Home / ಕವನ / ಅನುವಾದ / ಮತ್ತೇನು?

ಮತ್ತೇನು?

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಜೊತೆಯಲ್ಲೋದುವ ಖಾಸಾ ಗೆಳೆಯರಿಗೆ ಅನಿಸಿತ್ತು
ಖ್ಯಾತನಾಗಿಯೆಬಿಡುವ ಈತ ಎಂದು.
ಅವನೂ ಹಾಗೇ ತಿಳಿದ, ನಿಯಮ ಬಿಡದೇ ನಡೆದ,
ಶ್ರಮಿಸುತ್ತಲೇ ಕಳೆದ ಹರೆಯವನ್ನು;
‘ಮತ್ತೇನು?’ ಹಾಡಿತು ಪ್ಲೇಟೋನ ಭೂತ, ‘ಮತ್ತೇನು, ಮತ್ತೇನು?’

ಜನತೆ ಓದಿತು ಅವನು ಬರೆದೆಲ್ಲವನ್ನೂ
ದುಡಿದ ಕೆಲದಿನದಲ್ಲೆ ತನ್ನೆಲ್ಲ ಅಗತ್ಯಕ್ಕೆ
ಸಾಕೆನಿಸುವಂತೆ ಕೈತುಂಬ ಹಣವನ್ನು
ಗೆಳೆಯರಾದರು ಆಗಬೇಕಾದಂಥವರೇ;
‘ಮತ್ತೇನು?’ ಹಾಡಿತು ಪ್ಲೇಟೋನ ಭೂತ, ‘ಮತ್ತೇನು, ಮತ್ತೇನು?’

ಸುಖದ ಕನಸುಗಳೆಲ್ಲ ನನಸಾಗಿ ಎಟುಕಿದವು.
ಪುಟ್ಟ ಹಳೆ ಮನೆ, ಮಡದಿ, ತಕ್ಕ ಮಗ, ಮಗಳು
ಮಾವು ಕೋಸುಗಳ ಹುಲುಸಾಗಿ ಬೆಳೆಯುವ ತೋಟ,
ಸುತ್ತ ನೆರೆದರು ಬುದ್ದಿಜೀವಿಗಳು, ಕವಿಗಳು
‘ಮತ್ತೇನು?’ ಹಾಡಿತು ಪ್ಲೇಟೋನ ಭೂತ, ‘ಮತ್ತೇನು, ಮತ್ತೇನು?’

ಮುದುಕನಾದಂತೆ ಅನಿಸಿತು, ‘ಎಲ್ಲ ನಡೆಯಿತು
ಹುಡುಗುತನದಲಿ ಕನಸಿದಂತೆ ನಾನು;
ಮೂರ್‍ಖರರಚಿದರೇನು, ನಾನು ಗುರಿಗೆಡಲಿಲ್ಲ
ಪರಿಪೂರ್‍ಣವಾಗಿಸಿದೆ ಸ್ವಲ್ಪವನ್ನು;’
ಮೊದಲಿಗಿಂತ ಭೂತ ಜೋರಾಗಿ ಹಾಡಿತು, ‘ಮತ್ತೇನು, ಮತ್ತೇನು?’
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...