ಬರ್‍ಬರರು

ನಗು, ನಗುತ್ತ ಬಂದರು
ನರರೂಪ ರಾಕ್ಷಸರು
ಕೇಡಾಡಿ ಸುಟ್ಟು ಹಾಕಿದರು.

ಹೈನದ ಹಸು ಮಾಡಿ
ಹಲ್ಲಲ್ಲಿ ಹೀಜುತ್ತ ಹೋದರು
ಕಡೆಗೊಮ್ಮೆ,
ಕೆಚ್ಚಲು ಖಾಲಿಯಾಗೆ,
ಕೆಟ್ಟ ಕೃಷೆಯಲ್ಲಿ ಕುರುಡಾದರು-
ನಿರಾಶಯನು
ಹಿಂಸೆಯಲಿ ತಣಿಸಿಕೊಳ್ಳತೊಡಗಿದರು.

ಹೆಣ್ಣು- ಧರಿತ್ರಿ, ಪ್ರಕೃತಿ, ಶಕ್ತಿ, ದೇವತೆ
ಹಾಗೆ ಹೀಗೆಂದು ಪೂಜಿಸುವರು
ಹೆಣ್ಣು ಗೋಳು ಗುಡಿಸಲು ರಂಗ್ಳಿಸುವರು
ನಾ ಮುಂದು ತಾ ಮುಂದು ಎನ್ನುವರು.

ಮಾಡುವುದು ಅನಾಚಾರ
ಮನೆ ಮುಂದೆ ಬೃಂದಾವನ ವೆಂದಂತೆ
ತನಗಾದರೊಂದು ಅನ್ಯರಿಗಾದರಿನ್ನೊಂದೆಂಬ
ಇಬ್ಬಂದಿ ನೀತಿಯ ಪಿಶಾಚಿಗಳು
ಎಲ್ಲಕ್ಕೂ ಒಂದೊಂದು ಶ್ಲೋಕ
ಸಿದ್ಧವಾಗಿಟ್ಟಿಹರು.

ಇದು ನೋಡಿ
ಇದು! ಈ ನೆಲದ ನ್ಯಾಯ.
ಬಾಳೆಂದರೆ
ಬರಿ ಬಂಗಾರ, ಕುರುಡು ಕಾಂಚಾಣವಲ್ಲ
ಮನಸು ಮುಖ್ಯ.
ಹೆಣ್ಣು ಹೂವು,
ಅವಳನ್ನು ಪ್ರೀತಿಯಿಂದ ನಡೆಸಿಕೊಳ್ಳಬೇಕು
ಸುಖ, ಸಂತಸವ ಬಾಚಿ ಸುರಿದು ಕೊಳ್ಳಬೇಕೆಂಬ
ಸರಳ ಸೂತ್ರವೇ ಗೊತ್ತಿಲ್ಲದವರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಳಿತಾಗಲಿ
Next post ವಿಘಟನೆ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…