Home / ಲೇಖನ / ಚಲನಚಿತ್ರ / ಹರ್‍ಷಾಲಿ ಮಲ್ಹೋತ್ರಾ

ಹರ್‍ಷಾಲಿ ಮಲ್ಹೋತ್ರಾ

“ಬೆಳೆಯುವ ಸಿರಿ ಮೊಳಕೆಯಲ್ಲಿ” ಎನ್ನುವಂತೇ “ಮೂರು ವರ್‍ಷದ ಬುದ್ಧಿ ನೂರು ವರ್‍ಷ” ಎನ್ನುವಂತೇ… ಸಲ್ಮಾನ್ ಖಾನ್ ಅವರ “ಬಜರಂಗಿ ಬಾಯಿಜಾನ್” ಎಂಬ ಹಿಂದಿ ಚಲನಚಿತ್ರದಲ್ಲಿ ನಟಿಸಿರುವ ಪುಟಾಣಿ ಸೂಪರ್‌ಸ್ಟಾರ್‌ ಹರ್‍ಷಾಲಿ ಮಲ್ಹೋತ್ರಾ ತೀರಾ ಗಮನ ಸೆಳೆಯುವ ಈ ಪಾತ್ರಧಾರಿಯಾಗಿ ನಮ್ಮ ಹೃದಯ ಮನ ಗೆಲ್ಲುವಳು.

ಸಿನಿಮಾದಲ್ಲಿ ಈಕೆಯದೇ ಮುಖ್ಯ ಪಾತ್ರ. ನಮ್ಮ ನೆರೆಯ ರಾಷ್ಟ್ರ ಸದಾ ಕಾಲು ಕೆದರಿ ನಮ್ಮೊಂದಿಗೆ ಜಗಳ ತೆಗೆಯುವ, ನಿತ್ಯ ಸುದ್ದಿಯಲ್ಲಿರುವ, ಪಾಕಿಸ್ತಾನದಿಂದ ತಪ್ಪಿಸಿಕೊಂಡು ಬರುವ ಹರ್‍ಷಾಲಿ ಮುನ್ನಿ ಎಂಬ ಹೆಸರಿನ ಈ ಮೂಕಿ ಹುಡುಗಿ ಈ ಪುಟ್ಟ ಬಾಲೆ ಬಲು ದಿಟ್ಟತನದಲಿ ಕಾಣಿಸಿಕೊಂಡು ನಮ್ಮ ಕಣ್ಣುಗಳನ್ನು ಸದಾ ಒದ್ದೆ ಮಾಡುವ ಮೂಲಕ ತನ್ನತ್ತ ಸೂರೆಗೊಂಡಿದ್ದಾಳೆ. ಸಿನಿಮಾ ಮಾಡಿದರೆ ಹೀಗೆ ಮಾಡಬೇಕೆಂದು ಅನಿಸುವುದರ ಜೊತೆಜೊತೆಗೆ ನಿರ್‍ದೇಶಕ ಕಬೀರ್ ಖಾನ್ ಮನ ಮುಟ್ಟುವಂತೆ ಹೇಳುವುದನ್ನು ಹೇಳಿಸುತ್ತಾನೆ.

ಈ ಪುಟಾಣಿ ಕಂದನನ್ನು ತನ್ನ ಮನೆಗೆ ಸೇರಿಸುವ ಜವಾಬ್ದಾರಿ ಈ ನಮ್ಮ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ಗೆ ಸೇರಿದ್ದು… ಇದು ಭಾರೀ ಭಾರೀ ಗದ್ದಲ ಕುತೂಲಗಳಿಂದ ತಿರುವುಗಳಿಂದ ಸಾಗುವ ಸನ್ನಿವೇಶ ಮೈನೆವರೇಳೆಸುತ್ತದೆ. ಭಯಂಕರ ಉಸಿರುಗಟ್ಟಿಸಿ ಸಾಕಷ್ಟು ಸನ್ನಿವೇಶಗಳಲ್ಲಿ ಹರ್‍ಷಾಲಿ ಮಲ್ಹೋತ್ರಾ ಮಿಂಚಿದ್ದಾಳೆ…! ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾಳೆ. ನಗಿಸಿದ್ದಾರೆ ಹೀಗಾಗಿ ಇವಳದೇ ಮುಖ್ಯ ಪಾತ್ರ, ಇದನ್ನು ಬಲು ಲವಲವಿಕೆಯಿಂದ ನಿರ್‍ವಹಿಸಿದ್ದಾಳೆ.

ಸಿನಿಮಾ ನೋಡಿದ ನಾವೆಲ್ಲರೂ “ಈ ಶತಮಾನದ ಹೊಸ ಶೋಧ”, “ಅದ್ಭುತ ಪ್ರತಿಭಾ ಬಾಲ ನಟಿ” ಎಂದು ಹುಬ್ಬೇರಿಸಿ ಹೊರಗೆ ಬಂದಿದ್ದುಂಟು! ಮಾನವೀಯ ಅಂತಃಕರಣದ ಮುಂದೆ ಜಾತಿ-ಮತ, ಕುಲ ಭೇದ ಗಡಿ ಕಾಯ್ದೆಗಳು ಪುಡಿ ಪುಡಿಯಾಗಿ ಜನರ ಕಂಬನಿ ಅಲ್ಲಿ ಹರಿಯುವುದು!

ಸಿನಿಮಾದಲ್ಲಿ ಮೂಕ ಪಾಕಿಸ್ತಾನಿ ಹೊರಗಡೆಯೇನು ಸಿನಿಮಾ ಸೆಟ್‌ನಲ್ಲಿ ಎಲ್ಲರ ಬಳಿ ಹರಳು ಹುರಿದಂತೆ ಮಾತನಾಡಿ ಒಳ್ಳೆ ಪುಟಾಣಿ ಹುಡುಗಿ ಎನಿಸಿಕೊಂಡಿದ್ದಾಳೆಂದರೆ ನಂಬಲು ಸಾಧ್ಯವಾಗದಂತೆ ನಟಿಸಿ ಅಭಿನಯ ಚತುರೆಯೆನಿಸಿದ್ದಾಳೆ.

“ನನಗೆ ನಟಿಸುವುದು ಡ್ಯಾನ್ಸ್ ಮಾಡುವುದು ಭಲೇ ಖುಷಿ ಖುಷಿ… ಸಲ್ಮಾನ್ ಖಾನ್ ಥರಾ ಸೂಪರ್ ಸ್ಟಾರ್ ಆಗಬೇಕೆಂದು ಕನಸು ಕಾಣುತ್ತಿರುವೆ!” ಎಂದು ಎಲ್ಲರ ಬಳಿ ಈ ಪುಟಾಣಿ ಈಗಾಗಲೇ ಸಾರಿ ಕೊಂಡಿದ್ದಾಳೆ. ಕನಸು ನೆನಸಾಗುವ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರುವ ಈ ಪುಟಾಣಿಗೆ ಕಷ್ಟವಾಗಲಾರದೆಂದು ಎಲ್ಲರ ಲೆಕ್ಕಾ…

ಇನ್ನು ಸಲ್ಮಾನ್ ಖಾನ್ ಹತ್ತಿರನೇ ನೇರವಾಗಿ ಮುಖಾಮುಖಿ, “ನೀ ನನ್ನನ್ನು ನಿನ್ನ ಥರಾ ಸೂಪರ್ ಸ್ಟಾರ್ ಮಾಡ್ತೀಯಾ?” ಎಂದು ಕೇಳಿಯೇ ಬಿಟ್ಟಿದ್ದಾಳೆ. ಮನಸ್ಸಿನಂತೆ ಮಹದೇವಿಯಲ್ಲವೇ?

ಈಗಾಗಲೇ ಈ ಪುಟಾಣಿ ಎರಡು ಹಿಂದಿ ಸಿನಿಮಾಗಳಲ್ಲಿ, ಟೀವಿ ಸೀರಿಯಲ್‌ಗಳಲ್ಲಿ- ಜಾಹೀರಾತು ಹಾಗೂ ಇತರೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಿಂಚಿದ್ದಾಳೆ. ಒಂದು ಕಡೆ ಶಿಕ್ಷಣ, ಇನ್ನೊಂದು ಕಡೆ ನಟನೆಯನ್ನು ಸರಿಸಮನಾಗಿ, ಸರಿಯಾಗಿಸಿಕೊಂಡು ಈಗಾಗಲೇ ಬೇಡಿಕೆ ಬಂದಿರುವ ಸಿನಿಮಾಗಳಲ್ಲಿ ಮಾತ್ರ ನಟಿಸುವೆ ಎನ್ನುವ ಪುಟಾಣಿ ಹರ್‍ಷಾಲಿ ಮಲ್ಹೋತ್ರಾಳಿಗೆ ನಾವು ನೀವು ಎಲ್ಲರೂ ಆಲ್ ದಿ ಬೆಸ್ಟ್ ಹೇಳುತ್ತಾ… ತನ್ನೆಲ್ಲ ಕನಸು ಕೈಗೂಡಲಿ ಎಂದು ಶುಭ ಹಾರೈಸೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...