ಎಚ್ಚರಿಕೆ

ಹಣೆ ಬರಹದಣೆಕಟ್ಟು
ಜಾತಿ ಮತಗಳ ಸುಟ್ಟು
ಬಂದೇವು ಬಡವರು
ಹೊಸ ಪಂಜು ಹಿಡಿದು.

ಭೋರ್ಗರೆವ ನೀರೊಳಗೆ
ಬಡವರೊಂದಾದೇವು
ಹನಿ ಹನಿಯ ಕಿಡಿಗೊಳಿಸಿ
ಅಲೆಯಾಗಿ ಹರಿದೇವು.

ಅಪ್ಪಳಿಸಿ ಅಲೆಯಾಗ್ನಿ
ಬೆಟ್ಟ ಬೂದಿಯಾದೀತು
ಮಂತ್ರ ಹೇಳುವ ಮರ
ಮೊದಲೆ ಬಿದ್ದಿತು.

ರತ್ನಗಂಬಳಿ ಪೀಠ
ಸುಳ್ಳು ಸಂಸ್ಕೃತಿ ಪಾಠ
ಉರಿ ಉಕ್ಕುವ ನೆರೆಗೆ ಸಿಕ್ಕಿ
ಅತ್ತು ಕರೆದಾವು-
ಸತ್ತು ಹೋದಾವು.

ಕೊಚ್ಚಿ ಹಾಕುವ ಕಿಚ್ಚು
ಹುಚ್ಚಾಗದಂತೆ
ಸುಟ್ಟ ಹಾದಿಯ ತುಂಬ
ಹೊಸ ಹಾಡು ಹರಿದೀತು
ಹೊಸ ಮನಸು ಮೆರೆದೀತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೊಫೆಶನಲಿಸಂ ಎಂಬ ಮಾಯೆ
Next post ಮಾತಿನ ಮರ್ಮ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…