ವಚನ ವಿಚಾರ – ಕಾಲಿಲ್ಲದ ಕುದುರೆ

ವಚನ ವಿಚಾರ – ಕಾಲಿಲ್ಲದ ಕುದುರೆ

ಕಾಲಿಲ್ಲದ ಕುದುರೆಯೇರಿ ರಾವುತಿಕೆಯ ಮಾಡಬೇಕು
ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು
ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಸಾಡಬಲ್ಲಡೆ
ಇಹಲೋಕಕ್ಕೆ ವೀರನೆಂಬೆ ಪರಲೋಕಕ್ಕೆ ಧೀರನೆಂಬೆ
ಆಮುಗೇಶ್ವರಲಿಂಗಕ್ಕೆ ಅಧಿಕನೆಂಬೆ

[ರಾವುತಿಕೆ-ಕುದುರೆಯ ಸವಾರಿ, ಧೀರ-ವಿವೇಕಿ, ಅಧಿಕ-ಹೆಚ್ಚು, ಮಿಗಿಲು]

ಆಮುಗೆ ರಾಯಮ್ಮನ ವಚನ ಇದು. ಇಲ್ಲಿರುವ ಸಂಕೇತ ತೀರ ಸ್ಪಷ್ಟವಾಗಿಯೇ ಇದೆ. ಕುದುರೆಯ ಸವಾರಿ ಕಷ್ಟವಿರಬಹುದು ಆದರೆ ಅಸಾಧ್ಯವಲ್ಲ. ಕಲಿತುಕೊಂಡರೆ ಯಾರು ಬೇಕಾದರೂ ರಾವುತರಾಗಬಹುದು, ಕಲಿತುಕೊಂಡರೆ ಯಾರು ಬೇಕಾದರೂ ಕುದುರೆಯನ್ನು ಕುಣಿಸಬಹುದು. ಓಡುತ್ತಿರುವ ಕುದುರೆಯನ್ನು ನಿಲ್ಲಿಸಲೂಬಹುದು.

ಆದರೆ ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ, ಅದರ ಸವಾರಿ (ರಾವುತಿಕೆ) ಸಾಧ್ಯವಾಗುವುದಾದರೆ;

ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ, ಆದ್ದರಿಂದಲೇ ಎತ್ತ ಹೋಗುವುದೆಂದು ಅರಿವಾಗದು. ಅದನ್ನು ನಿಲ್ಲಿಸಲು ಸಾಧ್ಯವಾಗುವುದಾದರೆ;

ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ, ಅದು ನಮ್ಮಿಚ್ಛೆಯಂತೆ ಬೀದಿಯಲ್ಲಿ, ಇತರರಿಗೂ ತಿಳಿಯುವಂತೆ, ಕುಣಿಸಲು ಆಗುವುದಾದರೆ-
ಆಗ ಅಂಥವರನ್ನು ಈ ಲೋಕದ ವೀರರು, ಪರಲೋಕದ ವಿವೇಕಿಗಳು (ಧೀರ-ಧೀ=ವಿವೇಕ, ಬುದ್ಧಿ) ಎನ್ನುತ್ತೇನೆ ಅನ್ನುವುದು ರಾಯಮ್ಮನ ಮಾತು.
ನಾವು ಬಹಳಷ್ಟು ಜನ ಮನಸ್ಸಿನ ಕುದುರೆಯ ಸವಾರರಲ್ಲ, ಕುದುರೆಗೆ ವಶರಾಗಿರುವುದು ಕೂಡ ಗೊತ್ತಿರದಂತೆ ಅದರಿಚ್ಛೆಯಂತೆ ನಡೆಯುತ್ತಾ ಸ್ವತಂತ್ರರೆಂಬ, ಧೀರರೆಂಬ, ವೀರರೆಂಬ ಭ್ರಮೆಯಲ್ಲಿರುವವರು, ಅಲ್ಲವೇ?

ಈ ವಚನದೊಂದಿಗೆ ಅಲ್ಲಮನ ಕೊಟ್ಟ ಕುದುರೆಯನೇರಬಹುದು ಅನ್ನುವ ಸುಪ್ರಸಿದ್ಧವಾದ ವಚನವನ್ನು ಜ್ಞಾಪಿಸಿಕೊಳ್ಳಿ. ಅಲ್ಲೂ ಕುದುರೆಯ ರೂಪಕ ಬಳಕೆಯಾಗಿದೆ, ಬೇರೆಯ ರೀತಿಯಲ್ಲಿ, ಬೇರೆಯ ಉದ್ದೇಶಕ್ಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೀಮನ ಮದುವೆ
Next post ಎಂದು ಬರುವಳೋ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys