Home / ಕವನ / ಕವಿತೆ / ಯೌವನ

ಯೌವನ

ಹೇಳದೆ ಕೇಳದೆ ಓಡುತ ಬರುತಿದೆ ಯೌವನ ತಂತಾನೆ
ಲಂಗವನುಟ್ಟು ಕುಪ್ಪಸ ತೊಟ್ಟು ಬಹಳ ವೇಳೆಯಲಿ ಬರಿಮೈ ಬಿಟ್ಟು
ಇದ್ದ ಹುಡುಗಿಗೆಲ್ಲಿಂದ ಬಂತು ಈ ಸೊಬಗಿನಸೋನೆ ||೧||

ಕಾಳ ಮೇಘದಾಕಾಶದ ಕೇಶವು ಕಣ್ಣಿಗೆ ಕವಿಯುತಿದೆ
ಪುರುಷನ ಹೃದಯವು ಅದನ್ನು ಕಾಣುತ
ನವಿಲೊಲು ಕುಣಿಯುತಿದೆ ||೨||

ಕಣ್ಣಂಚಿನ ಆ ಮಿಂಚೇನೋ ಅದು
ಹಣ್ಣಿಗೆ ಬಂದಿಹ ಹೊಂಚೇನೊ
ಒಲುಮೆಯ ರಸವನು ಸುರಿಸುತ ಹರಿಸುತ
ಇನಿಯನ ಕೂಡಲು ಬರುತಲಿದೆ ||೩||

ಗಿರಿಗಳ ಮೇಲ್ಗಡೆ ನಾಚಿಕೆ ಮುಸುಕನು
ಎಳೆಯುವ ಸೆಳೆತವು ಬಲು ಮೋಡಿ
ಮಲೆಗಳ ಮೇಲಿನ ಬಲೆಯೇನೋ
ಎದೆ ಕಾಣದೆ ಮುಚ್ಚುವ ಕಲೆ ಏನೊ ||೪||

ಮೊದಲಿನಂತೆ ಬರಿ ಹುಡುಗಿ ಎಂದರೆ
ಆದೀತೇ ಚೆಲುವನು ನೋಡಿ
ಅಲ್ಲಿಂ ಬಯಲಿಗೆ ನಿರಿಯನು ಚಿಮ್ಮುತ
ಬರುತಿಹ ಒಯ್ಯಾರವ ನೋಡಿ ||೫||

ಹಳ್ಳಕೊಳ್ಳಗಳ ಕೆರೆಕಾಲುವೆಗಳ
ತಂಪಿನ ತಡಿಯಲಿ ಚೆನ್ನಾಟ
ನೀರಲಿ ಮಿಂದು ಕೂಡಲು ಚೆಲ್ಲಿ
ಕಣ್ಣು ಮಿಟುಕಿದೊಲು ಬಿಸಿಲಾಟ ||೬||

ಹಚ್ಚಹಸುರಿನ ಸೀರೆಯನುಟ್ಟು
ಚಂದಿರ ಚಿಕ್ಕೆಯ ಕುಂಕುಮ ಬೊಟ್ಟು
ಬಣ್ಣ ಬಣ್ಣಗಳ ಹೂವಿನ ಒಡವೆಯ
ಮಾಲೆ ಮಾಲೆಗಳ ಒಡನಾಟ ||೭||

ಕೈಮೈ ಡೊಂಕಿನ ಬೆಳಕಿನ ಬೆಡಗಿನ
ಛಂದವು ಬಂಧವು ಒಡಲಲ್ಲಿ
ಈಗಲೊ ಹರ್ಷದ ಪುಳಕವು ಚಿಮ್ಮಿದೆ
ಮೈಮೇಲೆಲ್ಲಾ ರಸವಲ್ಲಿ ||೮||

ಸಗ್ಗದ ಚೆಲುವಿನ ಭಂಡಾರ ಮೈ
ಗೊಂಡಿದೆ ಇನಿಯಳ ಸಿಂಗಾರ
ನವನವಯೌವನಶಾಲಿನಿ ಬಂದಳು
ಪುರುಷನ ವರಿಸುವ ಬಂಗಾರ ||೯||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...