ಕಾಪಾಡು ತಂದೆ

ನನಗೊಂದೆ ಕಾಡಿದೆ ನಿತ್ಯವೂ ವ್ಯಾಕುಲತೆ
ಅವನ ದರುಶನಕ್ಕೆ ಮನವು ಹಾ ತೊರೆದಿದೆ
ನನ್ನಂತರಂಗದಲಿ ನಿತ್ಯ ಅವನ ಧ್ಯಾನ
ಎಂದಿಗಾಗುವುದೊದರುಶನ ಮನವು ಬೇಡಿದೆ

ಬಾಳಿನಲಿ ಯಾರು ಯಾರಿಗೊ ನಾನು
ನನ್ನ ಮನಸ್ಸನ್ನು ಪೂರ್‍ಣ ಅರ್ಪಿಸಿದೆ
ನನ್ನೊಡೆಯಗೆ ಮರೆತು ನಿತ್ಯವೂ ನಾನು
ವಿಷಯ ಸುಖಗಳಿಗಾಗಿ ಹಪಹಪಿಸಿದೆ

ನನ್ನ ಮಾನಾಪಮಾನಗಳಿಗಾಗಿ ನಾನು
ನಿತ್ಯವೂ ಲೋಕದಲಿ ಅಹಂಕಾರ ಪ್ರದರ್‍ಶಿಸಿದೆ
ನನ್ನನ್ನು ಶ್ರೇಷ್ಠ ಎನಿಸಿಕೊಳ್ಳಲು ದುತ್ತೆ
ಏನೇನೋ ಕಸರತ್ತುಗಳನ್ನ ನಾ ಮಾಡಿದೆ

ಈಗ ಅವನದೆ ಧ್ಯಾನ ನನ್ನ ಹೃದಯದಲಿ
ಅವನ ಸಾಕ್ಷಾತ್ಕಾರವೊಂದೇ ನನ್ನ ಉದಯದಲಿ
ಲೌಕಿಕ ಸುಖ ದುಃಖಗಳಿಗೆ ಬಹುನೊಂದಿದೆ
ಮಾಣಿಕ್ಯ ವಿಠಲನಾಗಿಸಿ ಕಾಪಾಡು ತಂದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೧
Next post ಹಿಂದೂ ದೇಶ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…