ದೀಪವಾರಿದೆ ಹಣತೆ ಉಳಿದಿದೆ

ದೀಪವಾರಿದೆ ಹಣತೆ ಉಳಿದಿದೆ
ನಿನಗೆ ಕೋರುವೆ ಮಂಗಳ

ಬೆಟ್ಟ ಹತ್ತಿದೆ ಕಣಿವೆ ದಾಟಿದೆ
ಕಂಡೆ ಕಾಣದ ಹೊಸ ಜಗ
ಗಾಳಿಯಲ್ಲಿ ನೂರು ರಾಗ
ಎದೆಯೊಳೆಲ್ಲಾ ಝಗಮಗ
ಅದಕೆ ನಿನಗೆ ವಂದನೆ
ಬೇರೆಯಿಲ್ಲ ಚಿಂತನೆ

ಬೆಳದಿಂಗಳ ಹಾಲ ಕುಡಿದೆ
ಚಂದ್ರನ ಮೇಲೆ ಆಡಿದೆ
ತೇಲುತ ಬಂದ ಮೋಡವ ಹಿಡಿದೆ
ತಾರೆಗಳೊಡನೆ ಕುಣಿಕುಣಿದೆ
ಅದಕೆ ನಿನಗೆ ವಂದನೆ
ಬೇರೆಯಿಲ್ಲ ಚಿಂತನೆ

ನಡೆದಾಡಿದ ನೆಲ ಹಾಡಿದೆ ಶೋಕ
ಕುಣಿದಾಡಿದ ಜಲ ಸ್ತಬ್ಧ
ಗಾಳಿಯುಸಿರಿದ ನೂರು ಕವಿತೆ
ಎಲ್ಲವೂ ಧಗ್ಧ, ನಿಶ್ಶಬ್ದ
ಆದರೂ ನಿನಗೆ ವಂದನೆ
ಬೇರೆಯಿಲ್ಲ ಚಿಂತನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರೆ
Next post ಅವಾರ್ಡ್

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…