ಮೂಲ: ಭಾಸ್ಕರ ಚಕ್ರವರ್ತಿ
ಕಣ್ಣೀರ ಹನಿಯೊಂದು
ಮರುಭೂಮಿಯಲ್ಲಿ ಉರುಳಿತು
ಅಮ್ಮ ತಂಗಿ ಅದನ್ನು
ಹುಡುಕುವುದಕ್ಕೆ ಹೊರಟರು.
ಹತ್ತಿ ಔಷಧದ ಜೊತೆ
ಡಾಕ್ಟರೂ ಬಂದರು.
ಕಪ್ಪು ಗೌನು ತೊಟ್ಟ
ಅಡ್ವೊಕೇಟ್ ಕೂಡ.
ಮೂಕನಂತೆ ನಾನು
ಇಡೀ ಮೂರು ತಿಂಗಳು
ಮೌನವಾಗಿದ್ದೆ.
ಮತ್ತೆ ಒಂದು ದಿನ
ರೆಕ್ಕೆ ಬಿಚ್ಚಿ ಬಡಿದು
ಹಾರಾಡತೊಡಗಿದೆ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.