ಮುಳ್ಳು

ಧ್ಯಾನ ಧ್ಯಾನ ನಿನ್ನ ದಿವ್ಯಧ್ಯಾನ
ನಿನ್ನೊಂದೆ ಸ್ಮರಣಿ ನನ್ನ ಜ್ಞಾನ
ಬಣ್ಣ ಬಣ್ಣದ ನೋಟ ಎನಿತೆನಿತು
ಬೆಂಕಿ ಕಿಡಿಗಳಾಗಿ ಬಾಳಿನ ಅಜ್ಞಾನ

ಹುಡುಕಾಟ ಹುಡುಕಾಟ ನಿತ್ಯವು
ಯಾವುದನ್ನು ಪಡೆಯಲೊ ಕಾತರ
ಅನೇಕ ಜನುಮಗಳ ಸ್ವಾನುಭವ ಮನಕ್ಕೆ
ಅಂತಲೆ ಚಂಚಲ ಅತೀ ಆತುರ

ಬಹಿರ್‍ಮುಖ ಇಂದ್ರಿಯಗಳು ಬಯಲು
ಸೌಖ್ಯದ ದಾರಿಯಡೆಗೆ ನಿತ್ಯ ಅಹವಾಲು
ನೆಮ್ಮದಿ ಸುಖವು ಆರೆಸಿದವರಾಯ್ತು
ಅಷ್ಟೇ ಪಾಪವು ಬುತ್ತಿ ಗಂಟಾಯ್ತು

ನಿನ್ನೊಳಗೆ ಇಣಕದೆ ಸುತ್ತಿದರೇನು
ಭೂಮಿ ಫಲವತ್ತಾಗಿ ಬೀಜವಿಲ್ಲದಡೇನು
ಭೂಮಿ ಬಿಜ ಇದ್ದು ಬಿತ್ತದಿದ್ದೇನು
ಬಾಳೇ ವ್ಯರ್‍ಥವು ಆಗಲಾರದೇನು!

ನಿನಗೆ ಹೇಳದೆ ಬರುವ ಮೃತ್ಯು
ಯಾವ ಕ್ಷಣದಲ್ಲೊ ನಿನ್ನ ನಾಶಪಡಿಸದೇನು
ಆಚೆ ತಳ್ಳು ಕ್ರಾಮಕ್ರೋಧದ ಮುಳ್ಳು
ಮಾಣಿಕ್ಯ ವಿಠಲನೆ ನಿನ್ನೊಳಗಿನ ಜೇನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೧
Next post ಪಾಪಿಯ ಪಾಡು – ೧೪

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys