ಸಕ್ಕರೆ ಗೊಂಬೆ

ಸೀಗಿ ಹುಣ್ಣಿವೆ ಬಂದಿತ್ತು
ಸಕ್ಕರೆ ಅಚ್ಚು ಮಾಡಿತ್ತು
ರಂಗಿಯ ತಾಯಿ ತಂದಳು
ತರ ತರ ಸಕ್ಕರೆ ಅಚ್ಚುಗಳ

ಲಿಂಗ ತೇರು ಜೋರಿತ್ತು
ಪೂಜಿಸಿ ಹೊಟ್ಟೆ ಸೇರಿತ್ತು
ಜಿಂಕೆ ಕೋಳಿ ಹಸುಗಳ
ಭರ್ಜರಿ ಆಯಿತು ಜಗಳ

ಆರತಿ ತಟ್ಟೆ ಹಿಡಿದ ರಂಗಿ
ಹೊರಗಡೆ ಹೆಜ್ಜೆ ಇಟ್ಟಳು
ಗಾಳಿಗೆ ದೀಪವು ಆರಿತ್ತು
ಕತ್ತಲು ರಸ್ತೆಯ ತುಂಬಿತ್ತು

ಸೀಗಿ ದೇವಿಯ ಗುಡಿಯಲ್ಲಿ
ಸಿಕ್ಕಳು ಗೆಳತಿ ಮುಗಿಲ ಮಲ್ಲಿ
ಜಂಭದ ಕೋಳಿಯು ರಂಗಿ
ಮಲ್ಲಿ ನಿನಗಿಲ್ಲ ಹೊಸ ಅಂಗಿ

ಹೊರಗೆ ಬರುತಿರೆ ಗಾಳಿ
ಅಂಗಿಗೆ ಬಳಿದಿತ್ತು ಧೂಳು
ರಪ ರಪ ಮಳೆಯು ಬಿದ್ದಿತ್ತು
ಸಕ್ಕರೆ ಅಚ್ಚು ಕರಗಿತ್ತು

ನೆನೆದ ರಂಗಿ ನಡುಗಿದಳು
ಅಳುತಲೆ ಮನೆಯ ಸೇರಿದಳು
ಆರತಿ ಹಂಚಿದ್ದರೆ ಗೆಳತಿಯರಿಗೆ
ನಿರರ್ಥಕ ಆಗುತ್ತಿತ್ತೇ ಕೊನೆಗೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಗೆಳೆಯರು
Next post ನಿಕೊಲೆ ಗೊಗಲ್ ನ -“The Over coat” ಶೋಷಣೆಯ ವಿರುದ್ಧ ದೈನ್ಯತೆಯ ಸೆಣಸಾಟ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys