Home / ಕವನ / ಕವಿತೆ / ಆಶಾಬೀ

ಆಶಾಬೀ

ಜೀವನದಲ್ಲಿ ಕೇವಲ
ಹಸಿವು, ನೋವುಂಡು
ಬೆಳೆದವಳು ಆಶಾಬೀ.

ಹಸಿವಿನ ಕ್ರೂರ ಕೂಗನ್ನು
ಕೇಳಲಾರದೇ ಒಂದು ದಿನ
ತನ್ನೆರಡು ಹಸಳೆಗಳೊಡನೆ
ನೀರಿನ ಪಾಲಾದಳು.

ಆದರೆ, ಸಾವು ವಿಚಿತ್ರ.
ಅಲ್ಲಿಯೂ ಅವಳಿಗೆ ಸಹಕರಿಸಲಿಲ್ಲ.
ತನ್ನ ಕರುಳ ಕುಡಿಗಳ
ಕತ್ತನ್ನು ಹಿಸುಕಿದ ಅವಳು
ಕೊನೆಗೂ ಬದುಕಿಕೊಂಡಳು,
ಆದರೆ, ಕಾನೂನಿನ ಕ್ರೂರ
ಕೈಗಳಿಗೆ ಸಿಲುಕಿ
ನಲುಗಿ ಹೋದಳು.

ಜೈಲಿನ ಕಂಬಿಗಳ ಹಿಂದೆ
ಕ್ರೂರವಾದ ಬದುಕು
ಕತ್ತಲ ಕೋಣೆಯಲ್ಲಿ
ನಿರ್ವಾಹವಿಲ್ಲದೇ
ದಿನ ನೂಕುತ್ತಿದ್ದಳು.

ಸಾಯಲು ಕಾನೂನು
ಸಮ್ಮತಿಸುತ್ತಿಲ್ಲ.
– ಬದುಕಲು ಅವಳಿಗೆ ಇಷ್ಟವಿಲ್ಲ.
ಬಡತನದ ಬೇಗೆಯಲಿ
ಬೆಂದು ಹೋದ ಆಶಾಬಿಯ
ಎರಡು ಆಶೆಯ ಕುಡಿಗಳೂ
ಈಗ ಕಮರಿ ಹೋಗಿದ್ದವು.

ಬದುಕಲು ಮನಸ್ಸು ಒಪ್ಪದು
ಸಾಯಲು ಕಾನೂನು ಬಿಡದು
ಅಸಹಾಯಕತೆಯ ನಿಟ್ಟುಸಿರು
ಅವಳನ್ನು ಸುಟ್ಟು ಬಿಡುತ್ತಿತ್ತು.
ಮುದ್ದು ಕಂದಂಮ್ಮಗಳ ನೆನಪು
ಅವಳ ಕರುಳನ್ನು ಕೊರೆಯುತ್ತಿತ್ತು.

ಪುಟ್ಟ ಕಂದಮ್ಮಗಳ
ಕಪಟವರಿಯದ
ಮುದ್ದು ಮುಖಗಳ ನೆನಪು
ರಕ್ತ ಹೆಪ್ಪುಗಟ್ಟಿಸುತ್ತದೆ.
ಕಣುಗಳೂ ಸದಾ ಹಸಿ ಹಸಿ.

ಆದರೆ ಮರುಕ್ಷಣವೇ ಅವಳ ಕೈಗಳು
ಕಬ್ಬಿಣದಂತೆ ಗಟ್ಟಿಯಾಗುತ್ತವೆ.
ತನ್ನನ್ನು ಈ ಸ್ಥಿತಿಗೆ ದೂಡಿದ
ನಾಚಿಕೆಯಿಲ್ಲದ ವ್ಯವಸ್ಥೆಯ
ವಿರುದ್ಧ ಹೋರಾಡಲು
ತನ್ನ ನಿರಪರಾಧಿ ಕೂಸುಗಳಿಗೆ

ನ್ಯಾಯ ದೊರಕಿಸಿ ಕೊಡಲು
ಅವರ ಹಸಿವನ್ನು ನೀಗಿಸಲು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...