ಬಾಗಿಲು ತೆಗೆ ಮಗೂ

ಬಾಗಿಲ ತೆಗೆ ಮಗೂ
ಗಾಳಿ ಸ್ವಚ್ಚಂದ ಓಡಾಡಲಿ
ಕಿಟಕಿಯ ಬಾಗಿಲು ತೆರೆದು
ಕಣ್ಣಿನ ಬಾಗಿಲು ತೆರೆದು
ತುಂಬಿಕೋ, ನೋಡಿಕೋ ನೂರಾರು ನೋಟ
ಅರಿತುಕೋ
ಬಹಳಷ್ಟು ಇವೆ ಕಲಿಯಬೇಕಾದ ಪಾಠ

ಹೃದಯಕ್ಕೆ ಹಾಕಿದ ಚಿಲಕ ತೆಗೆದುಬಿಡು
ಕಣ್ಣು ಕಿವಿ ಮೂಗು ಎಲ್ಲಾ
ಮುಚ್ಚಿದ ಬಾಗಿಲು ತೆರೆದು
ಮನ ಬಿಚ್ಚಿ ನೋಡು
ಕಂಡ ಕತ್ತಲೆಯು ಬೆಳಕೆಂದು
ಭ್ರಮಿಸುವ ಕಣ್ಣುಮುಚ್ಚಾಲೆ
ಬೇಡವೇ ಬೇಡ ಮರಿ ಸಾಕು ಮಾಡು

ಎಲ್ಲಾ ಬಂಧನ ಕಳಚಿ
ಸರಪಳಿ ಬಿಚ್ಚಿದ ನಾಯಿ
ಒಮ್ಮೆಲೇ ಜಿಗಿದಾಡುವಂತೆ
ಉಲ್ಲಾಸ, ಸಂತೋಷ ತುಂಬಿ
ಹಿಗ್ಗಿ ಕುಣಿದಾಡು
ಯಾವತ್ತಿಗೂ ಬೇಡ, ಬೇಡ ಬೇಡ
ಬಂಧನದ ನಾಯಿ ಪಾಡು

ಆಕಾಶ ನೋಡು, ಆಕಾಶದ ತುಂಬಾ
ನಕ್ಕಿ ಚಂದ್ರ ತಾರೆಗಳ ಉಲ್ಲಾಸ ನೋಡು
ಹನ್ನೆರಡು ಗಂಟೆಯ ಬಿಸಿಲು
ನಿಮ್ಮೂರ ಗುಡ್ಡದ ತುದಿಯ
ಮೇಲೆ ಹತ್ತಿ ನಿನ್ನೂರು ನೋಡು
ನಿನ್ನೂರು
ಎಷ್ಟು ಸಣ್ಣದು ಮರೀ
ಕಂಡೆಯಾ?

ಒಳಗೊಳಗೇ ಕುಳಿತು
ಇದೇ ಬ್ರಹಾಂಡ ಎಂದುಬಿಟ್ಟಿವಲ್ಲ
ಅಯ್ಯೊ ಮಗು
ಅದ್ಭುತ ಗೋಲಾಕಾರ ಈ ಭೂಮಿ
ಭೂಮಿಯನ್ನು ಮೀರಿ ವಿಶ್ವ-
ವಿಶ್ವಾತ್ಮಗಳ ಎದುರು
ನಾನೂ ನೀನೂ
ಹೇಳು, ಅಣುವಾಗಿಯಾದರೂ ಉಳಿಯಬಹುದೇನು ?

ಮಗೂ, ಅಂಗಿ ಚಡ್ಡಿ ಎಲ್ಲಾ ಕಳಚು
ಈ ಗೋಡೆ, ಈ ಬಾಗಿಲು, ಈ ಕಿಟಕಿ
ಎಲ್ಲಾ ಗೌರವದ ಬಂಧನ
ಬಂಧಿಸಿದ
ಆತ್ಮೀಯ ಆಕ್ರಮಣ

ಬಾಗಿಲು ತೆರೆಯೋಣ ಮಗೂ ಬಾ ಬಾ
ಬಾಗಿಲು ತೆರೆದು
ಮುಟ್ಟೋಣ ಈ ಭೂಮಿಯಿಂದ ಆ ಮುಗಿಲು
ತುಂಬಿದ ನಿಗಿ ನಿಗಿ ಹಗಲು
ಅಂಥ ದಿವ್ಯ ತೇಜಸ್ಸಿನೊಡಲು
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾವು ಕಂಡಿರೇನಮ್ಮಯ್ಯಾ
Next post ಚೋಳ ಕಡಿತು ನನಗೊಂದು

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys