Home / ಕವನ / ಕವಿತೆ / ಜಾತ್ರೆ

ಜಾತ್ರೆ

ಆ ಜಾತ್ರೆಯ ತುಂಬೆಲ್ಲಾ ಮಣ್ಣ ವಾಸನೆ
ಹರ್ಷ ಗೆಲವು ಅತಿರೇಕಗಳು ತೊಟ್ಟಿಕ್ಕುವ
ನಾಟಕಗಳು ಅಂಕದ ಪರದೆ, ಹೆಜ್ಜೆಗಳ ಮೇಲೆ
ಅವರಿವರ ಪಾದದ ಗುರುತುಗಳು.

ಆಶ್ಚರ್ಯ ಆಸಕ್ತಿಯ ಪರದೆಯ ಕತ್ತಲು
ಬೆಳಕಿನಲಿ ಮಾರಾಟಕ್ಕೆ ಇವೆ ನಿರ್ಗತಿಕನ ಕನಸುಗಳು.
ಗುಂಪಿನ ಮಧ್ಯದ ಒಂದು ಗದ್ದಲಲಿ ಎಲ್ಲ
ದರ್ಶನಗಳು, ತಲೆಮಾರು ದಾಟಿದ ಬೆಳಕ ಕಿರಣಗಳು.

ಕೂಗಾಟ, ಹರ್ಷ, ಜೂಜು, ಬಾಜಿ ಎಲ್ಲರೂ ಖುಷಿ
ಮನರಂಜನೆಯ ಲೋಕಪ್ರಿಯ, ತಮ್ಮ ಪಾಲಿಗೆ
ದಕ್ಕಿದ ಕ್ಷಣಗಳ ಉಸಿರಾಡುತ್ತಿದ್ದಾರೆ. ಮತ್ತೆ ಡೊಂಬರಾಟ
ನಡೆದಿದೆ. ಸೂರ್ಯ ಎದ್ದ ಧೂಳಿಗೆ ಮಂಕಾಗಿದ್ದಾನೆ.

ರಾಶಿ ಹಾಕಿದ ಗುಂಪಿನಲಿ ಮಗುವಿನ ಗೊಂಬೆ,
ಅಳುತ್ತಿದೆ ಹಾಲಿಗಾಗಿ, ಎಲ್ಲರೂ ವ್ಯಾಪಾರದ ಭರಾಟೆಯಲಿ,
ಕಷ್ಟದ ನಷ್ಟ ತುಂಬವ ಲೆಕ್ಕಾಚಾರದಲಿ ತೊಡಗಿದ್ದಾರೆ.
ಅವಳು ನೋಡುತ್ತಿದ್ದಾಳೆ ಗಾಳಿ ಬೀಸಿದತ್ತ ಚದುರುವ ಜನಗಳ,

ಒಂದು ಊಟ, ಒಂದು ಆಟದ ಸಾಮಾನು ಮಗಳಿಗೆ
ಕೊಡಿಸಬಹುದಾಗಿತ್ತು, ಆದರೆ ಆತುರದ ಜೀವ
ಹಸಿದ ಪ್ರಾಣಿಯಂತೆ, ಅವಳ ಹಿಂಬಾಲಿಸಿ ಸನ್ನೆ ಮಾಡುತ್ತಿತ್ತು.
ಕಣ್ಣೀರಿನಿಂದ ಸುಟ್ಟ ಅವಳ ಕಣ್ಣುಗಳಲಿ ಬಹಳಷ್ಟು ವರ್ಷಗಳ ದುಃಖ.
ಜಾತ್ರೆ ಜನಜಂಗುಳಿಯ ಮಧ್ಯೆ ಸಂತಳ ನೆರಳು ಹರಡಿತ್ತು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...