Home / ಕವನ / ಕವಿತೆ / ಗೀತಮ್ಮ

ಗೀತಮ್ಮ

ಗೀತೆಯನು ಬರೆವಾಗ ಜನಸಿದೆಯೆ ನೀನಮ್ಮಾ |
ಗೀತೆಯೆಂಬಭಿಧಾನ ಪಡೆದೆನೀನಮ್ಮಾ ||
ಗೀತೆತಾಪ್ರಿಯಕರವು ತಾತಪರಮಾತ್ಮಂಗೇ |
ಗೀತಾಭಿಧಾನಮಂ ಸಾರ್ಥಕ್ಯಗೊಳಿಸಮ್ಮಾ || ೧ ||

ಗೀತಮ್ಮ ಕೇಳೀಗ ಕೂಸುನಿನಾಗಿಹೆಯೆಂದೂ |
ಓತು ನಿನಗಾಗಿ ತಂದಿಹನು ನಿಮ್ಮಣ್ಣಾ ||
ಗೀತೆತಿನ್ನಲಿಯೆಂದು ಸವಿಯಾದ ಹಣ್ಣುಗಳಾ ||
ಕೂತು ತಿನ್ನಮ್ಮ ನೀ ಪಕ್ವ ಹಣ್ಣಾ || ೨ ||

ಕೂತು ಕೇಳ್ಪೇಳುವೆನು ಫಲಗಳ ಮಹಿಮೆಯನೂ |
ಗೀತೆತಿನ್ನಲು ಅವಳ ರೋದನವುಯೆಲ್ಲಾ |||
ಸೋತುಕಾಲ್ತೆಗೆಯುವದು ನಗೆ ನಿನ್ನ ಮೊಗದಲ್ಲಿ |
ಓತು ಹೊರಹೊಮ್ಮುವುದು ಕೇಳು ಗೀತಮ್ಮಾ || ೩ ||

ಗೀತಮ್ಮ ವೇಳೆರಡು ವರುಷಗತಿಸಲು ನೀನು |
ಕೋತುಳ್ಳ ಕುಡುವೆಣ್ಣು ನೀನಾಗುವೀ ||
ನೀತಿವಂತನ ನಾನು ತರುವೆ ವರನಿನಗಾಗಿ |
ಪ್ರೀತಿಯಿಂದಲಿ ಧಾರೆಯೇರೆವೆನಮ್ಮಾ || ೪ ||

ನೀತಿವಂತನ ಪತಿಯ ದೇವನನು ಭಾವಿಸುತೆ |
ಪ್ರೀತಿಯಿ೦ದಲಿ ಯವನ ಸೇವೆಮಾಡಮ್ಮಾ ||
ನೀತಿವಂತರ ಮಗಳು ನೀನೆಂದು ಮರೆಯದಿರು |
ಕೀರ್ತಿಯನು ತಾರಮ್ಮ ನೀನೆನ್ನ ಕುಲಕೇ || ೫ ||

ಗೀತೆಕೇಳತ್ತೆ ಮೂವರನೀನು ಸಂತತದಿ |
ಪ್ರೀತಿಯಿಂದಲಿಯವರ ಶಿಶ್ರೂಷೆಮಾಡಮ್ಮಾ ||
ಕೋತಿಯೆಂದದಿ ನಡೆಯೆ ಘಾತಗೊಳುವುದುನಿನ್ಸ
ಪ್ರೀತಿಯ ಸಂಸಾರವೀ ಜಗದೊಳೂ || ೬ ||

ನೀತಿಬಿಡುತಲಿ ಗಂಡ ಕೋತಿಯಂದದಿ ನಡೆಯೆ |
ಮಾತುಬೆಳೆಸದೆ ನೀನು ನೀತಿ ತೋರಮ್ಮಾ |
ಆತನ ತಂಗಿಯರ ತಮ್ಮಗಳ ಜೋತೆನೀನು |
ಪ್ರೀತಿಯ ಕೆಳತನದಿ ಕಾಣಮ್ಮಾ ನೀನು || ೭ ||

ದಾಸದಾಸಿಯರನ್ನು ಓತುಪಡೆದಿಹ ಸುತರ |
ನಾತೆಯಿಂದಲಿ ದಯವ ನೀತೋರಿಸಮ್ಮಾ ||
ಮಾತನನ್ನಿವುಗಳನು ನಡಿಸೆ ನೀ ಪಡೆದಪೆಯೆ |
ಖ್ಯಾತಿಯನು ಜಗದೊಳಗೆ ಶ್ರೇಷ್ಠಸತಿಯೆಂದೂ || ೮ ||
*****

Tagged:

Leave a Reply

Your email address will not be published. Required fields are marked *

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...