ಯೆಂಡದ್ ತೊಂದ್ರೆ

 

ಬಿಟ್ಟಿದ್ದೆ ಯೆಂಡ ಅಲ್ಲಿ-
ನೆಟ್ಗೆ ಬಂದೆ ಇಲ್ಲಿ.
ಎಲೇಲೇಲೇ ರಸ್ತೆ!
ಯೇನು ಅವ್ವೆವಸ್ತೆ!
ಮೈ ಕೈ ಯೆಲ್ಲ ಮುದರಿ
ಯಾಕೇ ಕುಣೀತಿ ಕುದರಿ?
ಕೊಟ್ಟೆ ಯಲ್ಲ ಗಸ್ತು!
ಕುಡಿದ್ದೀಯ ರಸ್ತೆ!

ಚಂದ್ರನ್ ಮುಕವೇಕ್ ಸೊಟ್ಟು?
ಅದ್ದು! ಬಲಗಣ್ ಛಟ್ಟು!
ಉಳ್ದಿರೋ ಎಡದಾಗಣ್ಣು
ಯೆಚ್ಚಿದ್ ಲಿಂಬೇ ಅಣ್ಣು!
ಏನೋ ಚಂದ್ರ! ಪೆಂಗೆ!
ನಾಚ್ಕೆ ಇಲ್ವೆ ನಿಂಗೆ!
ಕೆಟ್ಟವರ್ ಕುಡಿತಾರ್ ಅಂದ್ರೆ
ನಿಂಗ್ಯಾಕ್ ಎಂಡದ್ ತೊಂದ್ರೆ?

ನೋಡ್ ಅಲ್ಲ್ ಬೀದಿ ದೀಪ-
ಗಿರ್‍ಕಿ ವೊಡೀತ್ ಪಾಪ!
ತಿರ್ ತಿರ್ ತಿರ್ ತರ್ ತಿರ್‍ಗ್ತಾ
ತೂರಾಡ್ತದೆ ತೂಗ್ತಾ!

ಇಲ್ಲ್ ಇರೋ ಒಂದಕ್ಕಾನ
ಸೋದೀನ್ ಇಲ್ಲ ಗ್ನಾನ!
ಸಾಲಾಗ್ ನಿಂತವೆ ನಟ್ಟು-
ಯೆಂಡ ಕುಡದ್ಬುಟ್ಟು! ೩

ದೊಡ್ದು ಚಿಕ್ದು ಎಲ್ಲಾ-
ನೋಡ್ದ ಅವಗೊಳ್ ಗುಲ್ಲ!
ಇವರು ಕುಡದೊರ್ ಮದ್ಧ
ನಂಗೆ ಮಾತ್ರ ಸುದ್ಧ!
ಯೆಂಡ ಕುಡದೊರ್ ನಡಮೆ
ನಮಗೆ ಮಾನಕ್ ಕಡಮೆ!
ಯೆಂಡದ್ ಅಂಗಡೀಗಾನ
ಅದಕೇ ಇಂತಿರಗೋನ! ೪
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾಟಘರಸಾಗರ
Next post ವಸ್ತುಮಧ್ಯ: ಆದಿ ಅಂತ್ಯಗಳ ನಡುವೆ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys