ಜಗನ್ಮಾತೆಯಲಿ ಬೇಡಿಕೆ

ನಾ ಎತ್ತೆತ್ತ ನೋಡಲಿ ನೀ ಜಗನ್ಮಾತೆ
ನಿನ್ನ ಮಾಯೆಯೆ ಈ ಜಗತ ವ್ಯಾಪಿಸಿದೆ
ನಿನ್ನ ಮರೆತು ನಿನ್ನ ಮಾಯೆಯಲ್ಲಿ ನಾ
ಮುಳಗಿ ಮತ್ತೆ ಮಾಯೆಯೇ ಮೋಹಿಸಿದೆ

ಜನನ ಮರಣಗಳ ಸುತ್ತುವರಿಯುತ್ತ
ಕಷ್ಟ ಸುಖಗಳಿಗೆಲ್ಲ ಕೈ ಚಾಚುತ್ತ
ಬಾಳಿರುವೆ ಈ ನರಕ ಸದೃಶ್ಯ ಬಾಳಿನಲ್ಲಿ
ತೇಲಿರುವೆ ನನ್ನವರ ಮೊಹಪಾಶದಲ್ಲಿ

ಯಾವುದು ನಿತ್ಯ ಯಾವುದು ಅನಿತ್ಯ
ನನಗೊಂದು ಅರ್ಥವಾಗದೆ ತೊಳಲಿರುವೆ
ಕ್ಷಣಿಕ ಬದುಕಿನಲಿ ಅನವರತವೂನಾ
ಸುಖದ ಮರೀಚಿಕೆಗೆ ಬೆನ್ನು ಹತ್ತಿ ಬಳಲಿರುವೆ

ಕಾನನದಲಿ ನಾ ಒಂಟಿಗನಾದ ಪಶುವಿನಂತೆ
ಜಗದ ಈ ಘೋರ ಅರಣ್ಯದಲಿ ಸಿಲುಕಿರುವೆ
ನನೊಡೆಯ ನನ್ನ ದಾಮ ಕಾಣದೆನಾ
ಧನಿ ಗಗನದೆತ್ತರಕ್ಕೆ ಹರಿಸಿ ರೋಧಿಸಿರುವೆ

ಬೇಡ, ನನ್ನ ನಯನಗಳತ್ತ ಹರಿಸದಿರು
ಕಾಮ ಕಾಂಚನ ಲೋಭ ಮೋಹ ಮಾಯೆ
ಈಗ ನನ್ನೆದೆಯಲಿ ನಿನ್ನದೆ ಸ್ಮರಣಿ ಉಸಿರು
ಮಾಣಿಕ್ಯ ವಿಠಲನಾಗಿಸಿ ಎತ್ತಿಕೊ ತಾಯೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೩
Next post ನಿನಗೆ ವಂದನೆ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

cheap jordans|wholesale air max|wholesale jordans|wholesale jewelry|wholesale jerseys