ನಲಿವಾಗಿರಲಿ ಸದಾ

ನುಡಿಯೊಳಗಣಾ ನಿನ್ನ ನುಡಿಯಲಿ
ಕನ್ನಡತನವು ನಲಿವಾಗಿರಲಿ ಸದಾ

ನಡೆಯೊಳಗಣಾ ನಿನ್ನ ನಡೆಯಲಿ
ಕನ್ನಡತನವು ಹಸಿರುಸಿರಾಗಿರಲಿ ಸದಾ

ನೀ ಹುಟ್ಟಿದ ಈ ಮಣ್ಣಿನ ಕಣ್ಣಾಗಿ ಜನುಮ
ಜನುಮಕೂ ನಿನ್ನ ಕೀರ್ತಿ ಬೆಳಗಲಿ ಹಣತೆಯಾಗಿ ಸದಾ

ದುರಭಿಮಾನದ ಕೊಳೆಯ ತೊಳೆದೊಗೆದು
ಮಾನಭಿಮಾನದ ಮಾನ್ಯತೆ ನೆಲೆಯಾಗಿರಲಿ ಸದಾ

ಜನ್ಮಭೂಮಿಯ ಕಣಕಣ ಕರುಳ ಬಳ್ಳಿ
ಧಮನಿ ಧಮನಿಯಲ್ಲೂ ಸ್ಥಿರತೆ ಕಾಣಗೈಯಲಿ ಸದಾ

ಬಂಧನಗಳ ಕಡು ಹಿಂಸೆ ಕಡಿವಾಣದ
ಸಲಾಕೆಗಳ ಬಿಚ್ಚೊಗೆದೊಗೆದು ಸದಾ

ನೋವು ನಲಿವ ನುಂಗಿತಾ ಬೇಸತ್ತ ಬಾಳಿಗೆ
ಹಸನಾಗಿ ಸುಧೆಯಾಗಿರಬೇಕು ನೀ ಸದಾ

ಧರ್ಮ ಕರ್ಮ ಎಂಬ ಕೈ ಗನ್ನಡಿ ಹಿಡಿದು ಭಾವನೆಗಳ
ಮುಷ್ಠಿಯಲಿ ಪುಷ್ಠಿಯಾಗಿರಬೇಕು ಬಾಳಿಗೆ ಸದಾ

ಕನ್ನಡತಾಯ ಮಡಿಲ ಮಣಿ ಮುತ್ತಾಗಿ
ನವಿರಾಗಿ ನಲಿಯುತ್ತಿರ ಬೇಕು ಕನ್ನಡ ಕಣ್ಮಣಿಯಾಗಿ ಸದಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತೇನು?
Next post ತಂದೆ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…