Home / ಕವನ / ಕವಿತೆ / ಗೀತಮ್ಮ

ಗೀತಮ್ಮ

ಗೀತೆಯನು ಬರೆವಾಗ ಜನಸಿದೆಯೆ ನೀನಮ್ಮಾ |
ಗೀತೆಯೆಂಬಭಿಧಾನ ಪಡೆದೆನೀನಮ್ಮಾ ||
ಗೀತೆತಾಪ್ರಿಯಕರವು ತಾತಪರಮಾತ್ಮಂಗೇ |
ಗೀತಾಭಿಧಾನಮಂ ಸಾರ್ಥಕ್ಯಗೊಳಿಸಮ್ಮಾ || ೧ ||

ಗೀತಮ್ಮ ಕೇಳೀಗ ಕೂಸುನಿನಾಗಿಹೆಯೆಂದೂ |
ಓತು ನಿನಗಾಗಿ ತಂದಿಹನು ನಿಮ್ಮಣ್ಣಾ ||
ಗೀತೆತಿನ್ನಲಿಯೆಂದು ಸವಿಯಾದ ಹಣ್ಣುಗಳಾ ||
ಕೂತು ತಿನ್ನಮ್ಮ ನೀ ಪಕ್ವ ಹಣ್ಣಾ || ೨ ||

ಕೂತು ಕೇಳ್ಪೇಳುವೆನು ಫಲಗಳ ಮಹಿಮೆಯನೂ |
ಗೀತೆತಿನ್ನಲು ಅವಳ ರೋದನವುಯೆಲ್ಲಾ |||
ಸೋತುಕಾಲ್ತೆಗೆಯುವದು ನಗೆ ನಿನ್ನ ಮೊಗದಲ್ಲಿ |
ಓತು ಹೊರಹೊಮ್ಮುವುದು ಕೇಳು ಗೀತಮ್ಮಾ || ೩ ||

ಗೀತಮ್ಮ ವೇಳೆರಡು ವರುಷಗತಿಸಲು ನೀನು |
ಕೋತುಳ್ಳ ಕುಡುವೆಣ್ಣು ನೀನಾಗುವೀ ||
ನೀತಿವಂತನ ನಾನು ತರುವೆ ವರನಿನಗಾಗಿ |
ಪ್ರೀತಿಯಿಂದಲಿ ಧಾರೆಯೇರೆವೆನಮ್ಮಾ || ೪ ||

ನೀತಿವಂತನ ಪತಿಯ ದೇವನನು ಭಾವಿಸುತೆ |
ಪ್ರೀತಿಯಿ೦ದಲಿ ಯವನ ಸೇವೆಮಾಡಮ್ಮಾ ||
ನೀತಿವಂತರ ಮಗಳು ನೀನೆಂದು ಮರೆಯದಿರು |
ಕೀರ್ತಿಯನು ತಾರಮ್ಮ ನೀನೆನ್ನ ಕುಲಕೇ || ೫ ||

ಗೀತೆಕೇಳತ್ತೆ ಮೂವರನೀನು ಸಂತತದಿ |
ಪ್ರೀತಿಯಿಂದಲಿಯವರ ಶಿಶ್ರೂಷೆಮಾಡಮ್ಮಾ ||
ಕೋತಿಯೆಂದದಿ ನಡೆಯೆ ಘಾತಗೊಳುವುದುನಿನ್ಸ
ಪ್ರೀತಿಯ ಸಂಸಾರವೀ ಜಗದೊಳೂ || ೬ ||

ನೀತಿಬಿಡುತಲಿ ಗಂಡ ಕೋತಿಯಂದದಿ ನಡೆಯೆ |
ಮಾತುಬೆಳೆಸದೆ ನೀನು ನೀತಿ ತೋರಮ್ಮಾ |
ಆತನ ತಂಗಿಯರ ತಮ್ಮಗಳ ಜೋತೆನೀನು |
ಪ್ರೀತಿಯ ಕೆಳತನದಿ ಕಾಣಮ್ಮಾ ನೀನು || ೭ ||

ದಾಸದಾಸಿಯರನ್ನು ಓತುಪಡೆದಿಹ ಸುತರ |
ನಾತೆಯಿಂದಲಿ ದಯವ ನೀತೋರಿಸಮ್ಮಾ ||
ಮಾತನನ್ನಿವುಗಳನು ನಡಿಸೆ ನೀ ಪಡೆದಪೆಯೆ |
ಖ್ಯಾತಿಯನು ಜಗದೊಳಗೆ ಶ್ರೇಷ್ಠಸತಿಯೆಂದೂ || ೮ ||
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...