Home / ಕವನ / ಕವಿತೆ / ನೌಕಾ-ರಾವಣ

ನೌಕಾ-ರಾವಣ

ಹಡಗವಲ್ಲವಯ್ಯಾ ಇದು!
ಹದಗಡಕ! ನಿಶಾಚರ!
ಅಹಿರಾವಣ! ಮಹಿರಾವಣ!
ಶೂರ್ಪನಖಿಯ ಆಪ್ತಬಂಧು!

ರಾಶಿರಾಶಿಯಾಗಿ ಬಿದ್ದಿದೆ ನೋಡು-
ಮೀನಗಡಕ ಮೊಸಳೆಯಂತೆ!
ನಕ್ರದಂತೆ ವಕ್ರಾಕಾರ!
ಮೀನದಂತೆ ವಾಯುಜೀವಿ!
ಹೇಗೆ ಕಣ್ಣುಬಿಡುತಿದೆ ನೋಡ
ಒಕ್ಕಣ್ಣ ರಾಕ್ಷಸನಂತೆ!
ಹೇಗೆ ಒದ್ದಾಡುತಿದೆ ನೋಡು
ಚಿಗರೆಯ ಮೆದ್ದ ಹೆಬ್ಬಾವಿನಂತೆ!

ಸುಡುತಿದೆ ನೋಡು ಹೊಗೆಸೊಪ್ಪನು
ಜ್ಹಾಲಾಮುಖಿಯಂಥ ಚಿಲುಮೆಯೊಂದರಲ್ಲಿ:
ಬದಿಗೆರಡು ಚಿಲುಮೆಗಳಿರಿಸಿ:
ಮನೆಮಾರಿನಿಂದೆಳೆದು ತಂದು
ಗಂಟಿಕ್ಕಿ ನೂರೊಂದು ನೇಣಿಂದ
ಸೆರೆಯಿಕ್ಕಿದೆ ನೂರೆಂಟು ನಾವಿಗರನು!
ಹಡಗವಲ್ಲವಯ್ಯ ಇದು!
ಹದಗಡಕ! ನಿಶಾಚರ!

ಮೈಗಣ್ಣನಂತೆ ವಿಕಿವಿುಕಿ ನೋಡುತಿದೆ ನೋಡು!
ಇಲಿಯ ಗುದ್ದುಗಳಂಥ ದಿಟ್ಟಿಗಳಿಂದ!
ಮೈತುಂಬ ದೀಪ ಹಚ್ಚಿಕೊಂಡು
ಹೊಟ್ಟೆತುಂಬ ಇದ್ದಲಿಯಿರಿಸಿ
ತನ್ನ ಸ್ನಾಯುವಿನ ಮೇಲೆ
ಧಮನಿಯ ಕೆಳಗೆ-
ಓಡಾಡಿಸುತಿದೆ ನಮ್ಮನು,-
ಅನುದಿನವು ಓಡಾಡಿಸುತ್ತಿದೆ ನೋಡು!
ಇದರ ಪ್ರಾತರ್ವಿಧಿಯೇ ನಮಗುಸಿರು, ಅನ್ನನೀರು.
ಇದರಂತ್ಯವಿಧಿಯೇ ನಮಗೆ ಜೀವನ??
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...