Home / ಕಥೆ / ನೀಳ್ಗತೆ / ಹಿಂದೂಮುಸಲ್ಮಾನರ ಐಕ್ಯ – ೭

ಹಿಂದೂಮುಸಲ್ಮಾನರ ಐಕ್ಯ – ೭

ಲೋಕಮಾನ್ಯರಾದ ಗುಲಾಮು ಅಲಿ ಹಾಗು ಮಾಯೆಯ ಆಹ್ವಾನಕ್ಕನುಸರಿಸಿ ಜಹಗೀರಿನೊಳಗಿನ ಶಸ್ತ್ರಹಿಡಿಯಲು ಶಕ್ತರಾದ ಎಲ್ಲ ಗಂಡಸರೂ ತಮ್ಮ ಮನೆಯಲ್ಲಿದ್ದ ಬಿದ್ದ ಶಸ್ತ್ರಗಳನ್ನು ತಕ್ಕೊಂಡು ಬಂದು ದಂಡಿನಲ್ಲಿ ಸೇರಿದರು. ಆ ಜಹಗೀರಿನೊಳಗಿನ ಎಲ್ಲ ಬಡಿಗ-ಕಮಾರರು ಹಗಲಿರಳುಗಳೆನ್ನದೆ – ಶಸ್ತ್ರಾಸ್ತ್ರಗಳನ್ನು ಮಾಡತೊಡಗಿದರು. ಜಹಗೀರದಾರನ ಈ ಸಂಪೂರ್ಣ ಸಿದ್ಧತೆಯ ಸುದ್ದಿ ಕೇಳಿ ನವಾಬನ ದಂಡು ಮುಂದರಿಯದಾಯಿತು ಅದು ಬಂದ ದಾರಿಯಿಂದಲೇ ಪಲಾಯನ ಹೇಳಿಸಿತು! ಹೀಗೆ ಗುಲಾಮನಿಗೆ ಮಾಯೆಯ ಸಹಾಯದಿಂದ ಒಂದು ಹನಿ ಕೂಡ ರಕ್ತಸ್ರಾವವಾಗದಂತೆ ವಿಜಯ ಪ್ರಾಪ್ತವಾಯಿತು!

ಇತ್ತ ಗುಲಾಮ ಆಲಿಯು ಜಯಭೇರಿಯನ್ನು ಹೊಡಿಸುತ್ತ ನಗರವನ್ನು ಪ್ರವೇಶಿಸುತ್ತಿರಲು, ಅತ್ತ ದಿಲ್ಲಿಯಿಂದ ಬರುತ್ತಿದ್ದ ಮಾನಸಿಂಗನು ದುರಾತ್ಮನಾದ ಮಜೀದಖಾನನ ದಂಡನ್ನು ನುಗ್ಗು ಮಾಡಿ, ಬಂಗಾಲ ಪ್ರಾಂತವನ್ನು ಆಕ್ರಮಿಸಿದನು. ಮಾನಸಿಂಹನಿಗೆ ಈ ಲೋಕಮಾನ್ಯ ಹಿಂದೂ-ಮುಸಲ್ಮಾನರನ್ನು ಐಕ್ಯಭಾವದಿಂದ ನಡೆಸಿಕೊಳ್ಳುವ ಗುಲಾಮ ಆಲಿಯ ನಿಪೃಹ ವರ್ತನ ತಿಳಿಯಲು, ಅವನು ಇವನ ಇಡಿ ಜಹಗೀರನ್ನು ಇವನಿಗೇ ಬಿಟ್ಟು ಕೊಟ್ಟನು.

ಯಾವನು ಧರ್ಮವನ್ನು ರಕ್ಷಿಸುವನೋ ಅದು ಅವನನ್ನು ತಪ್ಪದೇ ರಕ್ಷಿಸುವದು.
*****
ಸಂಪೂರ್ಣ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...