ಹರವಣ ಗುರುವಣ ಬಲಗೊಂಬೆ

(ಶುಗ್ಗಿ ಕಟ್ಟೇಲಿ ಸುಗ್ಗಿ ಯೇಳಿಸುವಾಗ, ಮುಗಿಸುವಾಗ ಹೇಳೊ ಪದ)

ಹರವಣ ಗುರುವಣ ಬಲಗೊಂಬೆ
ಗುರವಣ ಗುರಪಾದಕೆ ಸರಣು || ೧ ||

ನನಮುನಗಮು ಮಾನೋ ಗೆಲ್ಲಾ
ನಂದಾಸೇತಿ ಪುಣ್ಣಿದಿಂದ || ೨ ||

ಹುಟ್ಟಪಾಪ ಪರಿಹಾರಂದ
ಸಲವನ ದೇವನೆ ಸಿಲವನಗೊಂಬ || ೩ ||

ಸಾರಂದೇವ್ರು ಕಾರನದಿಂದ
ಬಂದಾನಾಯೈನ ಕಾರನದಿಂದ || ೪ ||

ಚೆನ ಮೆನ ನನ ಮೇನ್ ಉಂಡ್ಲೆ ಕೋಳು
ಶಿವೂರ ಮಗಬೇನ್ ಕೊಳಬೈನಂದಾ || ೫ ||

ನಂದಾಸೀತಿ ಪುಣ್ನಾದಿಂದಾ
ಹುಟ್ದ ಪಾಪ ಪರಿಹಾರೆಂದ || ೬ ||

ಕೋಳೊಂದೆರಡು ಕಡದೀ ತಂದೀ
ಹಾಸರಬೀಸರ ಕೆಲ್ಗೆ ಕೋಲುಲ್ ಹೊಯ್ದಾರೆ || ೭ ||

ಪಾಂಡವ್ರ ಮಕಲು ಕುಂಚವೊಲೈ
ನಾರಂದೇವ್ರ ಕಾರಣದಿಂದಾ || ೮ ||

ಬಂದಾನಾಯ್ಕನ ಕಾರಣದಿಂದಾ
ಚೆನ ಮನ ನನ ಮೇನ್ ಉಂಡ್ಲೆ ಕೋಳು || ೯ ||

ದೇವದೇವರೂ ಹರಗಿರ ಕೋಳು
ನಂದಾಸೀತೆ ಪುಣ್ಯದಿಂದಾ || ೧೦ ||

ಹುಟ್ದಾ ಪಾಪ ಪರಿಹಾರಂದಾ
ಶೀತಾರಾಮನ ಪುಣ್ಯಾದಿಂದಾ || ೧೧ ||

ಹಾಸರಬೀಸರ ಗಿರಿಯಲ್ ಕಟ್ಟಿ
ಹುಟ್ದಲ್ ಮೆಟ್ದಲ್ ಸರ್ಪನ ಬಾನ || ೧೨ ||

ಯೆತ್ತರ ಸತ್ತರ ಕಾಕೀ ನಿನ್ನಾ
ಕಾಕೀ ನಂದಾ ನಾಡನಂದಾ || ೧೩ ||

ಬಾಡದ ಕಾಕೇ ಕಣಿಮನ ಕಪ್ಪು
ಹನಮಂತ ಹನ್ಮದ ರಕ್ಸಾನಂದ || ೧೪ ||

ಹೊಣ್ಣಾರ ಹನಮನ ತೇಮಾನಂದಾ
ವಂದಂಬ ಗೆರಿಯ ಬರದೇ ನಂದಾ || ೧೫ ||

ಗೆರಿಯ ದಾಟಿ ಹೋ ಗಬೇಡಂದಾ
ಯೆರಡಂಬ ಸೆರಿಯ ಬರದೇನಂದಾ || ೧೬ ||

ಮೂರಂಬ ಗೆರಿಯ ಬರದೇನಂದಾ
ಗೆರಿಯ ದಾಟಿ ಹೋಗಬೇಡಂದಾ || ೧೭ ||

ಯೆರಡಂಬ ಸೆರಿಯ ಬರದೇನಂದಾ
ಮೂರೆಂಬ ಗೆರಿಯ ಬರದೇನಂದಾ || ೧೮ ||

ಗೆರಿಯ ದಾಟಿ ಹೋ ಗಬೇಡಾಂದಾ
ಬೇವೋನಾಗಿ ಬಿದ್ರೊ ಬಾವಾ || ೧೯ ||

ಬಿಲಿಮನ ಬಿಲ್ಲಿಂದ ಹೊಡೆದಾ ನೋಡು
ಮಿಗನ ಬನಕೇ ಹೋದೋ ನೋಡೂ || ೨೦ ||

ವಂದೆಂಬ ಬಾನ್ದಲ್ ಹೊಡದ್ನೋ ನೋಡು
ಆ ಬಾನವಿಲಾ ಆಕಾಸ್ಕೆ ಹೋಯ್ತು || ೨೧ ||

ಮತ್ತೊಂದ್ ಬಾನಾ ಹೊಡ್ದಾ ನೋಡೂ
ಲಾ ಬಾನಾ ಪಾತಾಲ್ಕೆ ಹೋಯ್ತು || ೨೨ ||

ಮತ್ತಂದ ಬಾನಾ ಹೋಡ್ದಾ ನೋಡು
ಕೋಡ್ನ ಮರ್‍ಗಗಲು ಬಿದ್ದೋ ನೋಡು

ಪಕ್ಕರ ಪಕ್ಕರ ಆಮಟ್ಟಗಾರಗೆ
ಪಕ್ಕರ ಪಕ್ಕರ ಹರದೂ ಬಾಣಾ || ೨೪ ||

ಕಲ್ಲೂ ಹಾಂದಿಗಳು ಹಯದೋ ನೋಡು
ಹೊಣ್ಣಾರ ಹನ್ಮಂತ ತೇಮಾನಂದಾ || ೨೫ ||

ಕಲ್ಲದ ಕೈಕರ ಬಲವೆನಂದಾ
ಕಲ್ಲರ ಗುತ್ತಾ ಬಲ್ಲೇನಂದಾ || ೨೬ ||

ಊಸಡುಂಗ್ಲ ಕೈಲ್ ಕೊಟ್ಟ
ದರ್ಬೆವಳ ಮಂತ್ರನೆ ಕಂಡೀ
ಒಡ್ಲಕ್ಕೇ ಪಡ್ಲಕ್ಕೇನಂದಾ || ೨೭ ||

ಶೀತೇರಾಮರ ಪಾಳಗದಿಂದಾ
ಶೀತೇ ಕಟ್ಕಂಡ ಕಡಿಬೇಕಂದ || ೨೮ ||

ಹೇಲ ಸಂಗ್ರ ಮಾಡಬೇಕಂದಾ
ಕೋಜ ಬುತ್ತೀ ಕಟ್ಟೆನಂದಾ || ೨೯ ||

ಕೈಲ ಕತ್ತಿ ತಾರೇನಂದಾ
ಶೀತೆ ಕಟ್ಕಂದ ಕಡ್ದೇನಂದಾ || ೩೦ ||

ಶೀತೇ ತಕ್ಕಂಡ ಇಲ್ಲೇ ಬಂದಾ
ಹೋ ರಾಮಣ್ಣಾ ರಾಯರ ಪಾದಕ ಬಿದ್ದಣ್ಣ || ೩೧ ||
*****
ಹೇಳಿದವರು: ನಾಗಪ್ಪ ಶಿವಪ್ಪ ಗೌಡ, ತಲಗೊಡು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಸಿನಾಸೆ ತೋರಿಸಿ ಬಡವಾದ ಕೃಷಿಯನುಳಿಸಲುಂಟೇ?
Next post ಬಿಳಿಗಿರಿಯವರ ವರಸೆಗಳು

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys