ಬಾ ಮಳೆ

ಮಳೆರಾಯ ನೀ ಅಡಗಿರುವಿ ಎಲ್ಲಿ?
ಕೇಳಿ ನಮ್ಮಯ ಮಾತು
ಬೇಸಿಗೆ ಕಳೆದರೂ ಒಂದ್ ಹನಿ ಇಲ್ಲ.
ಅಲ್ಲೇನ್ ಮಾಡುವಿ ಕೂತು

ರೈತರು ಬಿತ್ತನೆ ಮಾಡಿ ಮುಗಿಯಿಸಿ
ಪೈರನು ಕಾಯುವ ದಿನ
ನೀರಲಿ ಆಡುವ ಬಯಕೆ ನಮ್ಮದು
ಹಸಿರು ಬೆಟ್ಟ ನೋಡೆನು

ಕುಡಿಯುವ ನೀರಿಗೆ ಬಂದಿದೆ ಕಷ್ಟ
ನಿನಗದು ತಿಳಿಯದೆ ಹೇಳು
ಪ್ರಾಣಿ ಪಕ್ಷಿಗಳ ಪರದಾಟ ನೋಡು
ತಪ್ಪಿಸು ಅವುಗಳ ಗೋಳು

ಎಷ್ಟಾದರೂ ಬಾ ಹೇಗಾದರೂ ಬಾ
ಶಾಲೆಯ ನಂತರ ಸುರಿ
ಆಟವ ಮುಗಿಸಿ ಉಲ್ಲಾಸ ತುಂಬಿಕೊಂಡು
ಮನೆ ಹೊಕ್ಕ ನಂತರ ಸರಿ

ಎಳೆಯರ ಪ್ರಾರ್ಥನೆಯ ನೀವ್ ಕೇಳಿ
ಬಾರೋ ಬಾ ಮಳೆರಾಯ
ಸಕಾಲಕೆ ನೀನು ಸುರಿದರೆ ನಾವೆಲ್ಲ
ಮರೆಯೆವು ನಿನ್ನ ಮಹರಾಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೇಪರ್ ಪುಟ್ಟ
Next post ನಂಜನಗೂಡು ತಿರುಮಲಾಂಬಾ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…