ಗಣಪತಿಯ ಸ್ತೋತ್ರ

ಗಂಧ ಕಸ್ತುರಿ ಪುನಗಽ |
ಗೌರವ್ವನ | ಕಂದಗ ಧರಿಸಿದರಽ |
ಅಂದದ ಬಿಳಿ‌ಎಲಿ ಆಡಕಿ ಕಾಚವು ಸುಣ್ಣ |
ಮುಂದ ಮಡೆಚಿನಿಟ್ಟು ಮಲ್ಲಿಽಗಿ ಮಳೆಗರೆದ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೧||

ರಾಜಾನ್ನ ಕೆನೆಮಸರಽ |
ರುಚಿಗಾಯಿ | ಭೋಜನಕ ಸವಿಮಜ್ಜಿಗೆಽ |
ಸಾಜನಾಗಿ ಬಂದು ಸೆಳೆಮಂಚದಲಿ ಕುಳಿತು |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೨||

ಹಣ್ಣ ಹಪ್ಪಳ ಶೆಂಡಿಽಗಿ |
ಎಳಸಾದ | ಸಣ್ಣ ಶಾವಿಗಿ ಬಸೆದಽ |
ಉಂಡ ಮಗಿ ನೊರೆಹಾಲ ಉದರ-ಸಕ್ಕರಿ ತುಪ್ಪ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೩||

ಚಿಗುಳಿ ಚಿನ್ಪಾಲ್ ಬಚ್ಚೇವಽ |
ಚಿಟುಬಾಳಿ | ಅಗಲೋಳು ಗರಿಕಾಣೆನಽ |
ಪರಿಪರಿ ಸೋಬಸ್ತ ಪರಿಮಽಳನೇರಸ್ತ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೪||

ಸುರ ಹರಿ ನಮ ದೇವರ ಕಾಳಿಽ |
ಧೊರಿಪೂಜಿ | ಧೊರಿಪೂಜಿ ಮಾಽಡುನಽ |
ಪರಿಪರಿ ಸೋಬಸ್ತ ಪರಿಮಽಳನೇರಸ್ತ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೫||
*****

ಈ ಹಾಡಿನ ಮೊದಲನೆಯ ನುಡಿಯಲ್ಲಿ ಪೂಜೆಯ ಪರಿಯೂ ಮುಂದಿನ ಮೂರು ನುಡಿಗಳಲ್ಲಿ ನೈವೇದ್ಯದ ವಿಸ್ತಾರವೂ ವರ್ಣಿಸಲ್ಪಟ್ಟಿವೆ. ಕೊನೆಯ ನುಡಿಯು ಸಾಂಪ್ರದಾಯಿಕವಾಗಿದೆ.

ಛಂದಸ್ಸು: ಐದೈದು ಮಾತ್ರೆಯ ಗಣಗಳಿವೆ. ಮೊದಲನೆಯ ನುಡಿಯಲ್ಲಿ ಒಂದು ಡೊಡ್ಡ ಚರಣವು ಹೆಚ್ಚಿಗೆ ಬಿದ್ದಿದೆ.

ಶಬ್ದ ಪ್ರಯೋಗಗಳು: ಸಾಜ=ಶೃಂಗಾರ. ಸೆಳೆಮಂಚ=ತೂಗುಮಣೆ. ಸೋಬಸ್ತ=ಶೋಭಿಸುತ್ತ. ಏರಸ್ತ=ಏರಿಸುತ್ತೇನೆ. ಧೊರಿಪೂಜಿ=ವೈಭವದ ಪೂಜೆ. ಸೆಂಡೆಗಿ, ಹೆಪ್ಪಳ, ಶಾಂವಗಿ, ಚಿಗುಳಿ ಇವು ಭೋಜನದ ಪದಾರ್ಥಗಳು. ಚಿನ್ಪಾಲ್‌ ಮತ್ತು ಬಚ್ಚೇವ ಎಂಬವುಗಳೂ ಅವೇ. ಆದರೆ ಇವೆರಡರ ಸರಿಯಾದ ಕಲ್ಪನೆ ಮಾತ್ರ ಬರುವಂತಿಲ್ಲ.

“ಚಿಟುಬಾಳಿ ಅಗಲೋಳು ಗರಿ ಕಾಣೆನ” ಎಂದರೆ ಕಿರಿಬಾಳಿಯ ಎಲೆಯ ಮೇಲೆ ಎಡೆಬಡಿಸಿದ ಸಾಮಗ್ರಿಗಳು, ಎಲೆಯ ನಡುವಿನ ಗರಿ ಕಾಣದಷ್ಟು ತುಂಬಿದ್ದನೆಂದು ಅರ್‍ಥ.

ಈ ಹಾಡು ಪಾಂಚಾಲ ಜಾತಿಯವರಲ್ಲಿ ಪ್ರಚಾರವುಳ್ಳದ್ದಾಗಿರುವುದರಿಂದ ಅವರ ಆರಾಧ್ಯದೈವತವಾದ ಕಾಲೀದೇವಿಯ ಉಲ್ಲೇಖವು ಕೊನೆಯ ನುಡಿಯಲ್ಲಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಡದಿದ್ದರೆ ಮುನೇಶ್ವರ
Next post ನಾ ಕಂಡ ಕವಿ ಹೃದಯಿ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys