Home / ಕವನ / ಕವಿತೆ / ಗಣಪತಿಯ ಸ್ತೋತ್ರ

ಗಣಪತಿಯ ಸ್ತೋತ್ರ

ಗಂಧ ಕಸ್ತುರಿ ಪುನಗಽ |
ಗೌರವ್ವನ | ಕಂದಗ ಧರಿಸಿದರಽ |
ಅಂದದ ಬಿಳಿ‌ಎಲಿ ಆಡಕಿ ಕಾಚವು ಸುಣ್ಣ |
ಮುಂದ ಮಡೆಚಿನಿಟ್ಟು ಮಲ್ಲಿಽಗಿ ಮಳೆಗರೆದ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೧||

ರಾಜಾನ್ನ ಕೆನೆಮಸರಽ |
ರುಚಿಗಾಯಿ | ಭೋಜನಕ ಸವಿಮಜ್ಜಿಗೆಽ |
ಸಾಜನಾಗಿ ಬಂದು ಸೆಳೆಮಂಚದಲಿ ಕುಳಿತು |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೨||

ಹಣ್ಣ ಹಪ್ಪಳ ಶೆಂಡಿಽಗಿ |
ಎಳಸಾದ | ಸಣ್ಣ ಶಾವಿಗಿ ಬಸೆದಽ |
ಉಂಡ ಮಗಿ ನೊರೆಹಾಲ ಉದರ-ಸಕ್ಕರಿ ತುಪ್ಪ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೩||

ಚಿಗುಳಿ ಚಿನ್ಪಾಲ್ ಬಚ್ಚೇವಽ |
ಚಿಟುಬಾಳಿ | ಅಗಲೋಳು ಗರಿಕಾಣೆನಽ |
ಪರಿಪರಿ ಸೋಬಸ್ತ ಪರಿಮಽಳನೇರಸ್ತ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೪||

ಸುರ ಹರಿ ನಮ ದೇವರ ಕಾಳಿಽ |
ಧೊರಿಪೂಜಿ | ಧೊರಿಪೂಜಿ ಮಾಽಡುನಽ |
ಪರಿಪರಿ ಸೋಬಸ್ತ ಪರಿಮಽಳನೇರಸ್ತ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೫||
*****

ಈ ಹಾಡಿನ ಮೊದಲನೆಯ ನುಡಿಯಲ್ಲಿ ಪೂಜೆಯ ಪರಿಯೂ ಮುಂದಿನ ಮೂರು ನುಡಿಗಳಲ್ಲಿ ನೈವೇದ್ಯದ ವಿಸ್ತಾರವೂ ವರ್ಣಿಸಲ್ಪಟ್ಟಿವೆ. ಕೊನೆಯ ನುಡಿಯು ಸಾಂಪ್ರದಾಯಿಕವಾಗಿದೆ.

ಛಂದಸ್ಸು: ಐದೈದು ಮಾತ್ರೆಯ ಗಣಗಳಿವೆ. ಮೊದಲನೆಯ ನುಡಿಯಲ್ಲಿ ಒಂದು ಡೊಡ್ಡ ಚರಣವು ಹೆಚ್ಚಿಗೆ ಬಿದ್ದಿದೆ.

ಶಬ್ದ ಪ್ರಯೋಗಗಳು: ಸಾಜ=ಶೃಂಗಾರ. ಸೆಳೆಮಂಚ=ತೂಗುಮಣೆ. ಸೋಬಸ್ತ=ಶೋಭಿಸುತ್ತ. ಏರಸ್ತ=ಏರಿಸುತ್ತೇನೆ. ಧೊರಿಪೂಜಿ=ವೈಭವದ ಪೂಜೆ. ಸೆಂಡೆಗಿ, ಹೆಪ್ಪಳ, ಶಾಂವಗಿ, ಚಿಗುಳಿ ಇವು ಭೋಜನದ ಪದಾರ್ಥಗಳು. ಚಿನ್ಪಾಲ್‌ ಮತ್ತು ಬಚ್ಚೇವ ಎಂಬವುಗಳೂ ಅವೇ. ಆದರೆ ಇವೆರಡರ ಸರಿಯಾದ ಕಲ್ಪನೆ ಮಾತ್ರ ಬರುವಂತಿಲ್ಲ.

“ಚಿಟುಬಾಳಿ ಅಗಲೋಳು ಗರಿ ಕಾಣೆನ” ಎಂದರೆ ಕಿರಿಬಾಳಿಯ ಎಲೆಯ ಮೇಲೆ ಎಡೆಬಡಿಸಿದ ಸಾಮಗ್ರಿಗಳು, ಎಲೆಯ ನಡುವಿನ ಗರಿ ಕಾಣದಷ್ಟು ತುಂಬಿದ್ದನೆಂದು ಅರ್‍ಥ.

ಈ ಹಾಡು ಪಾಂಚಾಲ ಜಾತಿಯವರಲ್ಲಿ ಪ್ರಚಾರವುಳ್ಳದ್ದಾಗಿರುವುದರಿಂದ ಅವರ ಆರಾಧ್ಯದೈವತವಾದ ಕಾಲೀದೇವಿಯ ಉಲ್ಲೇಖವು ಕೊನೆಯ ನುಡಿಯಲ್ಲಿದೆ.

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...