ಆಶಾಬೀ

ಜೀವನದಲ್ಲಿ ಕೇವಲ
ಹಸಿವು, ನೋವುಂಡು
ಬೆಳೆದವಳು ಆಶಾಬೀ.

ಹಸಿವಿನ ಕ್ರೂರ ಕೂಗನ್ನು
ಕೇಳಲಾರದೇ ಒಂದು ದಿನ
ತನ್ನೆರಡು ಹಸಳೆಗಳೊಡನೆ
ನೀರಿನ ಪಾಲಾದಳು.

ಆದರೆ, ಸಾವು ವಿಚಿತ್ರ.
ಅಲ್ಲಿಯೂ ಅವಳಿಗೆ ಸಹಕರಿಸಲಿಲ್ಲ.
ತನ್ನ ಕರುಳ ಕುಡಿಗಳ
ಕತ್ತನ್ನು ಹಿಸುಕಿದ ಅವಳು
ಕೊನೆಗೂ ಬದುಕಿಕೊಂಡಳು,
ಆದರೆ, ಕಾನೂನಿನ ಕ್ರೂರ
ಕೈಗಳಿಗೆ ಸಿಲುಕಿ
ನಲುಗಿ ಹೋದಳು.

ಜೈಲಿನ ಕಂಬಿಗಳ ಹಿಂದೆ
ಕ್ರೂರವಾದ ಬದುಕು
ಕತ್ತಲ ಕೋಣೆಯಲ್ಲಿ
ನಿರ್ವಾಹವಿಲ್ಲದೇ
ದಿನ ನೂಕುತ್ತಿದ್ದಳು.

ಸಾಯಲು ಕಾನೂನು
ಸಮ್ಮತಿಸುತ್ತಿಲ್ಲ.
– ಬದುಕಲು ಅವಳಿಗೆ ಇಷ್ಟವಿಲ್ಲ.
ಬಡತನದ ಬೇಗೆಯಲಿ
ಬೆಂದು ಹೋದ ಆಶಾಬಿಯ
ಎರಡು ಆಶೆಯ ಕುಡಿಗಳೂ
ಈಗ ಕಮರಿ ಹೋಗಿದ್ದವು.

ಬದುಕಲು ಮನಸ್ಸು ಒಪ್ಪದು
ಸಾಯಲು ಕಾನೂನು ಬಿಡದು
ಅಸಹಾಯಕತೆಯ ನಿಟ್ಟುಸಿರು
ಅವಳನ್ನು ಸುಟ್ಟು ಬಿಡುತ್ತಿತ್ತು.
ಮುದ್ದು ಕಂದಂಮ್ಮಗಳ ನೆನಪು
ಅವಳ ಕರುಳನ್ನು ಕೊರೆಯುತ್ತಿತ್ತು.

ಪುಟ್ಟ ಕಂದಮ್ಮಗಳ
ಕಪಟವರಿಯದ
ಮುದ್ದು ಮುಖಗಳ ನೆನಪು
ರಕ್ತ ಹೆಪ್ಪುಗಟ್ಟಿಸುತ್ತದೆ.
ಕಣುಗಳೂ ಸದಾ ಹಸಿ ಹಸಿ.

ಆದರೆ ಮರುಕ್ಷಣವೇ ಅವಳ ಕೈಗಳು
ಕಬ್ಬಿಣದಂತೆ ಗಟ್ಟಿಯಾಗುತ್ತವೆ.
ತನ್ನನ್ನು ಈ ಸ್ಥಿತಿಗೆ ದೂಡಿದ
ನಾಚಿಕೆಯಿಲ್ಲದ ವ್ಯವಸ್ಥೆಯ
ವಿರುದ್ಧ ಹೋರಾಡಲು
ತನ್ನ ನಿರಪರಾಧಿ ಕೂಸುಗಳಿಗೆ

ನ್ಯಾಯ ದೊರಕಿಸಿ ಕೊಡಲು
ಅವರ ಹಸಿವನ್ನು ನೀಗಿಸಲು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೋಕ ತಾನೆ ತಾನಾಗಿರಲು ನಾವು ಮಾಡುವುದೇನು?
Next post ನಿಜ ಹೇಳಲಾ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys