿ ವಿಶ್ರಮಿಪ || ೨ ||

ನಿದ್ರೆಯೆಲ್ಲಿಯದು ನೇಸರಗೆನುತಲಿ ಸಾಗುನಾಚಣ ಪಾತಳ ಲೋಕಕೆ |
ಎದ್ದುಸಾಗುವನು ಕಾರ್ಯವ ಮಾಡಲು ಆಸರಬೇಸರವರಿಯದಲೇ ||
ಶುದ್ಧ ಮನದೆ ತಾ ಕಾಯಕ ಮಾಡುತೆ ಕಾಯಕ ಮಹತಿಯ ಬೀರುವ ಜನಕೆ |
ಎದ್ದು ಮನುಜರೆ ಕಾರ್ಯವ ಮಾಡಿರಿ ಜಗದೊಳು ಬೆಳಗಿರಿ ನನ್ನಂತೆ || ೩ ||

ಹೆಂಡಿರು ಮಕ್ಕಳ ಮೋಹನ ಬಿಡುತಲಿ ಖಂಡಿತ ದುಡಿಯಿರಿ ಸಂತತವ |
ಕಂಡಕಂಡಕಡೆ ಮನವನು ಚಲಿಸದೆ ಕಾಯಕದೊಳ್ಮನ ವಿಕ್ಕುತಲಿ ||
ತುಂಡು ಹೊಂದಿದ ಬಂಧುಗಳೊಂದಡೆಕೂಡಿಸಿ ಮೆರೆಯಿರಿ ಜಗದೊಳಗೆ |
ಬಂಡುತನಕೆ ನೀವ್ಕೊಡದಿರಿ ತಾಣವ ನೀತಿಯ ಮಾರ್ಗದಿ ನಡೆಯುತ್ತೆ || ೪ ||

ಆಸರಬೇಸರಗಳ ದೂರೊತ್ತುತೆ ಮಾಡಿರಿ ನಿಮ್ಮಯ ಕಾಯಕ ಸಂತತದಿ |
ನೇಸರನಂತೆಯೆ ತೇಜವ ಬೀರಿರಿ ಸಂತತ ಜಗದೊಳು ಯೆಲ್ಲೆಡೆಗೆ ||
ಹೇಸಿರಿ ಕರ್ಮಕೆ ನೀತಿ ಧರ್ಮದಿ ವಿರಹಿತ ಸ್ವಾರ್ಥದಿ ತುಂಬಿರುವ |
ಭೂಷಣವೆನಿಪ ಕಾರ್ಯವ ಮಾಡುತೆ ಪಡೆಯಿರಿ ಶಾಶ್ವತ ಕೀರ್ತಿಯನು || ೫ ||

ಇಂತು ನೀತಿಯನು ನೇಸರ ಬೋಧಿಪ ತನ್ನಯ ನಿತ್ಯದ ಕೃತಿಯಿಂದೆ|
ಇಂತೆಯ ನಮ್ಮಯ ಗಾಂಧಿಪೇಳಿದನು ಶಾಶ್ವತ ನಮ್ಮಯ ಸುಖಕಾಗಿ ||
ಇಂತು ಬೋಧಿಸುತಲಾಗಸದೊಳ್ತಾನಿತ್ಯಹೊಳೆವನು ನಮಗಾಂಧಿ |
ಇಂತು ನಡೆದೊಡೆ ಶಾಂತಿ ಸೌಖ್ಯದಿಂ ಮೆರೆವುದು ಸಂತತ ಭೂಲೋಕ || ೬ ||
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...