ಮಗು

ಅರಳಿಹುದು
ನಮ್ಮ ಮಡಿಲೊಳಗೊಂದು
ಮಲ್ಲಿಗೆಯ ಮುಗುಳು
ತುಂಬಿಹುದು ಮನೆ, ಮಂದಿ ಮನಸೆಲ್ಲಾ
ಒಮ್ಮುಖವಾಗಿ.

ಮರೆಯುವೆವು
ನಮ್ಮನು, ನಮ್ಮದನು
ನೋಡುವುದರಲ್ಲಿ
ನಿಸರ್ಗದೀ ವಿಶುದ್ಧ ಮೂರ್ತಿಯ
ಒಂದೊಂದು ಚಿಗುರು ನಡೆ, ನುಡಿ, ಆಟ, ನೋಟಗಳ.

ಅಂತೆಯೇ
ಮಾತರಿಯದ ಕಂದಾ
ಯಾತು ಯಾತಕೊ ಸಂಕಟ ಪಡುವಾಗ
ಯಾತನೆಯ ಪಡಿಯುಕ್ಕಿ ಹರಿಯುವುದು.

ಕೆಲವೊಮ್ಮೆ
ಗೊತ್ತರಿಯದ ಕಂದ
ಇಸ್ಸಿ, ಉಚ್ಚೆಯ ಅಭಿಷೇಕ ಮಾಡಿದಾಗ
ಕಿತ್ತರಿವ ಕೋಪ ಉಕ್ಕುವುದು
ಮಕ್ಕಳೆಂದರೆ ಮೂಗು ಮುರಿಯುವಂತಾಗುವುದಾದರೂ
ಹಾಲು, ಹಾಲು ಮನಸ
ಅದ್ಭುತ ಕೌತುಕ ಭಾವದ
ಮುದ್ದು, ಮುದ್ದಾದ ಮಗುವ
ಮುದ್ದಾಡದಿರಬಹುದೆ!
*****

Tagged:

Leave a Reply

Your email address will not be published. Required fields are marked *

ಲೋಕದ ಲಕ್ಷೋಪಲಕ್ಷ ಕೋಟಿ ಜನಸಂಖ್ಯೆಯಲ್ಲಿ ಕೆಲವರ ಮುಖಗಳು ಒಂದೇ ತರ ಇರಬಹುದು. ಒಬ್ಬರ ಮುಖ ಒಬ್ಬರದನ್ನು ಹೋಲುವ ಹಲವಾರು ಜನರಿದ್ದಾರೆ. ಒಬ್ಬರ ಮುಖ ಇನ್ನೊಬ್ಬರ ಮುಖದ ಅಚ್ಚು ಮುದ್ದೆಯಂತೆ ಕಾಣುವ ಜೋಡಿಗಳು ಹಲವು. ಅವರಲ್ಲಿ ಯಾರು ಯಾರೆಂಬುವುದು ಗುರುತಿಸುವುದು ಕಷ್ಟ. ಆದರೆ ಇಷ್ಟು ಜನ...

ದಳವಾಯಿ ದೇವರಾಜಯ್ಯನು ಸತ್ಯಮಂಗಲಕ್ಕೆ ಹೊರಟು ಹೋದಮೇಲೆ ರಾಜಧಾನಿಯಲ್ಲಿ ಸರ್ವಶಕ್ತನಾಗಿದ್ದ ಕರಾಚೂರಿ ಯಾತನಿಗೆ ನಿಶ್ಚಿಂತೆಯಾಗಿರಲಿಲ್ಲ. ಅದೇ ಸಮಯಕ್ಕೆ ಮರಾಟೆ ಯವರು ರಾಜಧಾನಿಯ ಬಳಿ ಪ್ರತ್ಯಕ್ಷರಾಗಿ ಹಣಕ್ಕೆ ತೊಂದರೆ ಪಡಿಸಿದರು; ಹಣವಿಲ್ಲವೆಂದು ನಂಜರಾಜಯ್ಯನು ಹೇಳಿದರೂ ಮರಾಟೆಯವರು ಹ...

ನೀವು ದೊಡ್ಡ ಪಟ್ಟಣವೊಂದರ ಬಹು ಜನ ನಿಬಿಡ, ವಾಹನ ನಿಬಿಡ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದಿರಿ. ನಿಮಗರಿವಿಲ್ಲದಂತೆ ಸಂಚರಿಸುವ ವಾಹನಗಳ ಬಹು ಚಾಲಾಕಿತನದಲ್ಲಿಯೇ ನಿಮ್ಮ ಸುಪ್ತಮನಸ್ಸಿನ ಪ್ರೇರಣೆಗೆ ಒಳಗಾದಂತೆ ಅದರ ನಿರ್ದೇಶನದಂತೆ ಸುರಕ್ಷಿತವಾಗಿ ರಸ್ತೆಯನ್ನು ದಾಟಿ ಸಮಾಧಾನದ ನಿಟ್ಟ...

ಅವಸಾನಕಾಲದಲ್ಲಿ ಸರ್ವಾಧಿಕಾರಿ ನಂಜರಾಜಯ್ಯನು ಪಶ್ಚಾತ್ತಾಪಪಡುತ್ತ ರಾಜರಿಗೆ “ನನ್ನ ತರುವಾಯ ನನ್ನ ಪದವಿಗೆ ದೇವರಾಜಯ್ಯನ ತಮ್ಮ ಕರಾಚೂರಿ ನಂಜರಾಜಯ್ಯನನ್ನು ನಿಯಮಿಸಿದರೆ ಅನರ್ಥಗಳು ಸಂಭವಿಸುತ್ತವೆ” ಎಂದು ಎಚ್ಚರಿಕೆ ಕೊಟ್ಟನಷ್ಟೆ. ರಾಜರಿಗೆ ಹೆಚ್ಚು ಅಧಿಕಾರವಿಲ್ಲದೆ ದೇ...

ನಾನು ಕೂಡಾ ಕೊಂಚ ಕೊಂಚವಾಗಿ ಸಾಯುತ್ತಿದ್ದೇನೆ ಎಂದು ಆ ಹಣ್ಣು ಮುದುಕನಿಗೆ ಅನಿಸತೊಡಗಿದ್ದೇ ಅವನ ಕೆಲವು ಗೆಳೆಯರು ಸತ್ತಾಗಲೇ. “ತೇಹಿನೋ ದಿವಸಾ ಗತಾಃ”. ಅಂತಹ ಮಧುರ ನೆನಪುಗಳ ದಿನಗಳು ಕಳೆದು ಹೋಗಿ ಎಷ್ಟೋ ದಶಮಾನಗಳು ಅವನೆದುರು ಜೀವಂತವಾಗಿ ಕರಗಿ ಹೋಗಿವೆ. ಅವನು ತನ್ನನ...

೧೭೩೪ರಲ್ಲಿ ಚಾಮರಾಜ ಒಡೆಯರನ್ನು ಹಿಡಿದು ಕಬ್ಬಾಳ ದುರ್ಗಕ್ಕೆ ಕಳುಹಿಸಿ ರಾಜದ್ರೋಹವನ್ನು ಮಾಡಿದವರು ಇಬ್ಬರು ಜ್ಞಾತಿಗಳು-ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ. ಬಾಲಕರಾದ ಇಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟದಲ್ಲಿ ಕೂರಿಸಿದ ಮೇಲೆ ಈರ್ವರೂ ಪ್ರಧಾನಿಯ ಕೆಲಸದಲ್ಲಿದ್ದ...