Home / ಕವನ / ಕವಿತೆ / ಗೀತಮ್ಮ

ಗೀತಮ್ಮ

ಗೀತೆಯನು ಬರೆವಾಗ ಜನಸಿದೆಯೆ ನೀನಮ್ಮಾ |
ಗೀತೆಯೆಂಬಭಿಧಾನ ಪಡೆದೆನೀನಮ್ಮಾ ||
ಗೀತೆತಾಪ್ರಿಯಕರವು ತಾತಪರಮಾತ್ಮಂಗೇ |
ಗೀತಾಭಿಧಾನಮಂ ಸಾರ್ಥಕ್ಯಗೊಳಿಸಮ್ಮಾ || ೧ ||

ಗೀತಮ್ಮ ಕೇಳೀಗ ಕೂಸುನಿನಾಗಿಹೆಯೆಂದೂ |
ಓತು ನಿನಗಾಗಿ ತಂದಿಹನು ನಿಮ್ಮಣ್ಣಾ ||
ಗೀತೆತಿನ್ನಲಿಯೆಂದು ಸವಿಯಾದ ಹಣ್ಣುಗಳಾ ||
ಕೂತು ತಿನ್ನಮ್ಮ ನೀ ಪಕ್ವ ಹಣ್ಣಾ || ೨ ||

ಕೂತು ಕೇಳ್ಪೇಳುವೆನು ಫಲಗಳ ಮಹಿಮೆಯನೂ |
ಗೀತೆತಿನ್ನಲು ಅವಳ ರೋದನವುಯೆಲ್ಲಾ |||
ಸೋತುಕಾಲ್ತೆಗೆಯುವದು ನಗೆ ನಿನ್ನ ಮೊಗದಲ್ಲಿ |
ಓತು ಹೊರಹೊಮ್ಮುವುದು ಕೇಳು ಗೀತಮ್ಮಾ || ೩ ||

ಗೀತಮ್ಮ ವೇಳೆರಡು ವರುಷಗತಿಸಲು ನೀನು |
ಕೋತುಳ್ಳ ಕುಡುವೆಣ್ಣು ನೀನಾಗುವೀ ||
ನೀತಿವಂತನ ನಾನು ತರುವೆ ವರನಿನಗಾಗಿ |
ಪ್ರೀತಿಯಿಂದಲಿ ಧಾರೆಯೇರೆವೆನಮ್ಮಾ || ೪ ||

ನೀತಿವಂತನ ಪತಿಯ ದೇವನನು ಭಾವಿಸುತೆ |
ಪ್ರೀತಿಯಿ೦ದಲಿ ಯವನ ಸೇವೆಮಾಡಮ್ಮಾ ||
ನೀತಿವಂತರ ಮಗಳು ನೀನೆಂದು ಮರೆಯದಿರು |
ಕೀರ್ತಿಯನು ತಾರಮ್ಮ ನೀನೆನ್ನ ಕುಲಕೇ || ೫ ||

ಗೀತೆಕೇಳತ್ತೆ ಮೂವರನೀನು ಸಂತತದಿ |
ಪ್ರೀತಿಯಿಂದಲಿಯವರ ಶಿಶ್ರೂಷೆಮಾಡಮ್ಮಾ ||
ಕೋತಿಯೆಂದದಿ ನಡೆಯೆ ಘಾತಗೊಳುವುದುನಿನ್ಸ
ಪ್ರೀತಿಯ ಸಂಸಾರವೀ ಜಗದೊಳೂ || ೬ ||

ನೀತಿಬಿಡುತಲಿ ಗಂಡ ಕೋತಿಯಂದದಿ ನಡೆಯೆ |
ಮಾತುಬೆಳೆಸದೆ ನೀನು ನೀತಿ ತೋರಮ್ಮಾ |
ಆತನ ತಂಗಿಯರ ತಮ್ಮಗಳ ಜೋತೆನೀನು |
ಪ್ರೀತಿಯ ಕೆಳತನದಿ ಕಾಣಮ್ಮಾ ನೀನು || ೭ ||

ದಾಸದಾಸಿಯರನ್ನು ಓತುಪಡೆದಿಹ ಸುತರ |
ನಾತೆಯಿಂದಲಿ ದಯವ ನೀತೋರಿಸಮ್ಮಾ ||
ಮಾತನನ್ನಿವುಗಳನು ನಡಿಸೆ ನೀ ಪಡೆದಪೆಯೆ |
ಖ್ಯಾತಿಯನು ಜಗದೊಳಗೆ ಶ್ರೇಷ್ಠಸತಿಯೆಂದೂ || ೮ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...