Home / ಕವನ / ಕೋಲಾಟ / ಹರವಣ ಗುರುವಣ ಬಲಗೊಂಬೆ

ಹರವಣ ಗುರುವಣ ಬಲಗೊಂಬೆ

(ಶುಗ್ಗಿ ಕಟ್ಟೇಲಿ ಸುಗ್ಗಿ ಯೇಳಿಸುವಾಗ, ಮುಗಿಸುವಾಗ ಹೇಳೊ ಪದ)

ಹರವಣ ಗುರುವಣ ಬಲಗೊಂಬೆ
ಗುರವಣ ಗುರಪಾದಕೆ ಸರಣು || ೧ ||

ನನಮುನಗಮು ಮಾನೋ ಗೆಲ್ಲಾ
ನಂದಾಸೇತಿ ಪುಣ್ಣಿದಿಂದ || ೨ ||

ಹುಟ್ಟಪಾಪ ಪರಿಹಾರಂದ
ಸಲವನ ದೇವನೆ ಸಿಲವನಗೊಂಬ || ೩ ||

ಸಾರಂದೇವ್ರು ಕಾರನದಿಂದ
ಬಂದಾನಾಯೈನ ಕಾರನದಿಂದ || ೪ ||

ಚೆನ ಮೆನ ನನ ಮೇನ್ ಉಂಡ್ಲೆ ಕೋಳು
ಶಿವೂರ ಮಗಬೇನ್ ಕೊಳಬೈನಂದಾ || ೫ ||

ನಂದಾಸೀತಿ ಪುಣ್ನಾದಿಂದಾ
ಹುಟ್ದ ಪಾಪ ಪರಿಹಾರೆಂದ || ೬ ||

ಕೋಳೊಂದೆರಡು ಕಡದೀ ತಂದೀ
ಹಾಸರಬೀಸರ ಕೆಲ್ಗೆ ಕೋಲುಲ್ ಹೊಯ್ದಾರೆ || ೭ ||

ಪಾಂಡವ್ರ ಮಕಲು ಕುಂಚವೊಲೈ
ನಾರಂದೇವ್ರ ಕಾರಣದಿಂದಾ || ೮ ||

ಬಂದಾನಾಯ್ಕನ ಕಾರಣದಿಂದಾ
ಚೆನ ಮನ ನನ ಮೇನ್ ಉಂಡ್ಲೆ ಕೋಳು || ೯ ||

ದೇವದೇವರೂ ಹರಗಿರ ಕೋಳು
ನಂದಾಸೀತೆ ಪುಣ್ಯದಿಂದಾ || ೧೦ ||

ಹುಟ್ದಾ ಪಾಪ ಪರಿಹಾರಂದಾ
ಶೀತಾರಾಮನ ಪುಣ್ಯಾದಿಂದಾ || ೧೧ ||

ಹಾಸರಬೀಸರ ಗಿರಿಯಲ್ ಕಟ್ಟಿ
ಹುಟ್ದಲ್ ಮೆಟ್ದಲ್ ಸರ್ಪನ ಬಾನ || ೧೨ ||

ಯೆತ್ತರ ಸತ್ತರ ಕಾಕೀ ನಿನ್ನಾ
ಕಾಕೀ ನಂದಾ ನಾಡನಂದಾ || ೧೩ ||

ಬಾಡದ ಕಾಕೇ ಕಣಿಮನ ಕಪ್ಪು
ಹನಮಂತ ಹನ್ಮದ ರಕ್ಸಾನಂದ || ೧೪ ||

ಹೊಣ್ಣಾರ ಹನಮನ ತೇಮಾನಂದಾ
ವಂದಂಬ ಗೆರಿಯ ಬರದೇ ನಂದಾ || ೧೫ ||

ಗೆರಿಯ ದಾಟಿ ಹೋ ಗಬೇಡಂದಾ
ಯೆರಡಂಬ ಸೆರಿಯ ಬರದೇನಂದಾ || ೧೬ ||

ಮೂರಂಬ ಗೆರಿಯ ಬರದೇನಂದಾ
ಗೆರಿಯ ದಾಟಿ ಹೋಗಬೇಡಂದಾ || ೧೭ ||

ಯೆರಡಂಬ ಸೆರಿಯ ಬರದೇನಂದಾ
ಮೂರೆಂಬ ಗೆರಿಯ ಬರದೇನಂದಾ || ೧೮ ||

ಗೆರಿಯ ದಾಟಿ ಹೋ ಗಬೇಡಾಂದಾ
ಬೇವೋನಾಗಿ ಬಿದ್ರೊ ಬಾವಾ || ೧೯ ||

ಬಿಲಿಮನ ಬಿಲ್ಲಿಂದ ಹೊಡೆದಾ ನೋಡು
ಮಿಗನ ಬನಕೇ ಹೋದೋ ನೋಡೂ || ೨೦ ||

ವಂದೆಂಬ ಬಾನ್ದಲ್ ಹೊಡದ್ನೋ ನೋಡು
ಆ ಬಾನವಿಲಾ ಆಕಾಸ್ಕೆ ಹೋಯ್ತು || ೨೧ ||

ಮತ್ತೊಂದ್ ಬಾನಾ ಹೊಡ್ದಾ ನೋಡೂ
ಲಾ ಬಾನಾ ಪಾತಾಲ್ಕೆ ಹೋಯ್ತು || ೨೨ ||

ಮತ್ತಂದ ಬಾನಾ ಹೋಡ್ದಾ ನೋಡು
ಕೋಡ್ನ ಮರ್‍ಗಗಲು ಬಿದ್ದೋ ನೋಡು

ಪಕ್ಕರ ಪಕ್ಕರ ಆಮಟ್ಟಗಾರಗೆ
ಪಕ್ಕರ ಪಕ್ಕರ ಹರದೂ ಬಾಣಾ || ೨೪ ||

ಕಲ್ಲೂ ಹಾಂದಿಗಳು ಹಯದೋ ನೋಡು
ಹೊಣ್ಣಾರ ಹನ್ಮಂತ ತೇಮಾನಂದಾ || ೨೫ ||

ಕಲ್ಲದ ಕೈಕರ ಬಲವೆನಂದಾ
ಕಲ್ಲರ ಗುತ್ತಾ ಬಲ್ಲೇನಂದಾ || ೨೬ ||

ಊಸಡುಂಗ್ಲ ಕೈಲ್ ಕೊಟ್ಟ
ದರ್ಬೆವಳ ಮಂತ್ರನೆ ಕಂಡೀ
ಒಡ್ಲಕ್ಕೇ ಪಡ್ಲಕ್ಕೇನಂದಾ || ೨೭ ||

ಶೀತೇರಾಮರ ಪಾಳಗದಿಂದಾ
ಶೀತೇ ಕಟ್ಕಂಡ ಕಡಿಬೇಕಂದ || ೨೮ ||

ಹೇಲ ಸಂಗ್ರ ಮಾಡಬೇಕಂದಾ
ಕೋಜ ಬುತ್ತೀ ಕಟ್ಟೆನಂದಾ || ೨೯ ||

ಕೈಲ ಕತ್ತಿ ತಾರೇನಂದಾ
ಶೀತೆ ಕಟ್ಕಂದ ಕಡ್ದೇನಂದಾ || ೩೦ ||

ಶೀತೇ ತಕ್ಕಂಡ ಇಲ್ಲೇ ಬಂದಾ
ಹೋ ರಾಮಣ್ಣಾ ರಾಯರ ಪಾದಕ ಬಿದ್ದಣ್ಣ || ೩೧ ||
*****
ಹೇಳಿದವರು: ನಾಗಪ್ಪ ಶಿವಪ್ಪ ಗೌಡ, ತಲಗೊಡು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...