ಕಾಣೆಯಾಗಿವೆ

ಮನೆಯ ತುಂಬ ಹಾರಿಕೊಂಡು
ಅಡುಗೆ ಮನೆಗೆ ನುಗ್ಗಿಕೊಂಡು
ಅಂಗಳದಲ್ಲಿ ನಲಿದುಕೊಂಡು
ನಮ್ಮ ನೋಡಿ ಹೆದರಿಕೊಂಡು
ಬುರ್ರೆಂದು ಹಾರಿ ಹೋಗಿ
ಮತ್ತೆ ಮತ್ತೆ ಇಣುಕುತ್ತಿದ್ದ
ಚಿಲಿಪಿಲಿ ಹಾಡಿಕೊಂಡು
ಮಕ್ಕಳಿಗೆ ಕುಶಿ ಕೊಡುತ್ತಿದ್ದ
ಗುಬ್ಬಚ್ಚಿಗಳೆಲ್ಲಿ ಕಾಣೆಯಾದುವು?

ಅಕ್ಕಿ ಬೇಳೆ ಕೇರುವಾಗ
ದೂರ ನಿಂತು ಹೆಕ್ಕುತ್ತಿದ್ದ
ಮನುಷ್ಯರಿಂದ ದೂರವಿದ್ದು
ಮಡಿಧರ್‍ಮ ಪಾಲಿಸುತ್ತಿದ್ದ
ಪುಟ್ಟ ಪುಟ್ಟ ಹೂವಿನಂತಹ
ಗುಬ್ಬಚ್ಚಿಗಳೆಲ್ಲಿ ಮಾಯವಾದವು?

ಪುಟ್ಟ ಗೂಡು ಕಟ್ಟಲೆಂದು
ಕಸಕಡ್ಡಿ ನಾರುಗೀರು ಹೆಕ್ಕಿ ತಂದು
ಅಲ್ಲಿ ಇಲ್ಲಿ ಕದ್ದು ಮುಚ್ಚಿ ಇಟ್ಟುಕೊಂಡು
ಗೂಡ ನೈದು ತೊಲೆಯ ಮೇಲೆ ನೇತು ಬಿಡುವ
ಗುಬ್ಬಚ್ಚಿಗಳೆಲ್ಲಿ ಓಡಿಹೋದವು?

ಮೂರ್ತಿ ಚಿಕ್ಕದು ಬುದ್ದಿ ದೊಡ್ಡದು
ಪ್ಲಾನು ಇಲ್ಲ ಶಿಲ್ಪ ಶಾಸ್ತ್ರವಿಲ್ಲ
ಕಟ್ಟುವ ಗೂಡಿಗೆ ಬಿರುಕು ಇಲ್ಲ.
ಕೊಕ್ಕಿನಿಂದ ಗೂಡ ಹೆಣೆದು
ತುಂಬು ಸಂಸಾರ ಹೂಡುವ ದೊಡ್ಡ ಮನದ
ಗುಬ್ಬಚ್ಚಿಗಳೇಕೆ ಇಲ್ಲವಾದುವು?

ಅಕ್ಕಿ ಕಾಳು ಕೇರದಿರುವ
ಕಿಟಕಿಬಾಗಿಲುಗಳೆಲ್ಲವ ಮುಚ್ಚಿ
ಒಳಗೆ ಕುಳಿತು ಸೊರಗುತ್ತಿರುವ
ಮಾನವತೆಯ ಮರೆಯುತ್ತಿರುವ
ಮನುಜ ಕುಲವ ಕಂಡು ಹೇಸಿ
ನಾಡ ಬಿಟ್ಟು ಹಾರಿ ಹೋದುವೇನು
ಆ ಪುಟ್ಟ ಪುಟ್ಟ ಮುದ್ದು ಹಕ್ಕಿಗಳು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೋರುವುದು ಕನ್ನಡಿ ಈ ಚೆಲುವು ಕರಗುವುದ
Next post ಅಯ್ಯೋ ಪಾಪ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…