ಹಿಂದೂಮುಸಲ್ಮಾನರ ಐಕ್ಯ – ೭

ಹಿಂದೂಮುಸಲ್ಮಾನರ ಐಕ್ಯ – ೭

ಲೋಕಮಾನ್ಯರಾದ ಗುಲಾಮು ಅಲಿ ಹಾಗು ಮಾಯೆಯ ಆಹ್ವಾನಕ್ಕನುಸರಿಸಿ ಜಹಗೀರಿನೊಳಗಿನ ಶಸ್ತ್ರಹಿಡಿಯಲು ಶಕ್ತರಾದ ಎಲ್ಲ ಗಂಡಸರೂ ತಮ್ಮ ಮನೆಯಲ್ಲಿದ್ದ ಬಿದ್ದ ಶಸ್ತ್ರಗಳನ್ನು ತಕ್ಕೊಂಡು ಬಂದು ದಂಡಿನಲ್ಲಿ ಸೇರಿದರು. ಆ ಜಹಗೀರಿನೊಳಗಿನ ಎಲ್ಲ ಬಡಿಗ-ಕಮಾರರು ಹಗಲಿರಳುಗಳೆನ್ನದೆ – ಶಸ್ತ್ರಾಸ್ತ್ರಗಳನ್ನು ಮಾಡತೊಡಗಿದರು. ಜಹಗೀರದಾರನ ಈ ಸಂಪೂರ್ಣ ಸಿದ್ಧತೆಯ ಸುದ್ದಿ ಕೇಳಿ ನವಾಬನ ದಂಡು ಮುಂದರಿಯದಾಯಿತು ಅದು ಬಂದ ದಾರಿಯಿಂದಲೇ ಪಲಾಯನ ಹೇಳಿಸಿತು! ಹೀಗೆ ಗುಲಾಮನಿಗೆ ಮಾಯೆಯ ಸಹಾಯದಿಂದ ಒಂದು ಹನಿ ಕೂಡ ರಕ್ತಸ್ರಾವವಾಗದಂತೆ ವಿಜಯ ಪ್ರಾಪ್ತವಾಯಿತು!

ಇತ್ತ ಗುಲಾಮ ಆಲಿಯು ಜಯಭೇರಿಯನ್ನು ಹೊಡಿಸುತ್ತ ನಗರವನ್ನು ಪ್ರವೇಶಿಸುತ್ತಿರಲು, ಅತ್ತ ದಿಲ್ಲಿಯಿಂದ ಬರುತ್ತಿದ್ದ ಮಾನಸಿಂಗನು ದುರಾತ್ಮನಾದ ಮಜೀದಖಾನನ ದಂಡನ್ನು ನುಗ್ಗು ಮಾಡಿ, ಬಂಗಾಲ ಪ್ರಾಂತವನ್ನು ಆಕ್ರಮಿಸಿದನು. ಮಾನಸಿಂಹನಿಗೆ ಈ ಲೋಕಮಾನ್ಯ ಹಿಂದೂ-ಮುಸಲ್ಮಾನರನ್ನು ಐಕ್ಯಭಾವದಿಂದ ನಡೆಸಿಕೊಳ್ಳುವ ಗುಲಾಮ ಆಲಿಯ ನಿಪೃಹ ವರ್ತನ ತಿಳಿಯಲು, ಅವನು ಇವನ ಇಡಿ ಜಹಗೀರನ್ನು ಇವನಿಗೇ ಬಿಟ್ಟು ಕೊಟ್ಟನು.

ಯಾವನು ಧರ್ಮವನ್ನು ರಕ್ಷಿಸುವನೋ ಅದು ಅವನನ್ನು ತಪ್ಪದೇ ರಕ್ಷಿಸುವದು.
*****
ಸಂಪೂರ್ಣ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಚಿತ್ರ ನಿನ್ನಯ ಲೀಲೆ
Next post ಕನಸು

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…