Home / ಕವನ / ಅನುವಾದ / ಸಾವಿಗೆ ಒಡೆತನವಿಲ್ಲ

ಸಾವಿಗೆ ಒಡೆತನವಿಲ್ಲ

ಸಾವಿಗೆ ಸ್ವಾಮಿತ್ವವಿಲ್ಲ
ಸತ್ತವರು ನಗ್ನರಾಗುವರು
ಗಾಳಿಯಲೆಯಲಿ ಸುಳಿವ
ಮನುಷ್ಯನಲಿ ಮತ್ತು ಪಶ್ಚಿಮ ಚಂದ್ರನಲಿ
ಬೆರೆತು ಹೋಗುವರು.
ಅವರ ಎಲುವನ್ನು ಸರಿಯಾಗಿ ಹೆಕ್ಕುವಾಗ
ಶುದ್ಧ ಎಲುಬು ಮಾಯಾವಾಗುವುದು,
ಅವರ ಮೊಣಕ್ಕೆ ಪಾದಗಳಲಿ
ನಕ್ಷತ್ರ ಕಾಣುವುದು;
ಹುಚ್ಚರಾಗಿಯು ಅವರು ಮತಿವಂತರು,
ಸಮುದ್ರದಾಳದಲಿ ಮುಳುಗಿಯು
ಮತ್ತೆ ಏಳುವರು;
ಪ್ರೇಮಿಗಳು ಸಾಯುವರು
ಪ್ರೇಮ ಸಾಯದು
ಮತ್ತು ಸಾವಿಗೆ ಒಡೆತನವಿಲ್ಲ.
ಸಾಗರದಲೆಗಳ ಸುಳಿಯೊಳಗೆ
ಬಹುಕಾಲ ಸೇರಿಕೊಂಡರವರು
ಉದ್ದಕೆ ಒರಗಿ ಸಾಯಲಾರರು ಗಾಳಿಯಿಂದ.
ಚುಚ್ಚುವ ಮೊನಚು ಸರಲಿಗೆ
ಎದೆ ಕೊರೆಯುವಾಗಲು
ಗಾಲಿಗೆ ಬಿಗಿಯುವಾಗಲು
ಅವರು ಮುರಿಯರು ಬೇನೆಯಿಂದ.
ವಿಶ್ವಾಸ ಅವರ ಕೈಯಲಿ
ಎರಡು ತುಂಡಾಗುವುದು ಮತ್ತು
ಒಂದು ಕೋಡಿನ ದುಷ್ಟ ಮೃಗ
ಅವರನ್ನು ತೊಂದರೆಗೆ ಒಳಪಡಿಸುವುದು,
ಹೋಳಾಗಿ ಮುಗಿದರು ಅವರು ಒಡೆಯುವುದಿಲ್ಲ
ಸಾವಿಗೆಂದೂ ಸ್ವಾಮಿತ್ವವಿಲ್ಲ.
ಅವರ ಕಿವಿಯಲ್ಲಿ ಇನ್ನು ನೀರ್‌ಹಕ್ಕಿ
ಕೂಗಲಾರದು
ತೆರೆಗಳು ದಂಡೆಗೆ ಬಡಿದು
ಸದ್ದು ಮಾಡಲಾರವು
ಹೂವರಳುವಲ್ಲಿ ಇನ್ನು ಹೂವರಳದು
ಮಳೆಯ ಹೊಡೆತಕೆ ತಲೆ ಎತ್ತದು
ಸತ್ತ ಹುಚ್ಚು ಉಗುರಿನಂತಾದರು
ಮಲ್ಲಿಗೆಯ ಸುತ್ತಿಗೆಯಿಂದ
ಪಾತ್ರಗಳ ತಲೆಗೆ ಹೊಡೆದರು
ಬಿಸಿಲು ಬೀಳುವ ತನಕ ತಡೆದರು
ಬಿಸಿಲಿನಲ್ಲಿ.
ಸಾವಿಗೆ ಸ್ವಾಮಿತ್ವವೆಲ್ಲಿ.
*****
ಮೂಲ: ಸೈಲನ್ ಥೋಮಸ್
(And Death Shall Have No Dominion)

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...