ಮುಳ್ಳು

ಧ್ಯಾನ ಧ್ಯಾನ ನಿನ್ನ ದಿವ್ಯಧ್ಯಾನ
ನಿನ್ನೊಂದೆ ಸ್ಮರಣಿ ನನ್ನ ಜ್ಞಾನ
ಬಣ್ಣ ಬಣ್ಣದ ನೋಟ ಎನಿತೆನಿತು
ಬೆಂಕಿ ಕಿಡಿಗಳಾಗಿ ಬಾಳಿನ ಅಜ್ಞಾನ

ಹುಡುಕಾಟ ಹುಡುಕಾಟ ನಿತ್ಯವು
ಯಾವುದನ್ನು ಪಡೆಯಲೊ ಕಾತರ
ಅನೇಕ ಜನುಮಗಳ ಸ್ವಾನುಭವ ಮನಕ್ಕೆ
ಅಂತಲೆ ಚಂಚಲ ಅತೀ ಆತುರ

ಬಹಿರ್‍ಮುಖ ಇಂದ್ರಿಯಗಳು ಬಯಲು
ಸೌಖ್ಯದ ದಾರಿಯಡೆಗೆ ನಿತ್ಯ ಅಹವಾಲು
ನೆಮ್ಮದಿ ಸುಖವು ಆರೆಸಿದವರಾಯ್ತು
ಅಷ್ಟೇ ಪಾಪವು ಬುತ್ತಿ ಗಂಟಾಯ್ತು

ನಿನ್ನೊಳಗೆ ಇಣಕದೆ ಸುತ್ತಿದರೇನು
ಭೂಮಿ ಫಲವತ್ತಾಗಿ ಬೀಜವಿಲ್ಲದಡೇನು
ಭೂಮಿ ಬಿಜ ಇದ್ದು ಬಿತ್ತದಿದ್ದೇನು
ಬಾಳೇ ವ್ಯರ್‍ಥವು ಆಗಲಾರದೇನು!

ನಿನಗೆ ಹೇಳದೆ ಬರುವ ಮೃತ್ಯು
ಯಾವ ಕ್ಷಣದಲ್ಲೊ ನಿನ್ನ ನಾಶಪಡಿಸದೇನು
ಆಚೆ ತಳ್ಳು ಕ್ರಾಮಕ್ರೋಧದ ಮುಳ್ಳು
ಮಾಣಿಕ್ಯ ವಿಠಲನೆ ನಿನ್ನೊಳಗಿನ ಜೇನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೧
Next post ಪಾಪಿಯ ಪಾಡು – ೧೪

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…