ಕಾಣೆಯಾಗಿವೆ

ಮನೆಯ ತುಂಬ ಹಾರಿಕೊಂಡು
ಅಡುಗೆ ಮನೆಗೆ ನುಗ್ಗಿಕೊಂಡು
ಅಂಗಳದಲ್ಲಿ ನಲಿದುಕೊಂಡು
ನಮ್ಮ ನೋಡಿ ಹೆದರಿಕೊಂಡು
ಬುರ್ರೆಂದು ಹಾರಿ ಹೋಗಿ
ಮತ್ತೆ ಮತ್ತೆ ಇಣುಕುತ್ತಿದ್ದ
ಚಿಲಿಪಿಲಿ ಹಾಡಿಕೊಂಡು
ಮಕ್ಕಳಿಗೆ ಕುಶಿ ಕೊಡುತ್ತಿದ್ದ
ಗುಬ್ಬಚ್ಚಿಗಳೆಲ್ಲಿ ಕಾಣೆಯಾದುವು?

ಅಕ್ಕಿ ಬೇಳೆ ಕೇರುವಾಗ
ದೂರ ನಿಂತು ಹೆಕ್ಕುತ್ತಿದ್ದ
ಮನುಷ್ಯರಿಂದ ದೂರವಿದ್ದು
ಮಡಿಧರ್‍ಮ ಪಾಲಿಸುತ್ತಿದ್ದ
ಪುಟ್ಟ ಪುಟ್ಟ ಹೂವಿನಂತಹ
ಗುಬ್ಬಚ್ಚಿಗಳೆಲ್ಲಿ ಮಾಯವಾದವು?

ಪುಟ್ಟ ಗೂಡು ಕಟ್ಟಲೆಂದು
ಕಸಕಡ್ಡಿ ನಾರುಗೀರು ಹೆಕ್ಕಿ ತಂದು
ಅಲ್ಲಿ ಇಲ್ಲಿ ಕದ್ದು ಮುಚ್ಚಿ ಇಟ್ಟುಕೊಂಡು
ಗೂಡ ನೈದು ತೊಲೆಯ ಮೇಲೆ ನೇತು ಬಿಡುವ
ಗುಬ್ಬಚ್ಚಿಗಳೆಲ್ಲಿ ಓಡಿಹೋದವು?

ಮೂರ್ತಿ ಚಿಕ್ಕದು ಬುದ್ದಿ ದೊಡ್ಡದು
ಪ್ಲಾನು ಇಲ್ಲ ಶಿಲ್ಪ ಶಾಸ್ತ್ರವಿಲ್ಲ
ಕಟ್ಟುವ ಗೂಡಿಗೆ ಬಿರುಕು ಇಲ್ಲ.
ಕೊಕ್ಕಿನಿಂದ ಗೂಡ ಹೆಣೆದು
ತುಂಬು ಸಂಸಾರ ಹೂಡುವ ದೊಡ್ಡ ಮನದ
ಗುಬ್ಬಚ್ಚಿಗಳೇಕೆ ಇಲ್ಲವಾದುವು?

ಅಕ್ಕಿ ಕಾಳು ಕೇರದಿರುವ
ಕಿಟಕಿಬಾಗಿಲುಗಳೆಲ್ಲವ ಮುಚ್ಚಿ
ಒಳಗೆ ಕುಳಿತು ಸೊರಗುತ್ತಿರುವ
ಮಾನವತೆಯ ಮರೆಯುತ್ತಿರುವ
ಮನುಜ ಕುಲವ ಕಂಡು ಹೇಸಿ
ನಾಡ ಬಿಟ್ಟು ಹಾರಿ ಹೋದುವೇನು
ಆ ಪುಟ್ಟ ಪುಟ್ಟ ಮುದ್ದು ಹಕ್ಕಿಗಳು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೋರುವುದು ಕನ್ನಡಿ ಈ ಚೆಲುವು ಕರಗುವುದ
Next post ಅಯ್ಯೋ ಪಾಪ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…