ಜಾತ್ರೆ

ಆ ಜಾತ್ರೆಯ ತುಂಬೆಲ್ಲಾ ಮಣ್ಣ ವಾಸನೆ
ಹರ್ಷ ಗೆಲವು ಅತಿರೇಕಗಳು ತೊಟ್ಟಿಕ್ಕುವ
ನಾಟಕಗಳು ಅಂಕದ ಪರದೆ, ಹೆಜ್ಜೆಗಳ ಮೇಲೆ
ಅವರಿವರ ಪಾದದ ಗುರುತುಗಳು.

ಆಶ್ಚರ್ಯ ಆಸಕ್ತಿಯ ಪರದೆಯ ಕತ್ತಲು
ಬೆಳಕಿನಲಿ ಮಾರಾಟಕ್ಕೆ ಇವೆ ನಿರ್ಗತಿಕನ ಕನಸುಗಳು.
ಗುಂಪಿನ ಮಧ್ಯದ ಒಂದು ಗದ್ದಲಲಿ ಎಲ್ಲ
ದರ್ಶನಗಳು, ತಲೆಮಾರು ದಾಟಿದ ಬೆಳಕ ಕಿರಣಗಳು.

ಕೂಗಾಟ, ಹರ್ಷ, ಜೂಜು, ಬಾಜಿ ಎಲ್ಲರೂ ಖುಷಿ
ಮನರಂಜನೆಯ ಲೋಕಪ್ರಿಯ, ತಮ್ಮ ಪಾಲಿಗೆ
ದಕ್ಕಿದ ಕ್ಷಣಗಳ ಉಸಿರಾಡುತ್ತಿದ್ದಾರೆ. ಮತ್ತೆ ಡೊಂಬರಾಟ
ನಡೆದಿದೆ. ಸೂರ್ಯ ಎದ್ದ ಧೂಳಿಗೆ ಮಂಕಾಗಿದ್ದಾನೆ.

ರಾಶಿ ಹಾಕಿದ ಗುಂಪಿನಲಿ ಮಗುವಿನ ಗೊಂಬೆ,
ಅಳುತ್ತಿದೆ ಹಾಲಿಗಾಗಿ, ಎಲ್ಲರೂ ವ್ಯಾಪಾರದ ಭರಾಟೆಯಲಿ,
ಕಷ್ಟದ ನಷ್ಟ ತುಂಬವ ಲೆಕ್ಕಾಚಾರದಲಿ ತೊಡಗಿದ್ದಾರೆ.
ಅವಳು ನೋಡುತ್ತಿದ್ದಾಳೆ ಗಾಳಿ ಬೀಸಿದತ್ತ ಚದುರುವ ಜನಗಳ,

ಒಂದು ಊಟ, ಒಂದು ಆಟದ ಸಾಮಾನು ಮಗಳಿಗೆ
ಕೊಡಿಸಬಹುದಾಗಿತ್ತು, ಆದರೆ ಆತುರದ ಜೀವ
ಹಸಿದ ಪ್ರಾಣಿಯಂತೆ, ಅವಳ ಹಿಂಬಾಲಿಸಿ ಸನ್ನೆ ಮಾಡುತ್ತಿತ್ತು.
ಕಣ್ಣೀರಿನಿಂದ ಸುಟ್ಟ ಅವಳ ಕಣ್ಣುಗಳಲಿ ಬಹಳಷ್ಟು ವರ್ಷಗಳ ದುಃಖ.
ಜಾತ್ರೆ ಜನಜಂಗುಳಿಯ ಮಧ್ಯೆ ಸಂತಳ ನೆರಳು ಹರಡಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೂ ದೇಶ
Next post ಕುರುಸಾಮ್ರಾಜ್ಯದ ಯುವರಾಜ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…