Home / ಲೇಖನ / ಇತರೆ / ಮಾನವೀಯತೆ ಎಂದರೇನು?

ಮಾನವೀಯತೆ ಎಂದರೇನು?

ಪ್ರಿಯ ಸಖಿ,
ಎಂಟು ಹತ್ತು ವರ್ಷದ ಹುಡುಗನೊಬ್ಬ ತನ್ನಮ್ಮನನ್ನು ಪ್ರಶ್ನಿಸುತ್ತಿದ್ದಾನೆ. “ಅಮ್ಮ ಮಾನವೀಯತೆ ಎಂದರೇನು?” ಅಮ್ಮ ಕ್ಷಣಕಾಲ ತಬ್ಬಿಬ್ಬಾಗುತ್ತಾಳೆ. ದೊಡ್ಡ ದೊಡ್ಡ ಪದಗಳಲ್ಲಿ ಮಾನವೀಯತೆಯನ್ನು ಅರ್ಧೈಸಿ ಹೇಳಬಹುದು. ಆದರೆ ಇನ್ನೂ ಪ್ರಪಂಚದ ಜ್ಞಾನವಿಲ್ಲದ ಮುಗ್ಧ ಮಗುವಿಗೆ ಅದು ಅರ್ಥವಾಗುವುದು ಹೇಗೆ?

ಮಾನವೀಯತೆಯೆಂದರೆ ಮನುಷ್ಯತ್ವ, ಮನುಷ್ಯ ಧರ್ಮ ಎಂದು ಪದಕೋಶದ ಅರ್ಥ ಹೇಳಿದರೆ ಮಗುವಿನ ಬುದ್ದಿಗೆ ತಿಳಿಯುತ್ತದೆಯೇ. ಅಮ್ಮ ಸ್ವಲ್ಪ ಹೊತ್ತು ಯೋಚಿಸಿ “ಕಂದಾ ಈಗ ನೀನು ನನಗೆ ಒಂದೇಟು ಜೋರಾಗಿ ಹೊಡೆಯಬೇಕು” ಎನ್ನುತ್ತಾಳೆ. ಬಾಲಕ ಅಮ್ಮನಿಗೆ ಹೊಡೆಯಲೋ ಬೇಡವೋ ಎಂದು ಗೊಂದಲಕ್ಕೊಳಗಾಗುತ್ತಾನೆ.
ಅಮ್ಮ ಮತ್ತೆ ಕೇಳುತ್ತಾಳೆ; “ಯಾಕೆ ಹೊಡೀತಾ ಇಲ್ಲ”. ನಿನಗೆ ನೋವಾಗುತ್ತಲ್ಲ ಅದಕ್ಕೆ ಹೊಡೆಯಲ್ಲ” ಎಂದ ಬಾಲಕ.

ಮಾನವೀಯತೆಯ ಅರ್ಥವನ್ನ ತಾನೀಗ ಸುಲಭವಾಗಿ ವಿವರಿಸಬಹುದೆಂದು ತಾಯಿಗೆ ಖುಷಿಯಾಯ್ತು. ಅವಳು ಮಗುವಿಗೆ ಹೇಳಿದಳು, “ನೋಡು ಮಗು ನನಗೆ ನೀನು ಹೊಡೆದರೆ ನನಗೆ ನೋವಾಗುತ್ತದೆ ಹೌದಲ್ವಾ. ನನಗೆ ನೋವಾಗುತ್ತೆ ಅಂತ ನಿನಗೆ ಗೊತ್ತಿರೋದ್ರಿಂದ ನೀನು ನನಗೆ ಹೊಡೆಯೋದಿಲ್ಲ. ಇದೇ ಮಾನವೀಯತೆ.  ನೀನು
ಮಾನವೀಯತೆ ಇರೋ ಒಳ್ಳೇ ಹುಡುಗ” ಎಂದಳು. ಮಗು ಖುಷಿಯಿಂದ ಆಡಲು ಹೊರಗೋಡಿತು.

ಸಖಿ, ಮಾನವೀಯತೆಯ ಅರ್ಥ ಎಷ್ಟೊಂದು ಸರಳವಾಗಿದೆಯಲ್ಲವೇ? ನಾವಾಡುವ ಮಾತಿನಿಂದ, ನಮ್ಮ ನಡೆಯಿಂದ ಬೇರೆಯವರಿಗೆ ನೋವಾಗುತ್ತದೆ ಎಂದು ನಾವು ತಿಳಿದುಕೊಂಡು ಆ ರೀತಿ ನಡೆದುಕೊಳ್ಳುವುದೇ ಮಾನವೀಯತೆ. ಬೇರೆಯವರಿಗೆ ನೋವಾಗುತ್ತದೆ ಎಂದು ತಿಳಿದೂ, ತಿಳಿದೂ ನಾವು ಅವರಿಗೆ ಹಿಂಸೆ ನೀಡಿದರೆ ನಮ್ಮ ನಡೆ, ನುಡಿಗಳಿಂದ ನೋಯಿಸಿದರೆ ಅದೇ ಅಮಾನವೀಯತೆ. ತತ್ವ ಎಷ್ಟೊಂದು ಸರಳವಾಗಿದೆ. ಆದರೆ ಆಚರಣೆ?

ಸಖಿ, ‘ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಣವಕ್ಕು’ ಎಂದು ಸರ್ವಜ್ಞ ನುಡಿದಿದ್ದಾನೆ. ತನ್ನಂತೆಯೂ ಇನ್ನೊಂದು ಜೀವಕ್ಕೂ ನೋವಾಗುತ್ತದೆ. ಆದ್ದರಿಂದ ಗೊತ್ತಿದ್ದೂ ತಾನು ಪರರನ್ನು ನೋಯಿಸಬಾರದು ಎಂಬ ವಿವೇಕ ನಮ್ಮಲ್ಲಿ ಜಾಗೃತವಾದರೆ ನಿಜಕ್ಕೂ ನಾವು ಮಾನವರಾಗಿದ್ದಕ್ಕೆ ಸಾರ್ಥಕ ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...