Home / ಕವನ / ಕವಿತೆ / ಜಾತ್ರೆ

ಜಾತ್ರೆ

ಆ ಜಾತ್ರೆಯ ತುಂಬೆಲ್ಲಾ ಮಣ್ಣ ವಾಸನೆ
ಹರ್ಷ ಗೆಲವು ಅತಿರೇಕಗಳು ತೊಟ್ಟಿಕ್ಕುವ
ನಾಟಕಗಳು ಅಂಕದ ಪರದೆ, ಹೆಜ್ಜೆಗಳ ಮೇಲೆ
ಅವರಿವರ ಪಾದದ ಗುರುತುಗಳು.

ಆಶ್ಚರ್ಯ ಆಸಕ್ತಿಯ ಪರದೆಯ ಕತ್ತಲು
ಬೆಳಕಿನಲಿ ಮಾರಾಟಕ್ಕೆ ಇವೆ ನಿರ್ಗತಿಕನ ಕನಸುಗಳು.
ಗುಂಪಿನ ಮಧ್ಯದ ಒಂದು ಗದ್ದಲಲಿ ಎಲ್ಲ
ದರ್ಶನಗಳು, ತಲೆಮಾರು ದಾಟಿದ ಬೆಳಕ ಕಿರಣಗಳು.

ಕೂಗಾಟ, ಹರ್ಷ, ಜೂಜು, ಬಾಜಿ ಎಲ್ಲರೂ ಖುಷಿ
ಮನರಂಜನೆಯ ಲೋಕಪ್ರಿಯ, ತಮ್ಮ ಪಾಲಿಗೆ
ದಕ್ಕಿದ ಕ್ಷಣಗಳ ಉಸಿರಾಡುತ್ತಿದ್ದಾರೆ. ಮತ್ತೆ ಡೊಂಬರಾಟ
ನಡೆದಿದೆ. ಸೂರ್ಯ ಎದ್ದ ಧೂಳಿಗೆ ಮಂಕಾಗಿದ್ದಾನೆ.

ರಾಶಿ ಹಾಕಿದ ಗುಂಪಿನಲಿ ಮಗುವಿನ ಗೊಂಬೆ,
ಅಳುತ್ತಿದೆ ಹಾಲಿಗಾಗಿ, ಎಲ್ಲರೂ ವ್ಯಾಪಾರದ ಭರಾಟೆಯಲಿ,
ಕಷ್ಟದ ನಷ್ಟ ತುಂಬವ ಲೆಕ್ಕಾಚಾರದಲಿ ತೊಡಗಿದ್ದಾರೆ.
ಅವಳು ನೋಡುತ್ತಿದ್ದಾಳೆ ಗಾಳಿ ಬೀಸಿದತ್ತ ಚದುರುವ ಜನಗಳ,

ಒಂದು ಊಟ, ಒಂದು ಆಟದ ಸಾಮಾನು ಮಗಳಿಗೆ
ಕೊಡಿಸಬಹುದಾಗಿತ್ತು, ಆದರೆ ಆತುರದ ಜೀವ
ಹಸಿದ ಪ್ರಾಣಿಯಂತೆ, ಅವಳ ಹಿಂಬಾಲಿಸಿ ಸನ್ನೆ ಮಾಡುತ್ತಿತ್ತು.
ಕಣ್ಣೀರಿನಿಂದ ಸುಟ್ಟ ಅವಳ ಕಣ್ಣುಗಳಲಿ ಬಹಳಷ್ಟು ವರ್ಷಗಳ ದುಃಖ.
ಜಾತ್ರೆ ಜನಜಂಗುಳಿಯ ಮಧ್ಯೆ ಸಂತಳ ನೆರಳು ಹರಡಿತ್ತು.
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...