ಜಗನ್ಮಾತೆಯಲಿ ಬೇಡಿಕೆ

ನಾ ಎತ್ತೆತ್ತ ನೋಡಲಿ ನೀ ಜಗನ್ಮಾತೆ
ನಿನ್ನ ಮಾಯೆಯೆ ಈ ಜಗತ ವ್ಯಾಪಿಸಿದೆ
ನಿನ್ನ ಮರೆತು ನಿನ್ನ ಮಾಯೆಯಲ್ಲಿ ನಾ
ಮುಳಗಿ ಮತ್ತೆ ಮಾಯೆಯೇ ಮೋಹಿಸಿದೆ

ಜನನ ಮರಣಗಳ ಸುತ್ತುವರಿಯುತ್ತ
ಕಷ್ಟ ಸುಖಗಳಿಗೆಲ್ಲ ಕೈ ಚಾಚುತ್ತ
ಬಾಳಿರುವೆ ಈ ನರಕ ಸದೃಶ್ಯ ಬಾಳಿನಲ್ಲಿ
ತೇಲಿರುವೆ ನನ್ನವರ ಮೊಹಪಾಶದಲ್ಲಿ

ಯಾವುದು ನಿತ್ಯ ಯಾವುದು ಅನಿತ್ಯ
ನನಗೊಂದು ಅರ್ಥವಾಗದೆ ತೊಳಲಿರುವೆ
ಕ್ಷಣಿಕ ಬದುಕಿನಲಿ ಅನವರತವೂನಾ
ಸುಖದ ಮರೀಚಿಕೆಗೆ ಬೆನ್ನು ಹತ್ತಿ ಬಳಲಿರುವೆ

ಕಾನನದಲಿ ನಾ ಒಂಟಿಗನಾದ ಪಶುವಿನಂತೆ
ಜಗದ ಈ ಘೋರ ಅರಣ್ಯದಲಿ ಸಿಲುಕಿರುವೆ
ನನೊಡೆಯ ನನ್ನ ದಾಮ ಕಾಣದೆನಾ
ಧನಿ ಗಗನದೆತ್ತರಕ್ಕೆ ಹರಿಸಿ ರೋಧಿಸಿರುವೆ

ಬೇಡ, ನನ್ನ ನಯನಗಳತ್ತ ಹರಿಸದಿರು
ಕಾಮ ಕಾಂಚನ ಲೋಭ ಮೋಹ ಮಾಯೆ
ಈಗ ನನ್ನೆದೆಯಲಿ ನಿನ್ನದೆ ಸ್ಮರಣಿ ಉಸಿರು
ಮಾಣಿಕ್ಯ ವಿಠಲನಾಗಿಸಿ ಎತ್ತಿಕೊ ತಾಯೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೩
Next post ನಿನಗೆ ವಂದನೆ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…