ಮಗುವಿಗೆ…

ಮಗೂ
ಯಾವುದೇ ಕಾರಣಕ್ಕೂ
ಮೂಗು ಉದ್ದ
ಬೆಳೆಯೆಬಿಡಬೇಡ
ಸೀದಿದ್ದು, ಸಿಟ್ಟಿದ್ದು, ಕೆಟ್ಟಿದ್ದು
ವಾಸನೆ ಬಡಿದರೆ ಮೂಗಿಗೆ
ಮೂಗು ಮುಚ್ಚಿಕೋ
ಮೂಲ ಹುಡುಕ ಹೋಗಬೇಡ.

ಇವರು ಬೆಳಕಿನ ಮಂದಿ
ಸೂರ್ಯನೇ ಇವರ ದೊಂದಿ
ಕೆಟ್ಟ ಕುತೂಹಲಕ್ಕೆ.
ದಿಟ್ಟಿಸಿ ನೋಡಬೇಡ
ಪ್ರಖರ ಬೆಳಕಿಗೆ ಸುಟ್ಟುಹೋದೀಯಾ
ನೋಡಿದರೂ ನೋಡದಂತಿರುವುದೇ
ಜಾಣರ ಲಕ್ಷಣ
ಕೈ ತೋರಿಸಿ ಆಗಬೇಡ ಅವಲಕ್ಷಣ.

ಉಪ್ಪು, ಹುಳಿ, ಕಾರ
ಸಮವಿಲ್ಲವೆಂದು ಗೊಣಗಬೇಡ
ನಾಲಿಗೆ ನಿನ್ನದೇ
ರುಚಿ – ಅರುಚಿ
ಬಡಿಸುವವನ ಹಕ್ಕು
ಟೀಕಿಸಲು ನಿನಗೆಂಥಾ ಸೊಕ್ಕು.

ಮುಚ್ಚಳಗಳಿಲ್ಲದ ಕಿವಿಗೆ
ಏನೂ ಬಂದುಬೀಳುತ್ತದೆ
ಬರಿಗಾಳಿ,  ಧೂಳು, ಹಾಳು – ಮೂಳು
ಬೇಕೋ – ಬೇಡವೋ
ಬಂಧಿಸಿ ಓಳಗೇ ಇರಿಸು
ಹೊರ ಹಾರಿ ಹೋಗದಂತೆ ಎಚ್ಚರವಹಿಸು

ಮಗು ಇಲ್ಲಿ
ತಿಳಿದೂ ತಿಳಿಯದವರಂತಿರಬೇಕು
ಇದ್ದರೂ ಇರದಂತಿರಬೇಕು
ಬದುಕಿಯೂ ಸತ್ತಂತಿರಬೇಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಿಗಳೆಗಳು
Next post ಹುಟ್ಟಿದರೆ ಸಾಬರ ಜಾತೀಲಿ ಹುಟ್ಟಬೇಕು

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys