Home / ಕವನ / ಕವಿತೆ / ಇದಾರ ಮನಸು

ಇದಾರ ಮನಸು

ಇದಾರ ಮನಸು ಉದಾರ ಮನಸು
ಕನಸುಗಳ ಹೊಸೆಯಿತೊ
ಚಿತ್ರ ಬರೆದು ಬಣ್ಣ ಹಚ್ಚಿ
ಮೂಡುವ ಮೊದಲೆ ಅಳಿಸಿತೊ

ಇದಾರ ಮನಸು ಉದಾರ ಮನಸು
ಭಾವನೆಗಳ ಭಾವಿಸಿತೊ
ಪ್ರೀತಿಯೆಂದು ಕರುಣೆಯೆಂದು
ಕಣ್ಣ ತುಂಬ ತುಂಬಿತೊ

ಇದಾರ ಮನಸು ಉದಾರ ಮನಸು
ಕುಲ ಕೋಟಿಯ ಕಲ್ಪಿಸಿತೊ
ಒಂದರಂತೆ ಒಂದಿರದ ಎಂದೂ ಆವರ್‍ತಿಸದ
ವೈವಿಧ್ಯವ ವಿಧಿಸಿತೊ

ಇದಾರ ಮನಸು ಉದಾರ ಮನಸು
ಕಾಲ ಗತಿಯನಣೆಸಿತೊ
ಇಂದು ನಿನ್ನೆ ನಾಳೆಯೆಂದು
ಅನಂತತೆಯನೆ ಮಣಿಸಿತೊ

ಇಧಾರ ಮನಸು ಉದಾರ ಮನಸು
ಸೌಂದರ್‍ಯವ ಸುರಿಸಿತೊ
ಹಗಲಿನಲ್ಲು ಇರುಳಿನಲ್ಲು
ಭೂವ್ಯೋಮವ ಸ್ಫುರಿಸಿತೊ

ಇದಾರ ಮನಸು ಉದಾರ ಮನಸು
ಮಾಧುರ್‍ಯವ ಹರಡಿತೊ
ಹೆಜ್ಜೆಯಲ್ಲು ಗೆಜ್ಜೆಯಲ್ಲು ಆಲಿಸುವೊಡೆ ನಿದ್ದೆಯಲ್ಲು
ನಾದ ಲಹರಿ ಹರಿಸಿತೊ

ಇದಾರ ಮನಸು ಉದಾರ ಮನಸು
ತನ್ನ ತಾನು ಮರೆಸಿತೊ
ಮನಸೆಂಬುದ ಮನುಷ್ಯನಿಗಿತ್ತು
ನಿಗೂಢತೆಯಲಿ ಇರಿಸಿತೊ
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...