Home / ಕವನ / ಕವಿತೆ / ಬೆಟ್ಟಪ್ಪ ಎದ್ದಾನ

ಬೆಟ್ಟಪ್ಪ ಎದ್ದಾನ

ಬೆಟ್ಟಪ್ಪ ಎದ್ದಾನ ಘಟ್ಟದ ಮ್ಯಾಲೆ
ಕಣ್ಣ ಮಿಟುಕಿಸಿ ಕಂಬಳಿ ಸರಿಸಿ

ಮೂಡಲ ಮನೆಯೊಳಗೆ ಸೂರಪ್ಪ ಆಗಲೆ
ಎದ್ದೆದ್ದು ಬೆಳಕ ಕಳಿಸ್ಯವನೆ
ಇನ್ನೀಗ ನಿದ್ದಿಲ್ಲ ಇನ್ನೀಗ ಕನಸಿಲ್ಲ
ಬೆಟ್ಟಪ್ಪ ತಲೆಯೆತ್ತಿ ಕುಂತವನೆ

ಮೋಡದ ಮರಿಗಳ ತಲೆ ತಡವಿ ಹೇಳ್ಯವನೆ
ಕುರಿಗಳ ಜತೆ ಹೋಗಿ ಆಡ್ಕೊಳ್ಳಿರೊ
ಇಂತಿವನು ಇನ್ನೇನು ದಿನವೆಲ್ಲ ಕುಂತಿರನು
ತಪಸು ಮಾಡೋನಂತೆ ನಟಿಸುತ್ತ

ತಪಸು ಮಾಡೋನಂತೆ ಬೆಟ್ಟಪ್ಪ ನಟಿಸುತ್ತ
ಅರ್‍ಧಕ್ಕೆ ಕಣ್ಮುಚ್ಚಿ ತೂಕಡಿಸಿ
ಸೂರಪ್ಪ ಮಹರಾಯ ಬೇಗನೆ ಹೋಗಪ್ಪ
ಹಕ್ಕಿಗಳು ಬಂದಾವ ಕರೆಯೋದಕ್ಕೆ

ಬೆಟ್ಟಪ್ಪ ಕಾಯ್ತಾನೆ ಸಂಜಿಯಾಗೋದನ್ನೆ
ಸಂಜ್ಯಾದ ತಕ್ಷಣ ಕಂಬಳಿಯೆಳೆದು
ಕಂಬಳಿಯಲ್ಲಿದ್ರೆ ಮಂಜಾದ್ರೂ ಆಯಿತು
ಮಂಜನ್ನೆ ಮೈಮೇಲೆ ಎಳಕೊಂಡು

ಅಡಗಿದ್ದ ಕನಸುಗಳು ಧುಮ್ಮೆಂದು ಬೀಳ್ತಾವೆ
ದೂಡ್ಕೊಂಡು ಹಿಡಕೊಂಡು ತಬ್ಕೊಂಡು
ತಪ್ಪಲಲಿ ಕುರಿಗಳು ತೆಪ್ಪದಲಿ ಅಂಬಿಗ
ನೀರಲ್ಲಿ ಚಂದ್ರ ಬಿದ್ದು

ನಾವಿನ್ನು ಬೆಟ್ಟಪ್ಪ್ನ ಅವನಷ್ಟ್ಕೆ ಬಿಟ್ಟು
ನಮ್ಮಷ್ಟ್ಕೆ ಚದ್ದರ ಹೊದ್ದು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...