Home / ಕವನ / ಕವಿತೆ / ಸಿದ್ಧತೆ

ಸಿದ್ಧತೆ

ಭಾರಿ ಭಾರಿ ಬದುಕಬೇಕೆಂದು ಬಾವಿ ತೆಗೆಯಲು ಹೋದೆ
ಗುದ್ದಲಿ ಹಿಡಿದು ಜಜ್ಜುಗಲ್ಲೆಲ್ಲ ತೆಗೆದೆ
ಅಗೆಯುತ್ತ ಅಗೆಯುತ್ತ
ಹೋದೆ;
ತಡೆಯೊಡ್ಡುವ ಬಂಡೆಗಳಿಗೆ ಡೈನಮೆಂಟಾದೆ
ಇಳಿಯುತ್ತ ಇಳಿಯುತ್ತ
ಇಳಿದೆ.


ನಿಯತ್ತಿನ ನೇಗಿಲ
ಯೋಗಿ
ಯಾಗಿ
ಬೀಜ ಬಿತ್ತಿ ನೀರು ಎತ್ತಿ
ಪ್ರಾಮಾಣಿಕ ಪೈರು
ಬೆಳೆಯುವ ಹೊತ್ತಿಗೆ
ಗೊಬ್ಬರಗೋಡು
ಎಂದು ಪಟ್ಟ ಪಾಡು
ಹಾಡಾಗಿ ಹರಿಯುತ್ತಿತ್ತು
ಹೊಲ ಹೊನ್ನುಟ್ಟು
ಅಕ್ಷತೆಯ ಅಂದದಲ್ಲಿ
ದಾಳಿಂಬೆಯುಬ್ಬು ಹೊಮ್ಮುತ್ತಿತ್ತು.


ಬರಬರುತ್ತ ಬಿಸಿಲ ಮೊಳೆ ಬಡಿತ
ನೀರು ಎತ್ತಲು ಹೋದಾಗ ಮತ್ತೆ ಮತ್ತೆ
ಕೈಕೊಡುವ ಕರೆಂಟು ಕೆನೆತ. ಮೀಸೆ ತಿರುವುತ್ತಿರುವಾಗ
ಕೆಳ ಹೊಲಗಳಲ್ಲಿ ಎದ್ದ ಹತ್ತೆಂಟು ಬಾವಿಗಳು
ಮೀಸೆ ತಿರುವುತ್ತಿರುವಾಗ
ನನ್ನ ಬಾವಿ ಬರಿದೇ ಬರಿದು!
ರಕ್ತ ಬಸಿದು ಹಸಿರಾದ ಹೊಲ
ಹೂ ಇಳಿಸಿ ಅಕ್ಷತೆ ಅಳಿಸಿ
ಕುಂಕುಮ ಕೆಡಿಸಿ
ಬಳೆ ಜಜ್ಜಿ ಬಯಲಾಗುತ್ತಿತ್ತು
ಅರ್ಥವಾಗದ ಆವರಣ ರಣರಣವೆನ್ನುತ್ತಿತ್ತು.


ಮಹಾಶಯರೆ
ಹಿಡಿದ ಗುದ್ದಲಿ ಬಿಡುವುದಿಲ್ಲ
ನಾನು
ಹುಟ್ಟಿದ್ದಕ್ಕೆ ನಿಮಗೆ ತೊಂದರೆಯ ತಂತಿ
ತಗುಲಿ ತಲ್ಲಣವಾಗದಿರಲೆಂದು
ನಾನೇ
ಆರೂ ಮೂರಡಿಯ ಗುಂಡಿ
ತೆಗೆಯುತ್ತೇನೆ
ಇಟ್ಟಿಗೆ ಸುಟ್ಟು ಚಟ್ಟ ಕಟ್ಟಿ
ಇಟ್ಟಿರುತ್ತೇನೆ
ನೆರಳಿಗೆಂದು ಗುಂಡಿಯ ಬಳಿ
ಸಸಿಯೊಂದ ನೆಟ್ಟಿರುತ್ತೇನೆ
ಇರುವವರೆಗೆ ನೆಟ್ಟಗಿರುತ್ತೇನೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...