Home / ಕವನ / ಕವಿತೆ / ಸಿದ್ಧತೆ

ಸಿದ್ಧತೆ

ಭಾರಿ ಭಾರಿ ಬದುಕಬೇಕೆಂದು ಬಾವಿ ತೆಗೆಯಲು ಹೋದೆ
ಗುದ್ದಲಿ ಹಿಡಿದು ಜಜ್ಜುಗಲ್ಲೆಲ್ಲ ತೆಗೆದೆ
ಅಗೆಯುತ್ತ ಅಗೆಯುತ್ತ
ಹೋದೆ;
ತಡೆಯೊಡ್ಡುವ ಬಂಡೆಗಳಿಗೆ ಡೈನಮೆಂಟಾದೆ
ಇಳಿಯುತ್ತ ಇಳಿಯುತ್ತ
ಇಳಿದೆ.


ನಿಯತ್ತಿನ ನೇಗಿಲ
ಯೋಗಿ
ಯಾಗಿ
ಬೀಜ ಬಿತ್ತಿ ನೀರು ಎತ್ತಿ
ಪ್ರಾಮಾಣಿಕ ಪೈರು
ಬೆಳೆಯುವ ಹೊತ್ತಿಗೆ
ಗೊಬ್ಬರಗೋಡು
ಎಂದು ಪಟ್ಟ ಪಾಡು
ಹಾಡಾಗಿ ಹರಿಯುತ್ತಿತ್ತು
ಹೊಲ ಹೊನ್ನುಟ್ಟು
ಅಕ್ಷತೆಯ ಅಂದದಲ್ಲಿ
ದಾಳಿಂಬೆಯುಬ್ಬು ಹೊಮ್ಮುತ್ತಿತ್ತು.


ಬರಬರುತ್ತ ಬಿಸಿಲ ಮೊಳೆ ಬಡಿತ
ನೀರು ಎತ್ತಲು ಹೋದಾಗ ಮತ್ತೆ ಮತ್ತೆ
ಕೈಕೊಡುವ ಕರೆಂಟು ಕೆನೆತ. ಮೀಸೆ ತಿರುವುತ್ತಿರುವಾಗ
ಕೆಳ ಹೊಲಗಳಲ್ಲಿ ಎದ್ದ ಹತ್ತೆಂಟು ಬಾವಿಗಳು
ಮೀಸೆ ತಿರುವುತ್ತಿರುವಾಗ
ನನ್ನ ಬಾವಿ ಬರಿದೇ ಬರಿದು!
ರಕ್ತ ಬಸಿದು ಹಸಿರಾದ ಹೊಲ
ಹೂ ಇಳಿಸಿ ಅಕ್ಷತೆ ಅಳಿಸಿ
ಕುಂಕುಮ ಕೆಡಿಸಿ
ಬಳೆ ಜಜ್ಜಿ ಬಯಲಾಗುತ್ತಿತ್ತು
ಅರ್ಥವಾಗದ ಆವರಣ ರಣರಣವೆನ್ನುತ್ತಿತ್ತು.


ಮಹಾಶಯರೆ
ಹಿಡಿದ ಗುದ್ದಲಿ ಬಿಡುವುದಿಲ್ಲ
ನಾನು
ಹುಟ್ಟಿದ್ದಕ್ಕೆ ನಿಮಗೆ ತೊಂದರೆಯ ತಂತಿ
ತಗುಲಿ ತಲ್ಲಣವಾಗದಿರಲೆಂದು
ನಾನೇ
ಆರೂ ಮೂರಡಿಯ ಗುಂಡಿ
ತೆಗೆಯುತ್ತೇನೆ
ಇಟ್ಟಿಗೆ ಸುಟ್ಟು ಚಟ್ಟ ಕಟ್ಟಿ
ಇಟ್ಟಿರುತ್ತೇನೆ
ನೆರಳಿಗೆಂದು ಗುಂಡಿಯ ಬಳಿ
ಸಸಿಯೊಂದ ನೆಟ್ಟಿರುತ್ತೇನೆ
ಇರುವವರೆಗೆ ನೆಟ್ಟಗಿರುತ್ತೇನೆ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...