Home / ಕವನ / ಭಾವಗೀತೆ / ಬಾರೆ ಹುಡುಗಿ

ಬಾರೆ ಹುಡುಗಿ

ಹುಡುಗ: ಬಾರೆ ಹುಡುಗಿ ಜಾಲಿಯಾಗಿ
ಬೆಟ್ಟ ಹತ್ತುವ
ಬೆಟ್ಟ ಹತ್ತಿ ಮೋಡ ಮುತ್ತಿ
ಹಕ್ಕಿ ಆಗುವ – ಬೆ-
ಳ್ಳಕ್ಕಿ ಆಗುವ
ಹುಡುಗಿ: ಬೆಟ್ಟ ಯಾಕೆ ಮಲ್ಟಿ ಸ್ಟೋರ್‍ಡ್
ಬಿಲ್ಡಿಂಗ್ ಇರುವಾಗ
ಹತ್ತೋದ್ಯಾಕೆ ನೋಯೋದ್ಯಾಕೆ
ಲಿಫ್ಟು ಇರುವಾಗ – ಸಲೀಸ್
ಲಿಫ್ಟು ಇರುವಾಗ /ಪ//

ಹುಡುಗ: ನೀನೆ ಗಂಗೆ ನಾನೆ ಶಿವನು
ಹೊತ್ತು ತಿರುಗುವೆ – ನಿನ್ನ
ಹೊತ್ತು ತಿರುಗುವೆ
ಹುಡುಗಿ: ಹಾಗಿದ್ಮೇಲೆ ಗೌರಿ ಕೂಡ
ಇರ್‍ಬೋದು ತಾನೆ – ನಿಂಗೆ
ಇರ್‍ಬೋದು ತಾನೆ
ಹುಡುಗ: ಗರಡಿಯಾಳು ನಾನು ಕಣೇ
ರಾಮ ನನಗಿಷ್ಟ
ಹುಡುಗಿ: ಹಾಗಿದ್ಮೇಲೆ ಬೇಡ ಬೇಡ
ವನವಾಸ ಕಷ್ಟ! ||೧||

ಹುಡುಗಿ: ಕಟ್ಟಿಕೊಂಡ್ರೆ ಎನ್ನಾರೈನ
ಫೀಜಾ ಬರ್ಗರ್ರು
ಅಪ್ಪಿ ತಪ್ಪಿ ನಿನ್ಕಟ್ಕಂಡ್ರೆ
ಮುದ್ದೆ ಉಪ್ಸಾರು – ರಾಗಿ
ಮುದ್ದೆ ಉಪ್ಸಾರು
ಹುಡುಗ: ಎನ್ನಾರೈಯಿ ಫೀಜಾ ಬರ್ಗರ್
ಮಕಾಡೆ ಮಲಗೈತೆ
ಹೊಟ್ಟೇಗ್ ತಂಪು ರಟ್ಟೇಗ್ ಬಲ
ಮುದ್ದೆ ಎನಿಸೈತೆ – ರಾಗಿ
ಮುದ್ದೆ ಎನಿಸೈತೆ
ಹುಡುಗಿ: ಮುದ್ದೆ ತಿನ್ನು ನಿದ್ದೆ ಮಾಡು
ಬೇಡ ಹಳ್ಳಿ ಬೇಡ
ಹುಡುಗ: ಹಳ್ಳಿಯಿಂದ್ಲೆ ದಿಳ್ಳಿ ಐತೆ
ಮಣ್ಣು ಮುಕ್ಕಬೇಡ ||೨||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...