ರುದ್ರನೋಟ

ಮುಗ್ಧ ಮಾನವನು ಭಕ್ತಿ ಗೈಯುವಾಗ
ಮಾರಣ ಹೋಮ ಮಾಡುವುದು ಶೋಭೆಯೆ!
ಇಂಚು ಇಂಚು ಭಾವಗಳಿಂದ ಜೀವಿಸುವಾಗ
ನೀವುರುದಿರ ಚಲ್ಲಾಟವಾಡುವುದು ಯೋಗ್ಯಯೆ!!

ಬಹಿರಂಗದಲಿ ಮನಸು ಬತ್ತಲೆ ಗೊಳಿಸಿ
ಕುಣಿಯುವ ನೀವು ಬಾಳು ಮೋಜೆಂದಿರಾ!
ದುರಾಶೆ, ದುಸ್ಸಹಾಸಗಳಲಿ ಮರೆಯುವ ನೀವು
ಕ್ರೂರ, ದುಷ್ಟತೆಗಳೇ ಪೂಜೆಯೆಂದಿರಾ!!

ದುರಾಲೋಚನೆಯೊಂದೆ ಕಷ್ಟಕಿಡುವುದು
ಮೊಸವೊಂದೆ ನಮಗೆ ಪತನ ಕೆಳೆವುದು
ಆದರೆ ಗುಂಡಿಟ್ಟು ನೀವು ಹತ್ಯೆ ಮಾಡಿದವರು
ತಪ್ಪಿದಲ್ಲ ಕರ್‍ಮ ನಿಮಗೆ ನರಕಕ್ಕಳೆವುದು

ಮನಕ್ಕೆ ನೋವುಂಟು ಮಾಡುವುದೆ ಪಾಪ
ಆದರೇನು! ನಿಮ್ಮ ಚಿತ್ರ ಹಿಂಸೆಗೆ ಲೆಕ್ಕವೆ
ಜನ್ಮ ಜನ್ಮಗಳಿಗೂ ಹತ್ಯೆಗೊಳಗಾಗುವಿರಿ
ನಿಮ್ಮ ಪಾಲಿಗೆ ನಿತ್ಯವು ದುಕ್ಕದುಕ್ಕವೆ

ದೇವನು ಸೃಷ್ಟಿಸಿದ ಈ ಧರಿತ್ರಿಯು
ಎಲ್ಲರ ಪಾಲಿನ ಇದು ಹೂದೋಟ
ಈ ಹೂದೋಟಕ್ಕೆ ಹಾಳಾಗಿಸುವ ನಿಮಗೆ
ಮಾಣಿಕ್ಯ ವಿಠಲನ ರುದ್ರನೋಟ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೨೬
Next post ಮಲ್ಲಿ – ೪

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…