Home / ಕವನ / ಅನುವಾದ / ಸಾವಿಗೆ ಒಡೆತನವಿಲ್ಲ

ಸಾವಿಗೆ ಒಡೆತನವಿಲ್ಲ

ಸಾವಿಗೆ ಸ್ವಾಮಿತ್ವವಿಲ್ಲ
ಸತ್ತವರು ನಗ್ನರಾಗುವರು
ಗಾಳಿಯಲೆಯಲಿ ಸುಳಿವ
ಮನುಷ್ಯನಲಿ ಮತ್ತು ಪಶ್ಚಿಮ ಚಂದ್ರನಲಿ
ಬೆರೆತು ಹೋಗುವರು.
ಅವರ ಎಲುವನ್ನು ಸರಿಯಾಗಿ ಹೆಕ್ಕುವಾಗ
ಶುದ್ಧ ಎಲುಬು ಮಾಯಾವಾಗುವುದು,
ಅವರ ಮೊಣಕ್ಕೆ ಪಾದಗಳಲಿ
ನಕ್ಷತ್ರ ಕಾಣುವುದು;
ಹುಚ್ಚರಾಗಿಯು ಅವರು ಮತಿವಂತರು,
ಸಮುದ್ರದಾಳದಲಿ ಮುಳುಗಿಯು
ಮತ್ತೆ ಏಳುವರು;
ಪ್ರೇಮಿಗಳು ಸಾಯುವರು
ಪ್ರೇಮ ಸಾಯದು
ಮತ್ತು ಸಾವಿಗೆ ಒಡೆತನವಿಲ್ಲ.
ಸಾಗರದಲೆಗಳ ಸುಳಿಯೊಳಗೆ
ಬಹುಕಾಲ ಸೇರಿಕೊಂಡರವರು
ಉದ್ದಕೆ ಒರಗಿ ಸಾಯಲಾರರು ಗಾಳಿಯಿಂದ.
ಚುಚ್ಚುವ ಮೊನಚು ಸರಲಿಗೆ
ಎದೆ ಕೊರೆಯುವಾಗಲು
ಗಾಲಿಗೆ ಬಿಗಿಯುವಾಗಲು
ಅವರು ಮುರಿಯರು ಬೇನೆಯಿಂದ.
ವಿಶ್ವಾಸ ಅವರ ಕೈಯಲಿ
ಎರಡು ತುಂಡಾಗುವುದು ಮತ್ತು
ಒಂದು ಕೋಡಿನ ದುಷ್ಟ ಮೃಗ
ಅವರನ್ನು ತೊಂದರೆಗೆ ಒಳಪಡಿಸುವುದು,
ಹೋಳಾಗಿ ಮುಗಿದರು ಅವರು ಒಡೆಯುವುದಿಲ್ಲ
ಸಾವಿಗೆಂದೂ ಸ್ವಾಮಿತ್ವವಿಲ್ಲ.
ಅವರ ಕಿವಿಯಲ್ಲಿ ಇನ್ನು ನೀರ್‌ಹಕ್ಕಿ
ಕೂಗಲಾರದು
ತೆರೆಗಳು ದಂಡೆಗೆ ಬಡಿದು
ಸದ್ದು ಮಾಡಲಾರವು
ಹೂವರಳುವಲ್ಲಿ ಇನ್ನು ಹೂವರಳದು
ಮಳೆಯ ಹೊಡೆತಕೆ ತಲೆ ಎತ್ತದು
ಸತ್ತ ಹುಚ್ಚು ಉಗುರಿನಂತಾದರು
ಮಲ್ಲಿಗೆಯ ಸುತ್ತಿಗೆಯಿಂದ
ಪಾತ್ರಗಳ ತಲೆಗೆ ಹೊಡೆದರು
ಬಿಸಿಲು ಬೀಳುವ ತನಕ ತಡೆದರು
ಬಿಸಿಲಿನಲ್ಲಿ.
ಸಾವಿಗೆ ಸ್ವಾಮಿತ್ವವೆಲ್ಲಿ.
*****
ಮೂಲ: ಸೈಲನ್ ಥೋಮಸ್
(And Death Shall Have No Dominion)

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...