ಎಚ್ಚರಿಕೆ

ಹಣೆ ಬರಹದಣೆಕಟ್ಟು
ಜಾತಿ ಮತಗಳ ಸುಟ್ಟು
ಬಂದೇವು ಬಡವರು
ಹೊಸ ಪಂಜು ಹಿಡಿದು.

ಭೋರ್ಗರೆವ ನೀರೊಳಗೆ
ಬಡವರೊಂದಾದೇವು
ಹನಿ ಹನಿಯ ಕಿಡಿಗೊಳಿಸಿ
ಅಲೆಯಾಗಿ ಹರಿದೇವು.

ಅಪ್ಪಳಿಸಿ ಅಲೆಯಾಗ್ನಿ
ಬೆಟ್ಟ ಬೂದಿಯಾದೀತು
ಮಂತ್ರ ಹೇಳುವ ಮರ
ಮೊದಲೆ ಬಿದ್ದಿತು.

ರತ್ನಗಂಬಳಿ ಪೀಠ
ಸುಳ್ಳು ಸಂಸ್ಕೃತಿ ಪಾಠ
ಉರಿ ಉಕ್ಕುವ ನೆರೆಗೆ ಸಿಕ್ಕಿ
ಅತ್ತು ಕರೆದಾವು-
ಸತ್ತು ಹೋದಾವು.

ಕೊಚ್ಚಿ ಹಾಕುವ ಕಿಚ್ಚು
ಹುಚ್ಚಾಗದಂತೆ
ಸುಟ್ಟ ಹಾದಿಯ ತುಂಬ
ಹೊಸ ಹಾಡು ಹರಿದೀತು
ಹೊಸ ಮನಸು ಮೆರೆದೀತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೊಫೆಶನಲಿಸಂ ಎಂಬ ಮಾಯೆ
Next post ಮಾತಿನ ಮರ್ಮ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…