Home / ಲೇಖನ / ಚಲನಚಿತ್ರ / ಹರ್‍ಷಾಲಿ ಮಲ್ಹೋತ್ರಾ

ಹರ್‍ಷಾಲಿ ಮಲ್ಹೋತ್ರಾ

“ಬೆಳೆಯುವ ಸಿರಿ ಮೊಳಕೆಯಲ್ಲಿ” ಎನ್ನುವಂತೇ “ಮೂರು ವರ್‍ಷದ ಬುದ್ಧಿ ನೂರು ವರ್‍ಷ” ಎನ್ನುವಂತೇ… ಸಲ್ಮಾನ್ ಖಾನ್ ಅವರ “ಬಜರಂಗಿ ಬಾಯಿಜಾನ್” ಎಂಬ ಹಿಂದಿ ಚಲನಚಿತ್ರದಲ್ಲಿ ನಟಿಸಿರುವ ಪುಟಾಣಿ ಸೂಪರ್‌ಸ್ಟಾರ್‌ ಹರ್‍ಷಾಲಿ ಮಲ್ಹೋತ್ರಾ ತೀರಾ ಗಮನ ಸೆಳೆಯುವ ಈ ಪಾತ್ರಧಾರಿಯಾಗಿ ನಮ್ಮ ಹೃದಯ ಮನ ಗೆಲ್ಲುವಳು.

ಸಿನಿಮಾದಲ್ಲಿ ಈಕೆಯದೇ ಮುಖ್ಯ ಪಾತ್ರ. ನಮ್ಮ ನೆರೆಯ ರಾಷ್ಟ್ರ ಸದಾ ಕಾಲು ಕೆದರಿ ನಮ್ಮೊಂದಿಗೆ ಜಗಳ ತೆಗೆಯುವ, ನಿತ್ಯ ಸುದ್ದಿಯಲ್ಲಿರುವ, ಪಾಕಿಸ್ತಾನದಿಂದ ತಪ್ಪಿಸಿಕೊಂಡು ಬರುವ ಹರ್‍ಷಾಲಿ ಮುನ್ನಿ ಎಂಬ ಹೆಸರಿನ ಈ ಮೂಕಿ ಹುಡುಗಿ ಈ ಪುಟ್ಟ ಬಾಲೆ ಬಲು ದಿಟ್ಟತನದಲಿ ಕಾಣಿಸಿಕೊಂಡು ನಮ್ಮ ಕಣ್ಣುಗಳನ್ನು ಸದಾ ಒದ್ದೆ ಮಾಡುವ ಮೂಲಕ ತನ್ನತ್ತ ಸೂರೆಗೊಂಡಿದ್ದಾಳೆ. ಸಿನಿಮಾ ಮಾಡಿದರೆ ಹೀಗೆ ಮಾಡಬೇಕೆಂದು ಅನಿಸುವುದರ ಜೊತೆಜೊತೆಗೆ ನಿರ್‍ದೇಶಕ ಕಬೀರ್ ಖಾನ್ ಮನ ಮುಟ್ಟುವಂತೆ ಹೇಳುವುದನ್ನು ಹೇಳಿಸುತ್ತಾನೆ.

ಈ ಪುಟಾಣಿ ಕಂದನನ್ನು ತನ್ನ ಮನೆಗೆ ಸೇರಿಸುವ ಜವಾಬ್ದಾರಿ ಈ ನಮ್ಮ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ಗೆ ಸೇರಿದ್ದು… ಇದು ಭಾರೀ ಭಾರೀ ಗದ್ದಲ ಕುತೂಲಗಳಿಂದ ತಿರುವುಗಳಿಂದ ಸಾಗುವ ಸನ್ನಿವೇಶ ಮೈನೆವರೇಳೆಸುತ್ತದೆ. ಭಯಂಕರ ಉಸಿರುಗಟ್ಟಿಸಿ ಸಾಕಷ್ಟು ಸನ್ನಿವೇಶಗಳಲ್ಲಿ ಹರ್‍ಷಾಲಿ ಮಲ್ಹೋತ್ರಾ ಮಿಂಚಿದ್ದಾಳೆ…! ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾಳೆ. ನಗಿಸಿದ್ದಾರೆ ಹೀಗಾಗಿ ಇವಳದೇ ಮುಖ್ಯ ಪಾತ್ರ, ಇದನ್ನು ಬಲು ಲವಲವಿಕೆಯಿಂದ ನಿರ್‍ವಹಿಸಿದ್ದಾಳೆ.

ಸಿನಿಮಾ ನೋಡಿದ ನಾವೆಲ್ಲರೂ “ಈ ಶತಮಾನದ ಹೊಸ ಶೋಧ”, “ಅದ್ಭುತ ಪ್ರತಿಭಾ ಬಾಲ ನಟಿ” ಎಂದು ಹುಬ್ಬೇರಿಸಿ ಹೊರಗೆ ಬಂದಿದ್ದುಂಟು! ಮಾನವೀಯ ಅಂತಃಕರಣದ ಮುಂದೆ ಜಾತಿ-ಮತ, ಕುಲ ಭೇದ ಗಡಿ ಕಾಯ್ದೆಗಳು ಪುಡಿ ಪುಡಿಯಾಗಿ ಜನರ ಕಂಬನಿ ಅಲ್ಲಿ ಹರಿಯುವುದು!

ಸಿನಿಮಾದಲ್ಲಿ ಮೂಕ ಪಾಕಿಸ್ತಾನಿ ಹೊರಗಡೆಯೇನು ಸಿನಿಮಾ ಸೆಟ್‌ನಲ್ಲಿ ಎಲ್ಲರ ಬಳಿ ಹರಳು ಹುರಿದಂತೆ ಮಾತನಾಡಿ ಒಳ್ಳೆ ಪುಟಾಣಿ ಹುಡುಗಿ ಎನಿಸಿಕೊಂಡಿದ್ದಾಳೆಂದರೆ ನಂಬಲು ಸಾಧ್ಯವಾಗದಂತೆ ನಟಿಸಿ ಅಭಿನಯ ಚತುರೆಯೆನಿಸಿದ್ದಾಳೆ.

“ನನಗೆ ನಟಿಸುವುದು ಡ್ಯಾನ್ಸ್ ಮಾಡುವುದು ಭಲೇ ಖುಷಿ ಖುಷಿ… ಸಲ್ಮಾನ್ ಖಾನ್ ಥರಾ ಸೂಪರ್ ಸ್ಟಾರ್ ಆಗಬೇಕೆಂದು ಕನಸು ಕಾಣುತ್ತಿರುವೆ!” ಎಂದು ಎಲ್ಲರ ಬಳಿ ಈ ಪುಟಾಣಿ ಈಗಾಗಲೇ ಸಾರಿ ಕೊಂಡಿದ್ದಾಳೆ. ಕನಸು ನೆನಸಾಗುವ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರುವ ಈ ಪುಟಾಣಿಗೆ ಕಷ್ಟವಾಗಲಾರದೆಂದು ಎಲ್ಲರ ಲೆಕ್ಕಾ…

ಇನ್ನು ಸಲ್ಮಾನ್ ಖಾನ್ ಹತ್ತಿರನೇ ನೇರವಾಗಿ ಮುಖಾಮುಖಿ, “ನೀ ನನ್ನನ್ನು ನಿನ್ನ ಥರಾ ಸೂಪರ್ ಸ್ಟಾರ್ ಮಾಡ್ತೀಯಾ?” ಎಂದು ಕೇಳಿಯೇ ಬಿಟ್ಟಿದ್ದಾಳೆ. ಮನಸ್ಸಿನಂತೆ ಮಹದೇವಿಯಲ್ಲವೇ?

ಈಗಾಗಲೇ ಈ ಪುಟಾಣಿ ಎರಡು ಹಿಂದಿ ಸಿನಿಮಾಗಳಲ್ಲಿ, ಟೀವಿ ಸೀರಿಯಲ್‌ಗಳಲ್ಲಿ- ಜಾಹೀರಾತು ಹಾಗೂ ಇತರೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಿಂಚಿದ್ದಾಳೆ. ಒಂದು ಕಡೆ ಶಿಕ್ಷಣ, ಇನ್ನೊಂದು ಕಡೆ ನಟನೆಯನ್ನು ಸರಿಸಮನಾಗಿ, ಸರಿಯಾಗಿಸಿಕೊಂಡು ಈಗಾಗಲೇ ಬೇಡಿಕೆ ಬಂದಿರುವ ಸಿನಿಮಾಗಳಲ್ಲಿ ಮಾತ್ರ ನಟಿಸುವೆ ಎನ್ನುವ ಪುಟಾಣಿ ಹರ್‍ಷಾಲಿ ಮಲ್ಹೋತ್ರಾಳಿಗೆ ನಾವು ನೀವು ಎಲ್ಲರೂ ಆಲ್ ದಿ ಬೆಸ್ಟ್ ಹೇಳುತ್ತಾ… ತನ್ನೆಲ್ಲ ಕನಸು ಕೈಗೂಡಲಿ ಎಂದು ಶುಭ ಹಾರೈಸೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...