ಹೊನ್ನ ಹುಡುಗಿ

ಬಿಳಿಹಳದಿ ತೆಳುವಾದ ಮಕಮಲ್ಲಿನುಡಿಗೆ
ಜುಳುಜುಳು ಕಳಕಳದೊಯ್ಯಾರ ನಡಿಗೆ
ಸವಿದೆರೆ ತಿಳಿನಗೆ ತೇಲುನೋಟ ಮುಗಿಲನೆಡೆಗೆ

ನೋವರಿಯದೇಕಾಂತದಾನಂದ ತೀರದಲಿ
ಸಂತೋಷಸಾಗರಲೀನ ಪ್ರಶಾಂತ ಕಾನನ
ಸಾವಿರದ ಸೆಲೆಯುಕ್ಕಿ ಹೊಳೆಯಾಗಿ ಹರಿದಿದೆ ಹರೆಯ
ನೆಲ-ಮುಗಿಲು ಮರ ತೆಮರು ಹುಲ್ಲು-ಹೊದರುಗಳನ್ನೆಲ್ಲ ತುಂಬಿತುಳುಕಿ
ಉಕ್ಕಿ ಹೊಮ್ಮಿದೆ ಪ್ರೇಮಸುಧೆಯ ಚೆಂಬೊನ್ನ ಚೆಲುವು

ಕಣಕಣದ ತುಟಿಗೂ ಬಂಗಾರಚುಂಬನ
ಕಂಡಕಂಡಲ್ಲೇಲ್ಲಾ ಕಡವರವ ಕಂಡರಸಿದಂತಿದೆ
ಚಿನ್ನಕನಸೇ ಮೂರ್ತಿಮಂತಾಗಿ ನಿಂತ ಹೊನ್ನ ಹುಡುಗೀ ಜೊನ್ನ ಬೆಡಗೀ
ನಿನ್ನ ಪಾದವ ಮುತ್ತಿಟ್ಟ ನಿರಿನಿರಿ ಸೀರೆಯನೇರಿ
ಹೂವರಳಿ ಕರೆವ ತನುಲತೆಯನೆಲ್ಲೆಡೆಯಪ್ಪಿ
ಒತ್ತಿ ಮುತ್ತಿಟ್ಟು ಸ್ವರ್ಣಪುಲಕವಾಂತಿದೆ ಹೊಂಬೆಳಕು
ಕೊರಳು ಬೆರಳು ಕೆನ್ನೆ ಕದಪು ತೊಂಡೆತುಟಿ ನೀಳ ನಾಸಿಕ
ಕೂದಲೆಳೆಯೆಳೆ ಮುಡಿಮಾಲೆಗಳಲೆಲ್ಲ ದುಂಬಿಯಾಡಿ
ರಸಸ್ರೋತದಲೋಲಾಡಿ ಆ ಬೆಳಕಿನಪ್ಪುಗೆಯಂತೆ
ಮತ್ತೇರಿ ತೇಲಿಹೋಗುವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ ಹರಿಯುತಿದೆ ಈ ನದಿ ಹೀಗೆ
Next post ಐಸುರ ಮೋರುಮ ದಸರೆಕ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

cheap jordans|wholesale air max|wholesale jordans|wholesale jewelry|wholesale jerseys