Home / ಕವನ / ಕವಿತೆ / ಬಾಗಿಲು ತೆಗೆ ಮಗೂ

ಬಾಗಿಲು ತೆಗೆ ಮಗೂ

ಬಾಗಿಲ ತೆಗೆ ಮಗೂ
ಗಾಳಿ ಸ್ವಚ್ಚಂದ ಓಡಾಡಲಿ
ಕಿಟಕಿಯ ಬಾಗಿಲು ತೆರೆದು
ಕಣ್ಣಿನ ಬಾಗಿಲು ತೆರೆದು
ತುಂಬಿಕೋ, ನೋಡಿಕೋ ನೂರಾರು ನೋಟ
ಅರಿತುಕೋ
ಬಹಳಷ್ಟು ಇವೆ ಕಲಿಯಬೇಕಾದ ಪಾಠ

ಹೃದಯಕ್ಕೆ ಹಾಕಿದ ಚಿಲಕ ತೆಗೆದುಬಿಡು
ಕಣ್ಣು ಕಿವಿ ಮೂಗು ಎಲ್ಲಾ
ಮುಚ್ಚಿದ ಬಾಗಿಲು ತೆರೆದು
ಮನ ಬಿಚ್ಚಿ ನೋಡು
ಕಂಡ ಕತ್ತಲೆಯು ಬೆಳಕೆಂದು
ಭ್ರಮಿಸುವ ಕಣ್ಣುಮುಚ್ಚಾಲೆ
ಬೇಡವೇ ಬೇಡ ಮರಿ ಸಾಕು ಮಾಡು

ಎಲ್ಲಾ ಬಂಧನ ಕಳಚಿ
ಸರಪಳಿ ಬಿಚ್ಚಿದ ನಾಯಿ
ಒಮ್ಮೆಲೇ ಜಿಗಿದಾಡುವಂತೆ
ಉಲ್ಲಾಸ, ಸಂತೋಷ ತುಂಬಿ
ಹಿಗ್ಗಿ ಕುಣಿದಾಡು
ಯಾವತ್ತಿಗೂ ಬೇಡ, ಬೇಡ ಬೇಡ
ಬಂಧನದ ನಾಯಿ ಪಾಡು

ಆಕಾಶ ನೋಡು, ಆಕಾಶದ ತುಂಬಾ
ನಕ್ಕಿ ಚಂದ್ರ ತಾರೆಗಳ ಉಲ್ಲಾಸ ನೋಡು
ಹನ್ನೆರಡು ಗಂಟೆಯ ಬಿಸಿಲು
ನಿಮ್ಮೂರ ಗುಡ್ಡದ ತುದಿಯ
ಮೇಲೆ ಹತ್ತಿ ನಿನ್ನೂರು ನೋಡು
ನಿನ್ನೂರು
ಎಷ್ಟು ಸಣ್ಣದು ಮರೀ
ಕಂಡೆಯಾ?

ಒಳಗೊಳಗೇ ಕುಳಿತು
ಇದೇ ಬ್ರಹಾಂಡ ಎಂದುಬಿಟ್ಟಿವಲ್ಲ
ಅಯ್ಯೊ ಮಗು
ಅದ್ಭುತ ಗೋಲಾಕಾರ ಈ ಭೂಮಿ
ಭೂಮಿಯನ್ನು ಮೀರಿ ವಿಶ್ವ-
ವಿಶ್ವಾತ್ಮಗಳ ಎದುರು
ನಾನೂ ನೀನೂ
ಹೇಳು, ಅಣುವಾಗಿಯಾದರೂ ಉಳಿಯಬಹುದೇನು ?

ಮಗೂ, ಅಂಗಿ ಚಡ್ಡಿ ಎಲ್ಲಾ ಕಳಚು
ಈ ಗೋಡೆ, ಈ ಬಾಗಿಲು, ಈ ಕಿಟಕಿ
ಎಲ್ಲಾ ಗೌರವದ ಬಂಧನ
ಬಂಧಿಸಿದ
ಆತ್ಮೀಯ ಆಕ್ರಮಣ

ಬಾಗಿಲು ತೆರೆಯೋಣ ಮಗೂ ಬಾ ಬಾ
ಬಾಗಿಲು ತೆರೆದು
ಮುಟ್ಟೋಣ ಈ ಭೂಮಿಯಿಂದ ಆ ಮುಗಿಲು
ತುಂಬಿದ ನಿಗಿ ನಿಗಿ ಹಗಲು
ಅಂಥ ದಿವ್ಯ ತೇಜಸ್ಸಿನೊಡಲು
*****

 

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...