ಸಿದ್ಧತೆ

ಭಾರಿ ಭಾರಿ ಬದುಕಬೇಕೆಂದು ಬಾವಿ ತೆಗೆಯಲು ಹೋದೆ
ಗುದ್ದಲಿ ಹಿಡಿದು ಜಜ್ಜುಗಲ್ಲೆಲ್ಲ ತೆಗೆದೆ
ಅಗೆಯುತ್ತ ಅಗೆಯುತ್ತ
ಹೋದೆ;
ತಡೆಯೊಡ್ಡುವ ಬಂಡೆಗಳಿಗೆ ಡೈನಮೆಂಟಾದೆ
ಇಳಿಯುತ್ತ ಇಳಿಯುತ್ತ
ಇಳಿದೆ.


ನಿಯತ್ತಿನ ನೇಗಿಲ
ಯೋಗಿ
ಯಾಗಿ
ಬೀಜ ಬಿತ್ತಿ ನೀರು ಎತ್ತಿ
ಪ್ರಾಮಾಣಿಕ ಪೈರು
ಬೆಳೆಯುವ ಹೊತ್ತಿಗೆ
ಗೊಬ್ಬರಗೋಡು
ಎಂದು ಪಟ್ಟ ಪಾಡು
ಹಾಡಾಗಿ ಹರಿಯುತ್ತಿತ್ತು
ಹೊಲ ಹೊನ್ನುಟ್ಟು
ಅಕ್ಷತೆಯ ಅಂದದಲ್ಲಿ
ದಾಳಿಂಬೆಯುಬ್ಬು ಹೊಮ್ಮುತ್ತಿತ್ತು.


ಬರಬರುತ್ತ ಬಿಸಿಲ ಮೊಳೆ ಬಡಿತ
ನೀರು ಎತ್ತಲು ಹೋದಾಗ ಮತ್ತೆ ಮತ್ತೆ
ಕೈಕೊಡುವ ಕರೆಂಟು ಕೆನೆತ. ಮೀಸೆ ತಿರುವುತ್ತಿರುವಾಗ
ಕೆಳ ಹೊಲಗಳಲ್ಲಿ ಎದ್ದ ಹತ್ತೆಂಟು ಬಾವಿಗಳು
ಮೀಸೆ ತಿರುವುತ್ತಿರುವಾಗ
ನನ್ನ ಬಾವಿ ಬರಿದೇ ಬರಿದು!
ರಕ್ತ ಬಸಿದು ಹಸಿರಾದ ಹೊಲ
ಹೂ ಇಳಿಸಿ ಅಕ್ಷತೆ ಅಳಿಸಿ
ಕುಂಕುಮ ಕೆಡಿಸಿ
ಬಳೆ ಜಜ್ಜಿ ಬಯಲಾಗುತ್ತಿತ್ತು
ಅರ್ಥವಾಗದ ಆವರಣ ರಣರಣವೆನ್ನುತ್ತಿತ್ತು.


ಮಹಾಶಯರೆ
ಹಿಡಿದ ಗುದ್ದಲಿ ಬಿಡುವುದಿಲ್ಲ
ನಾನು
ಹುಟ್ಟಿದ್ದಕ್ಕೆ ನಿಮಗೆ ತೊಂದರೆಯ ತಂತಿ
ತಗುಲಿ ತಲ್ಲಣವಾಗದಿರಲೆಂದು
ನಾನೇ
ಆರೂ ಮೂರಡಿಯ ಗುಂಡಿ
ತೆಗೆಯುತ್ತೇನೆ
ಇಟ್ಟಿಗೆ ಸುಟ್ಟು ಚಟ್ಟ ಕಟ್ಟಿ
ಇಟ್ಟಿರುತ್ತೇನೆ
ನೆರಳಿಗೆಂದು ಗುಂಡಿಯ ಬಳಿ
ಸಸಿಯೊಂದ ನೆಟ್ಟಿರುತ್ತೇನೆ
ಇರುವವರೆಗೆ ನೆಟ್ಟಗಿರುತ್ತೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೂಮುಸಲ್ಮಾನರ ಐಕ್ಯ – ೨
Next post ಸ್ವಾರ್ಥ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys