Home / ಕವನ / ಕವಿತೆ / ಪರದೆಯ ಹಿಂದೆ

ಪರದೆಯ ಹಿಂದೆ

ದರ್‍ಗಾದ ಎರಡು ಘನ ಗಂಭೀರ
ಮೀನಾರುಗಳ ಮುಂದೆ ಸಾಲು ಸಾಲು ಮನೆಗಳು
ಬಾಗಿಲಿಗೆ ಕಟ್ಟಿದ ಗೋಣಿ ತಟ್ಟಿನ ಪರದೆಗಳು
ಬಣ್ಣಗಳಿಲ್ಲ ಚಿತ್ತಾರಗಳಿಲ್ಲ, ಭಣಗುಟ್ಟುವ
ಬದುಕನು ಸಾರಿ ಸಾರಿ ಹೇಳುತ್ತಿದ್ದವು.
ಹಬ್ಬ ಹುಣ್ಣಿಮೆ ಬಂದಾಗ ಒಳಬಾಗಿಲಿಗೆ
ಅಮ್ಮಿ ಕಟ್ಟುತ್ತಿದ್ದಳು ಕಸೂತಿ ಹಾಕಿದ ಚಿತ್ತಾರದ
ರಂಗುರಂಗಿನ ಬಾಗಿಲ ಪರದೆಗಳು.
ಅದಕ್ಕೆ ಇಳಿಬಿಟ್ಟ ಬಣ್ಣ ಬಣ್ಣದ ಕುಚ್ಚುಗಳು
ನಾನೂ ಕ್ರೋಶಾದಲಿ ಹೆಣೆಯುವಾಸೆ
ಬಣ್ಣ ಬಣ್ಣದ ದಾರಗಳ ಚಿತ್ತಾಕರ್‍ಷಕ ಪರದೆ
ನನಗೇನು ಗೊತ್ತಿತ್ತು ಮುಂದೊಂದು ದಿನ
ಈ ಪರದೆಯೇ ನನ್ನ ಮುಖಕ್ಕೆ
ಮರೆ ಮಾಡುವ ನಖಾಬ್ ಆಗುತ್ತದೆ ಎಂದು?

ಮೊದಲ ಬಾರಿ ಈ ಹಿಜಾಬು ಧರಿಸಿದಾಗ
ಶಕೆಯಿಂದ ಸಿಡಿಮಿಡಿಗೊಂಡು ತಲೆ ಸುತ್ತು ಬಂದು
ನನಗರಿವಿಲ್ಲದಂತೆಯೇ ಕಿತ್ತು ಬಿಸಾಕಿದ್ದೆ.
ಬುದ್ಧಿ ಹೇಳಿದ ಬಂಧು ಬಾಂಧವರು
ಇದು ನಮ್ಮ ಧರ್‍ಮದ ಪವಿತ್ರ ಉಡುಪು
ಬಿಡುವುದು ಅಲ್ಲಾಹನಿಗೆ ಸುತಾರಾಂ ಇಷ್ಟವಿಲ್ಲ.
ಮತ್ತೆ ಪರದೆಯ ಹಿಂದೆ ದೂಡಿದರು.
ಬುರ್‍ಖಾದ ಜಾಳಿಗೆ ನನ್ನ ಕಣ್ಣನ್ನು ಮುಚ್ಚಿದಾಗ
ಇಡೀ ಲೋಕವೇ ಕಪ್ಪಾಗಿ ಕಂಡಿತ್ತು.
ಸಾಕಿದ ಬೆಕ್ಕು, ನಾಯಿಗಳಿಗೆ ನೆರೆಹೊರೆಯವರಿಗೆ,
ಶಾಲೆಯ ಸೀತೆಗೂ ನಾನು ಅಪರಿಚಿತಳಾಗಿದ್ದೆ.
ಆಗ ಸಹಚರರೆಲ್ಲ ದೂರವಾದಂತೆ ಭಾಸವಾಗಿತ್ತು.
ನನ್ನ ಜಗತ್ತಿನಲಿ ಕತ್ತಲಾವರಿಸಿದಂತಾಗಿತ್ತು.
ಪರದೆ ನನ್ನ ಸುತ್ತಲೂ ಬೇಲಿ ತನ್ನಷ್ಟಕ್ಕೇ ನಿರ್‍ಮಿಸಿತ್ತು.

ರಕ್ಷಣೆಯ ಕ್ರೂರ ಪಹರೆಯ ಗೋಡೆ
ಬೇಸಿಗೆ ಬಿಸಿಲಿಗೆ ಬೆವರಿನ ತೊಪ್ಪೆ,
ಯಮಯಾತನೆಗೆ ಉಸಿರುಗಟ್ಟುವ ಹಿಂಸೆ.
ಪಹರೆ ಗೋಡೆಗಳ ಮಧ್ಯೆ ಚಹರೆ ಮುಸುಕಿನಲಿ
ಪರದೆ ಹೊದ್ದು ಮಾಂಸದ ಮುದ್ದೆಯಾಗಿದ್ದೆ.
ಜೀವಪೋಷಕ ಧಾತುವಿನ ಸತುವು ನಾನು
ಪೋಷಿಸಬಲ್ಲೆ ಲೋಕವನ್ನು ಸಾಯಿಸಲಾರೆ.
ಜೀವನದಿಯಾಗಿ ಹರಿದು ತಪ್ತ ಆತ್ಮಗಳಿಗೆ
ತಂಪನ್ನೆರೆದು ಅಮೃತ ಸಿಂಚನಗೈದಳು
ಶತಮಾನಗಳಿಂದ ಕಾದು ಕೆಂಪಾದ ಧರೆಗೆ
ಮಳೆಯ ಸಿಂಚನವಾಗಿ ತಣ್ಣಗಾಗಿಸಿದವಳು.
ನನಗೆ ಗೊತ್ತಿದೆ ಬದುಕುವುದು ಹೇಗೆಂದು
ನಿರ್‍ಬಂಧಗಳ ಸರಹದ್ದು ಮೀರುವುದು ಹೇಗೆಂದು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...