ಮಳೆ

ಬಸಿರು ತುಂಬಿದ ಮೋಡ
ಕಾದು ಕರೆಯೊ ಭೂಮಿ-
ಮುಗಿಲಿನ ಗಂಡ;
ಮಳೆ ಮಗುವು ಎಲ್ಲೊ?

ತೊಟ್ಟಿಲ ಸಿಂಗರಿಸಿ
ಕಾದು ಕಣ್ಣರಳಿಸಿ
ಕೂತೆವು ನಾವು
ಕೂಸಂತು ಇಲ್ಲೊ.

ಮುಗಿಲ ಮೈಯಿಳಿಯಿತೆ?
ಕೆಟ್ಟ ಮುನಿಸಾಯಿತೆ?
ನೆಲ ಮುಗಿಲು ಗುದ್ದಾಡಿ
ಕಷ್ಟ ನಮಗೇ ಬಂತೆ?

ನಮ್ಮ ಹಿಂಡೋ ಮಿಂಡ
ಕಂಡಕಂಡೋರ ಗಂಡ
ಅಲ್ಲಿಗೂ ಹಾರಿದನೊ?
ಮುಗಿಲ ಕದ್ದಿಟ್ಟನೊ?
ಕೊರಳ ಮುರಿದಿಟ್ಟನೊ?

ಮುಗಿಲ ಮಾತೆಯ ಕೆಡವಿ
ಮ್ಯಾಲೆ ಬಿದ್ದೆಲ್ಲ ಪರಚಿ
ನೆಲದಲ್ಲಿ ನೆತ್ತರ ಕಲೆಯಾಯಿತೊ
ಚಿಂದಿ ಸೀರೆ ಉಟ್ಟು
ಹರಿದ ರವಿಕೆ ತೊಟ್ಟು
ಮುಖ ಮುಚ್ಚಿ ಅತ್ತದ್ದು
ಹನಿಯಾಯಿತೋ-
ಎರಡು ಹನಿಯಾಯಿತೊ
ಮಳೆ ಮಗುವಂತು ಕನಸಾಯಿತೊ-
ನಮಗೆ ಕನಸಾಯಿತೊ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Henry Fieldingನ Tom Jones- ಬದುಕಿನ ಅನಿರ್ದಿಷ್ಟತೆಯ ವಾಸ್ತವ ಚಿತ್ರಣ
Next post ಸುಖೀ ಸಂಸಾರ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…