ಕತ್ತಲಲ್ಲೂ ಹೊಳೆಯುವ ಬಟ್ಟೆ

ಕತ್ತಲಲ್ಲೂ ಹೊಳೆಯುವ ಬಟ್ಟೆ

ಕತ್ತಲಲ್ಲಿ ವಾಹನಗಳ ಬರುವಿಕೆಯನ್ನು ಅವುಗಳ ಹೆಡ್ ಲೈಟ್‌ಗಳಿಂದ ಪತ್ತೆ ಹಚ್ಚಬಹುದು. ದಾರಿಯಲ್ಲಿಯ ಕೈಮರ, ಸೂಚನಾ ಫಲಕಗಳಿಗೆ ಬೆಳಕು ಬಿದ್ದಾಗ ಅದರಲ್ಲಿಯ ರಂಜಕದ ಅಂಶದಿಂದ ಅಲ್ಲಿಯ ಅಕ್ಷರಗಳು ಹೊಳೆಯುತ್ತವೆ. ರಾತ್ರಿಯಲ್ಲಿ ಬೆಕ್ಕೂ, ಹುಲಿಗಳು ತಿರುಗಾಡಿದರೂ ಅವುಗಳ ಕಣ್ಣುಗಳು ಸಹ ಹೊಳೆಯುತ್ತವೆ. ಆದರೆ ಮನುಷ್ಯರು ಧರಿಸಿದ ಬಟ್ಟೆಗಳು ರಾತ್ರಿಯಲ್ಲಿ ಹೊಳೆಯುತ್ತವೆ, ಎಂದರೆ ಸೋಜಿಗ ಅಲ್ಲವೆ? ಇಂಥಹ ಶರ್ಟ್‌ಗಳನ್ನು ಜಪಾನ್ ದೇಶ ಕಂಡುಹಿಡಿದು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಕತ್ತಲಾದಂತೆಲ್ಲ ತಮ್ಮ ಕಾಂತಿಯಿಂದ ಎದುರಿಗೆ ಬರುವವರಿಗೆ ಒಬ್ಬ ವ್ಯಕ್ತಿ ಬರುತ್ತಿದ್ದಾನೆ ದಾರಿಬಿಡಬೇಕೆಂದು ತಿಳಿಯುತ್ತದೆ. ಇಂಥಹಬಟ್ಟೆಗಳನ್ನು ದೇಹದ ಮೇಲೆ ಸುಲಭವಾಗಿ ಧರಿಸಬಹುದು. ಇದು ಬೆಳಕಿನಲ್ಲಿ ಸಾಧಾರಣವಿರುತ್ತದೆ, ಆದರೆ ರಾತ್ರಿಯಾಯಿತೆಂದರೆ ಹೊಳೆಯಲಾರಂಭಿಸುತ್ತದೆ. ಈ ಬಟ್ಟೆಯಲ್ಲಿ ಮನೆಯಲ್ಲಿಯ ಪ್ರಮುಖ ವಸ್ತುಗಳನ್ನು ಸುತ್ತಿಟ್ಟರೆ ಅದು ಹೊಳೆದು ಅದರ ಸ್ಥಳವಮ್ನ ಗುರುತಿಸುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೊಲ್ಲಾಪುರದ ಸಿದ್ಧರಾಮೇಶ್ವರ ಸ್ತೋತ್ರ
Next post ತೇಲುತಿರುವ ಮುಗಿಲುಗಳಿಗೆ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…