ಶುದ್ಧ ಮನಾತ್ಮ

ಬದುಕಿನ ಯಾವುದೇ ಕ್ಷಣಗಳಿರಲಿ
ಮನವುನೊಂದು ಘಾಸಿಗೊಂಡಿರಲಿ
ಆದರೆ ಮನವನ್ನು ಓಲೈಸಲು ನಿ
ಕೆಟ್ಟದಕ್ಕಾಗಿ ಪದರು ಹಾಸದಿರಲಿ

ಮನದಲಿ ನಿರ್‍ಧಾರವೇ ಅಚಲವಾಗಿರಲಿ
ಏಕೆಂದರೆ ಮನವು ನಿನ್ನದಲ್ಲವೇ
ನೀ ನಾಡಿದ ಮಾತು ಪಾಲಿಸಬೇಕೆಂದು
ಮನಕ್ಕೆ ಆಜ್ಞೆಯ ನೀಡುವುದಿಲ್ಲವೆ!

ಕೆಟ್ಟ ಆಲೊಚನೆ ಮನದಲ್ಲಿದ್ದಾಗ
ತನುವ ದಂಡಿಸಿ ಮನಕ್ಕೆ ಶಿಕ್ಷಿಸು
ಅತ್ತ ಇತ್ತ ಸುಳಿದು ಪಾಪಿಯಾಗದಂತೆ
ಮನಕ್ಕೆ ನಿತ್ಯವು ನೀನು ರಕ್ಷಿಸು

ಮನವ ತಿದ್ದಲು ಕಟುಕನಾಗು
ಮನಕ್ಕೆ ತಿಳಿಸಲು ಗುರುವಾಗು
ಹೆಜ್ಜೆ ಹೆಜ್ಜೆ ನಿನ್ನ ಕರ್‍ಮಗಳಿಗೆಲ್ಲ
ಕಾರಣವಾಗುವ ಮನಕ್ಕೆ ದಾರಿಯಾಗು

ಇಂದ್ರಿಯ ಚಪಲದಿ ಮನವ ಥಳಿಸಿ
ಪರಮಾತ್ಮನ ಪಾದಕ್ಕೆ ನಮನ ಪಡಿಸು
ಮನವು ಶುದ್ಧವಾಗಿ ಆತ್ಮವಾಗಲು
ಮಾಣಿಕ್ಯ ವಿಠಲನಾಗಿ ಹೆಜ್ಜೆ ಇರಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೪
Next post ಪಾಪಿಯ ಪಾಡು – ೧೭

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys