ಸಾವಿಗೆ ಒಡೆತನವಿಲ್ಲ

ಸಾವಿಗೆ ಸ್ವಾಮಿತ್ವವಿಲ್ಲ
ಸತ್ತವರು ನಗ್ನರಾಗುವರು
ಗಾಳಿಯಲೆಯಲಿ ಸುಳಿವ
ಮನುಷ್ಯನಲಿ ಮತ್ತು ಪಶ್ಚಿಮ ಚಂದ್ರನಲಿ
ಬೆರೆತು ಹೋಗುವರು.
ಅವರ ಎಲುವನ್ನು ಸರಿಯಾಗಿ ಹೆಕ್ಕುವಾಗ
ಶುದ್ಧ ಎಲುಬು ಮಾಯಾವಾಗುವುದು,
ಅವರ ಮೊಣಕ್ಕೆ ಪಾದಗಳಲಿ
ನಕ್ಷತ್ರ ಕಾಣುವುದು;
ಹುಚ್ಚರಾಗಿಯು ಅವರು ಮತಿವಂತರು,
ಸಮುದ್ರದಾಳದಲಿ ಮುಳುಗಿಯು
ಮತ್ತೆ ಏಳುವರು;
ಪ್ರೇಮಿಗಳು ಸಾಯುವರು
ಪ್ರೇಮ ಸಾಯದು
ಮತ್ತು ಸಾವಿಗೆ ಒಡೆತನವಿಲ್ಲ.
ಸಾಗರದಲೆಗಳ ಸುಳಿಯೊಳಗೆ
ಬಹುಕಾಲ ಸೇರಿಕೊಂಡರವರು
ಉದ್ದಕೆ ಒರಗಿ ಸಾಯಲಾರರು ಗಾಳಿಯಿಂದ.
ಚುಚ್ಚುವ ಮೊನಚು ಸರಲಿಗೆ
ಎದೆ ಕೊರೆಯುವಾಗಲು
ಗಾಲಿಗೆ ಬಿಗಿಯುವಾಗಲು
ಅವರು ಮುರಿಯರು ಬೇನೆಯಿಂದ.
ವಿಶ್ವಾಸ ಅವರ ಕೈಯಲಿ
ಎರಡು ತುಂಡಾಗುವುದು ಮತ್ತು
ಒಂದು ಕೋಡಿನ ದುಷ್ಟ ಮೃಗ
ಅವರನ್ನು ತೊಂದರೆಗೆ ಒಳಪಡಿಸುವುದು,
ಹೋಳಾಗಿ ಮುಗಿದರು ಅವರು ಒಡೆಯುವುದಿಲ್ಲ
ಸಾವಿಗೆಂದೂ ಸ್ವಾಮಿತ್ವವಿಲ್ಲ.
ಅವರ ಕಿವಿಯಲ್ಲಿ ಇನ್ನು ನೀರ್‌ಹಕ್ಕಿ
ಕೂಗಲಾರದು
ತೆರೆಗಳು ದಂಡೆಗೆ ಬಡಿದು
ಸದ್ದು ಮಾಡಲಾರವು
ಹೂವರಳುವಲ್ಲಿ ಇನ್ನು ಹೂವರಳದು
ಮಳೆಯ ಹೊಡೆತಕೆ ತಲೆ ಎತ್ತದು
ಸತ್ತ ಹುಚ್ಚು ಉಗುರಿನಂತಾದರು
ಮಲ್ಲಿಗೆಯ ಸುತ್ತಿಗೆಯಿಂದ
ಪಾತ್ರಗಳ ತಲೆಗೆ ಹೊಡೆದರು
ಬಿಸಿಲು ಬೀಳುವ ತನಕ ತಡೆದರು
ಬಿಸಿಲಿನಲ್ಲಿ.
ಸಾವಿಗೆ ಸ್ವಾಮಿತ್ವವೆಲ್ಲಿ.
*****
ಮೂಲ: ಸೈಲನ್ ಥೋಮಸ್
(And Death Shall Have No Dominion)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲರ ಗಮನಕ್ಕೆ!!
Next post ಕೃಷಿ ಕಷ್ಟವೆನಲೆಷ್ಟು ನಷ್ಟವೋ ಮನುಜರಿಗೆ?

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…