ಬಾ ಮಳೆ

ಮಳೆರಾಯ ನೀ ಅಡಗಿರುವಿ ಎಲ್ಲಿ?
ಕೇಳಿ ನಮ್ಮಯ ಮಾತು
ಬೇಸಿಗೆ ಕಳೆದರೂ ಒಂದ್ ಹನಿ ಇಲ್ಲ.
ಅಲ್ಲೇನ್ ಮಾಡುವಿ ಕೂತು

ರೈತರು ಬಿತ್ತನೆ ಮಾಡಿ ಮುಗಿಯಿಸಿ
ಪೈರನು ಕಾಯುವ ದಿನ
ನೀರಲಿ ಆಡುವ ಬಯಕೆ ನಮ್ಮದು
ಹಸಿರು ಬೆಟ್ಟ ನೋಡೆನು

ಕುಡಿಯುವ ನೀರಿಗೆ ಬಂದಿದೆ ಕಷ್ಟ
ನಿನಗದು ತಿಳಿಯದೆ ಹೇಳು
ಪ್ರಾಣಿ ಪಕ್ಷಿಗಳ ಪರದಾಟ ನೋಡು
ತಪ್ಪಿಸು ಅವುಗಳ ಗೋಳು

ಎಷ್ಟಾದರೂ ಬಾ ಹೇಗಾದರೂ ಬಾ
ಶಾಲೆಯ ನಂತರ ಸುರಿ
ಆಟವ ಮುಗಿಸಿ ಉಲ್ಲಾಸ ತುಂಬಿಕೊಂಡು
ಮನೆ ಹೊಕ್ಕ ನಂತರ ಸರಿ

ಎಳೆಯರ ಪ್ರಾರ್ಥನೆಯ ನೀವ್ ಕೇಳಿ
ಬಾರೋ ಬಾ ಮಳೆರಾಯ
ಸಕಾಲಕೆ ನೀನು ಸುರಿದರೆ ನಾವೆಲ್ಲ
ಮರೆಯೆವು ನಿನ್ನ ಮಹರಾಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೇಪರ್ ಪುಟ್ಟ
Next post ನಂಜನಗೂಡು ತಿರುಮಲಾಂಬಾ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys