Home / ಕವನ / ತತ್ವಪದ / ಶುದ್ಧ ಮನಾತ್ಮ

ಶುದ್ಧ ಮನಾತ್ಮ

ಬದುಕಿನ ಯಾವುದೇ ಕ್ಷಣಗಳಿರಲಿ
ಮನವುನೊಂದು ಘಾಸಿಗೊಂಡಿರಲಿ
ಆದರೆ ಮನವನ್ನು ಓಲೈಸಲು ನಿ
ಕೆಟ್ಟದಕ್ಕಾಗಿ ಪದರು ಹಾಸದಿರಲಿ

ಮನದಲಿ ನಿರ್‍ಧಾರವೇ ಅಚಲವಾಗಿರಲಿ
ಏಕೆಂದರೆ ಮನವು ನಿನ್ನದಲ್ಲವೇ
ನೀ ನಾಡಿದ ಮಾತು ಪಾಲಿಸಬೇಕೆಂದು
ಮನಕ್ಕೆ ಆಜ್ಞೆಯ ನೀಡುವುದಿಲ್ಲವೆ!

ಕೆಟ್ಟ ಆಲೊಚನೆ ಮನದಲ್ಲಿದ್ದಾಗ
ತನುವ ದಂಡಿಸಿ ಮನಕ್ಕೆ ಶಿಕ್ಷಿಸು
ಅತ್ತ ಇತ್ತ ಸುಳಿದು ಪಾಪಿಯಾಗದಂತೆ
ಮನಕ್ಕೆ ನಿತ್ಯವು ನೀನು ರಕ್ಷಿಸು

ಮನವ ತಿದ್ದಲು ಕಟುಕನಾಗು
ಮನಕ್ಕೆ ತಿಳಿಸಲು ಗುರುವಾಗು
ಹೆಜ್ಜೆ ಹೆಜ್ಜೆ ನಿನ್ನ ಕರ್‍ಮಗಳಿಗೆಲ್ಲ
ಕಾರಣವಾಗುವ ಮನಕ್ಕೆ ದಾರಿಯಾಗು

ಇಂದ್ರಿಯ ಚಪಲದಿ ಮನವ ಥಳಿಸಿ
ಪರಮಾತ್ಮನ ಪಾದಕ್ಕೆ ನಮನ ಪಡಿಸು
ಮನವು ಶುದ್ಧವಾಗಿ ಆತ್ಮವಾಗಲು
ಮಾಣಿಕ್ಯ ವಿಠಲನಾಗಿ ಹೆಜ್ಜೆ ಇರಿಸು
*****

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...