Home / ಲೇಖನ / ಇತರೆ / ಮಾನವೀಯತೆ ಎಂದರೇನು?

ಮಾನವೀಯತೆ ಎಂದರೇನು?

ಪ್ರಿಯ ಸಖಿ,
ಎಂಟು ಹತ್ತು ವರ್ಷದ ಹುಡುಗನೊಬ್ಬ ತನ್ನಮ್ಮನನ್ನು ಪ್ರಶ್ನಿಸುತ್ತಿದ್ದಾನೆ. “ಅಮ್ಮ ಮಾನವೀಯತೆ ಎಂದರೇನು?” ಅಮ್ಮ ಕ್ಷಣಕಾಲ ತಬ್ಬಿಬ್ಬಾಗುತ್ತಾಳೆ. ದೊಡ್ಡ ದೊಡ್ಡ ಪದಗಳಲ್ಲಿ ಮಾನವೀಯತೆಯನ್ನು ಅರ್ಧೈಸಿ ಹೇಳಬಹುದು. ಆದರೆ ಇನ್ನೂ ಪ್ರಪಂಚದ ಜ್ಞಾನವಿಲ್ಲದ ಮುಗ್ಧ ಮಗುವಿಗೆ ಅದು ಅರ್ಥವಾಗುವುದು ಹೇಗೆ?

ಮಾನವೀಯತೆಯೆಂದರೆ ಮನುಷ್ಯತ್ವ, ಮನುಷ್ಯ ಧರ್ಮ ಎಂದು ಪದಕೋಶದ ಅರ್ಥ ಹೇಳಿದರೆ ಮಗುವಿನ ಬುದ್ದಿಗೆ ತಿಳಿಯುತ್ತದೆಯೇ. ಅಮ್ಮ ಸ್ವಲ್ಪ ಹೊತ್ತು ಯೋಚಿಸಿ “ಕಂದಾ ಈಗ ನೀನು ನನಗೆ ಒಂದೇಟು ಜೋರಾಗಿ ಹೊಡೆಯಬೇಕು” ಎನ್ನುತ್ತಾಳೆ. ಬಾಲಕ ಅಮ್ಮನಿಗೆ ಹೊಡೆಯಲೋ ಬೇಡವೋ ಎಂದು ಗೊಂದಲಕ್ಕೊಳಗಾಗುತ್ತಾನೆ.
ಅಮ್ಮ ಮತ್ತೆ ಕೇಳುತ್ತಾಳೆ; “ಯಾಕೆ ಹೊಡೀತಾ ಇಲ್ಲ”. ನಿನಗೆ ನೋವಾಗುತ್ತಲ್ಲ ಅದಕ್ಕೆ ಹೊಡೆಯಲ್ಲ” ಎಂದ ಬಾಲಕ.

ಮಾನವೀಯತೆಯ ಅರ್ಥವನ್ನ ತಾನೀಗ ಸುಲಭವಾಗಿ ವಿವರಿಸಬಹುದೆಂದು ತಾಯಿಗೆ ಖುಷಿಯಾಯ್ತು. ಅವಳು ಮಗುವಿಗೆ ಹೇಳಿದಳು, “ನೋಡು ಮಗು ನನಗೆ ನೀನು ಹೊಡೆದರೆ ನನಗೆ ನೋವಾಗುತ್ತದೆ ಹೌದಲ್ವಾ. ನನಗೆ ನೋವಾಗುತ್ತೆ ಅಂತ ನಿನಗೆ ಗೊತ್ತಿರೋದ್ರಿಂದ ನೀನು ನನಗೆ ಹೊಡೆಯೋದಿಲ್ಲ. ಇದೇ ಮಾನವೀಯತೆ.  ನೀನು
ಮಾನವೀಯತೆ ಇರೋ ಒಳ್ಳೇ ಹುಡುಗ” ಎಂದಳು. ಮಗು ಖುಷಿಯಿಂದ ಆಡಲು ಹೊರಗೋಡಿತು.

ಸಖಿ, ಮಾನವೀಯತೆಯ ಅರ್ಥ ಎಷ್ಟೊಂದು ಸರಳವಾಗಿದೆಯಲ್ಲವೇ? ನಾವಾಡುವ ಮಾತಿನಿಂದ, ನಮ್ಮ ನಡೆಯಿಂದ ಬೇರೆಯವರಿಗೆ ನೋವಾಗುತ್ತದೆ ಎಂದು ನಾವು ತಿಳಿದುಕೊಂಡು ಆ ರೀತಿ ನಡೆದುಕೊಳ್ಳುವುದೇ ಮಾನವೀಯತೆ. ಬೇರೆಯವರಿಗೆ ನೋವಾಗುತ್ತದೆ ಎಂದು ತಿಳಿದೂ, ತಿಳಿದೂ ನಾವು ಅವರಿಗೆ ಹಿಂಸೆ ನೀಡಿದರೆ ನಮ್ಮ ನಡೆ, ನುಡಿಗಳಿಂದ ನೋಯಿಸಿದರೆ ಅದೇ ಅಮಾನವೀಯತೆ. ತತ್ವ ಎಷ್ಟೊಂದು ಸರಳವಾಗಿದೆ. ಆದರೆ ಆಚರಣೆ?

ಸಖಿ, ‘ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಣವಕ್ಕು’ ಎಂದು ಸರ್ವಜ್ಞ ನುಡಿದಿದ್ದಾನೆ. ತನ್ನಂತೆಯೂ ಇನ್ನೊಂದು ಜೀವಕ್ಕೂ ನೋವಾಗುತ್ತದೆ. ಆದ್ದರಿಂದ ಗೊತ್ತಿದ್ದೂ ತಾನು ಪರರನ್ನು ನೋಯಿಸಬಾರದು ಎಂಬ ವಿವೇಕ ನಮ್ಮಲ್ಲಿ ಜಾಗೃತವಾದರೆ ನಿಜಕ್ಕೂ ನಾವು ಮಾನವರಾಗಿದ್ದಕ್ಕೆ ಸಾರ್ಥಕ ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...