ಶುದ್ಧ ಮನಾತ್ಮ

ಬದುಕಿನ ಯಾವುದೇ ಕ್ಷಣಗಳಿರಲಿ
ಮನವುನೊಂದು ಘಾಸಿಗೊಂಡಿರಲಿ
ಆದರೆ ಮನವನ್ನು ಓಲೈಸಲು ನಿ
ಕೆಟ್ಟದಕ್ಕಾಗಿ ಪದರು ಹಾಸದಿರಲಿ

ಮನದಲಿ ನಿರ್‍ಧಾರವೇ ಅಚಲವಾಗಿರಲಿ
ಏಕೆಂದರೆ ಮನವು ನಿನ್ನದಲ್ಲವೇ
ನೀ ನಾಡಿದ ಮಾತು ಪಾಲಿಸಬೇಕೆಂದು
ಮನಕ್ಕೆ ಆಜ್ಞೆಯ ನೀಡುವುದಿಲ್ಲವೆ!

ಕೆಟ್ಟ ಆಲೊಚನೆ ಮನದಲ್ಲಿದ್ದಾಗ
ತನುವ ದಂಡಿಸಿ ಮನಕ್ಕೆ ಶಿಕ್ಷಿಸು
ಅತ್ತ ಇತ್ತ ಸುಳಿದು ಪಾಪಿಯಾಗದಂತೆ
ಮನಕ್ಕೆ ನಿತ್ಯವು ನೀನು ರಕ್ಷಿಸು

ಮನವ ತಿದ್ದಲು ಕಟುಕನಾಗು
ಮನಕ್ಕೆ ತಿಳಿಸಲು ಗುರುವಾಗು
ಹೆಜ್ಜೆ ಹೆಜ್ಜೆ ನಿನ್ನ ಕರ್‍ಮಗಳಿಗೆಲ್ಲ
ಕಾರಣವಾಗುವ ಮನಕ್ಕೆ ದಾರಿಯಾಗು

ಇಂದ್ರಿಯ ಚಪಲದಿ ಮನವ ಥಳಿಸಿ
ಪರಮಾತ್ಮನ ಪಾದಕ್ಕೆ ನಮನ ಪಡಿಸು
ಮನವು ಶುದ್ಧವಾಗಿ ಆತ್ಮವಾಗಲು
ಮಾಣಿಕ್ಯ ವಿಠಲನಾಗಿ ಹೆಜ್ಜೆ ಇರಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೪
Next post ಪಾಪಿಯ ಪಾಡು – ೧೭

ಸಣ್ಣ ಕತೆ

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…