Home / ಕವನ / ಕವಿತೆ / ಕಾಣೆಯಾಗಿವೆ

ಕಾಣೆಯಾಗಿವೆ

ಮನೆಯ ತುಂಬ ಹಾರಿಕೊಂಡು
ಅಡುಗೆ ಮನೆಗೆ ನುಗ್ಗಿಕೊಂಡು
ಅಂಗಳದಲ್ಲಿ ನಲಿದುಕೊಂಡು
ನಮ್ಮ ನೋಡಿ ಹೆದರಿಕೊಂಡು
ಬುರ್ರೆಂದು ಹಾರಿ ಹೋಗಿ
ಮತ್ತೆ ಮತ್ತೆ ಇಣುಕುತ್ತಿದ್ದ
ಚಿಲಿಪಿಲಿ ಹಾಡಿಕೊಂಡು
ಮಕ್ಕಳಿಗೆ ಕುಶಿ ಕೊಡುತ್ತಿದ್ದ
ಗುಬ್ಬಚ್ಚಿಗಳೆಲ್ಲಿ ಕಾಣೆಯಾದುವು?

ಅಕ್ಕಿ ಬೇಳೆ ಕೇರುವಾಗ
ದೂರ ನಿಂತು ಹೆಕ್ಕುತ್ತಿದ್ದ
ಮನುಷ್ಯರಿಂದ ದೂರವಿದ್ದು
ಮಡಿಧರ್‍ಮ ಪಾಲಿಸುತ್ತಿದ್ದ
ಪುಟ್ಟ ಪುಟ್ಟ ಹೂವಿನಂತಹ
ಗುಬ್ಬಚ್ಚಿಗಳೆಲ್ಲಿ ಮಾಯವಾದವು?

ಪುಟ್ಟ ಗೂಡು ಕಟ್ಟಲೆಂದು
ಕಸಕಡ್ಡಿ ನಾರುಗೀರು ಹೆಕ್ಕಿ ತಂದು
ಅಲ್ಲಿ ಇಲ್ಲಿ ಕದ್ದು ಮುಚ್ಚಿ ಇಟ್ಟುಕೊಂಡು
ಗೂಡ ನೈದು ತೊಲೆಯ ಮೇಲೆ ನೇತು ಬಿಡುವ
ಗುಬ್ಬಚ್ಚಿಗಳೆಲ್ಲಿ ಓಡಿಹೋದವು?

ಮೂರ್ತಿ ಚಿಕ್ಕದು ಬುದ್ದಿ ದೊಡ್ಡದು
ಪ್ಲಾನು ಇಲ್ಲ ಶಿಲ್ಪ ಶಾಸ್ತ್ರವಿಲ್ಲ
ಕಟ್ಟುವ ಗೂಡಿಗೆ ಬಿರುಕು ಇಲ್ಲ.
ಕೊಕ್ಕಿನಿಂದ ಗೂಡ ಹೆಣೆದು
ತುಂಬು ಸಂಸಾರ ಹೂಡುವ ದೊಡ್ಡ ಮನದ
ಗುಬ್ಬಚ್ಚಿಗಳೇಕೆ ಇಲ್ಲವಾದುವು?

ಅಕ್ಕಿ ಕಾಳು ಕೇರದಿರುವ
ಕಿಟಕಿಬಾಗಿಲುಗಳೆಲ್ಲವ ಮುಚ್ಚಿ
ಒಳಗೆ ಕುಳಿತು ಸೊರಗುತ್ತಿರುವ
ಮಾನವತೆಯ ಮರೆಯುತ್ತಿರುವ
ಮನುಜ ಕುಲವ ಕಂಡು ಹೇಸಿ
ನಾಡ ಬಿಟ್ಟು ಹಾರಿ ಹೋದುವೇನು
ಆ ಪುಟ್ಟ ಪುಟ್ಟ ಮುದ್ದು ಹಕ್ಕಿಗಳು?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...