ಹೊನ್ನ ಹುಡುಗಿ

ಬಿಳಿಹಳದಿ ತೆಳುವಾದ ಮಕಮಲ್ಲಿನುಡಿಗೆ
ಜುಳುಜುಳು ಕಳಕಳದೊಯ್ಯಾರ ನಡಿಗೆ
ಸವಿದೆರೆ ತಿಳಿನಗೆ ತೇಲುನೋಟ ಮುಗಿಲನೆಡೆಗೆ

ನೋವರಿಯದೇಕಾಂತದಾನಂದ ತೀರದಲಿ
ಸಂತೋಷಸಾಗರಲೀನ ಪ್ರಶಾಂತ ಕಾನನ
ಸಾವಿರದ ಸೆಲೆಯುಕ್ಕಿ ಹೊಳೆಯಾಗಿ ಹರಿದಿದೆ ಹರೆಯ
ನೆಲ-ಮುಗಿಲು ಮರ ತೆಮರು ಹುಲ್ಲು-ಹೊದರುಗಳನ್ನೆಲ್ಲ ತುಂಬಿತುಳುಕಿ
ಉಕ್ಕಿ ಹೊಮ್ಮಿದೆ ಪ್ರೇಮಸುಧೆಯ ಚೆಂಬೊನ್ನ ಚೆಲುವು

ಕಣಕಣದ ತುಟಿಗೂ ಬಂಗಾರಚುಂಬನ
ಕಂಡಕಂಡಲ್ಲೇಲ್ಲಾ ಕಡವರವ ಕಂಡರಸಿದಂತಿದೆ
ಚಿನ್ನಕನಸೇ ಮೂರ್ತಿಮಂತಾಗಿ ನಿಂತ ಹೊನ್ನ ಹುಡುಗೀ ಜೊನ್ನ ಬೆಡಗೀ
ನಿನ್ನ ಪಾದವ ಮುತ್ತಿಟ್ಟ ನಿರಿನಿರಿ ಸೀರೆಯನೇರಿ
ಹೂವರಳಿ ಕರೆವ ತನುಲತೆಯನೆಲ್ಲೆಡೆಯಪ್ಪಿ
ಒತ್ತಿ ಮುತ್ತಿಟ್ಟು ಸ್ವರ್ಣಪುಲಕವಾಂತಿದೆ ಹೊಂಬೆಳಕು
ಕೊರಳು ಬೆರಳು ಕೆನ್ನೆ ಕದಪು ತೊಂಡೆತುಟಿ ನೀಳ ನಾಸಿಕ
ಕೂದಲೆಳೆಯೆಳೆ ಮುಡಿಮಾಲೆಗಳಲೆಲ್ಲ ದುಂಬಿಯಾಡಿ
ರಸಸ್ರೋತದಲೋಲಾಡಿ ಆ ಬೆಳಕಿನಪ್ಪುಗೆಯಂತೆ
ಮತ್ತೇರಿ ತೇಲಿಹೋಗುವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ ಹರಿಯುತಿದೆ ಈ ನದಿ ಹೀಗೆ
Next post ಐಸುರ ಮೋರುಮ ದಸರೆಕ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…