Home / ಕವನ / ಕವಿತೆ / ಕಾಣೆಯಾಗಿವೆ

ಕಾಣೆಯಾಗಿವೆ

ಮನೆಯ ತುಂಬ ಹಾರಿಕೊಂಡು
ಅಡುಗೆ ಮನೆಗೆ ನುಗ್ಗಿಕೊಂಡು
ಅಂಗಳದಲ್ಲಿ ನಲಿದುಕೊಂಡು
ನಮ್ಮ ನೋಡಿ ಹೆದರಿಕೊಂಡು
ಬುರ್ರೆಂದು ಹಾರಿ ಹೋಗಿ
ಮತ್ತೆ ಮತ್ತೆ ಇಣುಕುತ್ತಿದ್ದ
ಚಿಲಿಪಿಲಿ ಹಾಡಿಕೊಂಡು
ಮಕ್ಕಳಿಗೆ ಕುಶಿ ಕೊಡುತ್ತಿದ್ದ
ಗುಬ್ಬಚ್ಚಿಗಳೆಲ್ಲಿ ಕಾಣೆಯಾದುವು?

ಅಕ್ಕಿ ಬೇಳೆ ಕೇರುವಾಗ
ದೂರ ನಿಂತು ಹೆಕ್ಕುತ್ತಿದ್ದ
ಮನುಷ್ಯರಿಂದ ದೂರವಿದ್ದು
ಮಡಿಧರ್‍ಮ ಪಾಲಿಸುತ್ತಿದ್ದ
ಪುಟ್ಟ ಪುಟ್ಟ ಹೂವಿನಂತಹ
ಗುಬ್ಬಚ್ಚಿಗಳೆಲ್ಲಿ ಮಾಯವಾದವು?

ಪುಟ್ಟ ಗೂಡು ಕಟ್ಟಲೆಂದು
ಕಸಕಡ್ಡಿ ನಾರುಗೀರು ಹೆಕ್ಕಿ ತಂದು
ಅಲ್ಲಿ ಇಲ್ಲಿ ಕದ್ದು ಮುಚ್ಚಿ ಇಟ್ಟುಕೊಂಡು
ಗೂಡ ನೈದು ತೊಲೆಯ ಮೇಲೆ ನೇತು ಬಿಡುವ
ಗುಬ್ಬಚ್ಚಿಗಳೆಲ್ಲಿ ಓಡಿಹೋದವು?

ಮೂರ್ತಿ ಚಿಕ್ಕದು ಬುದ್ದಿ ದೊಡ್ಡದು
ಪ್ಲಾನು ಇಲ್ಲ ಶಿಲ್ಪ ಶಾಸ್ತ್ರವಿಲ್ಲ
ಕಟ್ಟುವ ಗೂಡಿಗೆ ಬಿರುಕು ಇಲ್ಲ.
ಕೊಕ್ಕಿನಿಂದ ಗೂಡ ಹೆಣೆದು
ತುಂಬು ಸಂಸಾರ ಹೂಡುವ ದೊಡ್ಡ ಮನದ
ಗುಬ್ಬಚ್ಚಿಗಳೇಕೆ ಇಲ್ಲವಾದುವು?

ಅಕ್ಕಿ ಕಾಳು ಕೇರದಿರುವ
ಕಿಟಕಿಬಾಗಿಲುಗಳೆಲ್ಲವ ಮುಚ್ಚಿ
ಒಳಗೆ ಕುಳಿತು ಸೊರಗುತ್ತಿರುವ
ಮಾನವತೆಯ ಮರೆಯುತ್ತಿರುವ
ಮನುಜ ಕುಲವ ಕಂಡು ಹೇಸಿ
ನಾಡ ಬಿಟ್ಟು ಹಾರಿ ಹೋದುವೇನು
ಆ ಪುಟ್ಟ ಪುಟ್ಟ ಮುದ್ದು ಹಕ್ಕಿಗಳು?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...