ಐಸುರ ಮೋರುಮ ದಸರೆಕ

ಐಸುರ ಮೋರುಮ ದಸರೆಕ                  ||ಪ.||

ವಾಸುಮತಿಯು ಆಡಿದವು ಅಲಾವಿಯ
ಮಹಾಶಕ್ತಿ ಪೂಜಿಸ್ಯಾಡುತ                  ||ಅ.ಪ||

ಜಾರತ ಕರ್ಮದ ವಾರಕ್ಕ
ಸಾರುತಿಹುದು ಸರ್ವರಿಗೆ ವಿಲಾಸದಿ
ಮೂರು ತಾರಕಿ ಕಿರಣದೊಳಗೆ                ||೧||

ಭಾರತ ಪುರಾಣ ಪಸರಕ್ಕೆ
ಪಾರಾದಿತು ಪರತೋಷ ಕತ್ತಲದಿನ
ಪೀರ ಪೈಗಂಬರ ಮಾರನೋಮಿ           ||೨||

ಹೀಗಾಯ್ತೋ ಕರ್ಬಲ ಸರಸಕ್ಕ
ಆಗ ಮೋದಲು ನೋಡುವದು ಕಿತಾಬದಿ
ಶೀಗಿಹುಣ್ಣಿವಿಗಿದು ಶೀಘ್ರದಿಂದ             ||೩||

ಬನ್ನಿಯ ಗಿಡದೊಳು ರನ್ನದಿ
ತನ್ನ ಶರಗಳಿಟ್ಟಂಥ ಧನಂಜಯ
ಮನ್ನಿಸಿ ಯಮನಾ ತೀರದೊಳಗೆ           ||೪||

ಹದಿನೆಂಟು ಜಾತಿಯ ಸದನಕ್ಕ
ನಜರಿಟ್ಟು ನಿಜ ಜ್ಞಾನದಿ ನೋಡಿಕೋ
ಕದನಹಚ್ಚಿ ಕಡಿದಾಡುವದಿದು           ||೫||

ಕಾತೂನರಾತ್ಮ ಜನಿಸರಕ್ಕ
ಭೂತಳದಲಿ ಶಿಶುನಾಳ ಶಾಹಿರತ್
ನೀ ತಿಳಿ ಕವಿತಾನಂದ ಕಲಿಗೆ           ||೬||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊನ್ನ ಹುಡುಗಿ
Next post ಬದುಕ ಪಯಣದಲ್ಲೊಂದು ಆಕಸ್ಮಿಕ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…