ಸಿದ್ಧತೆ

ಭಾರಿ ಭಾರಿ ಬದುಕಬೇಕೆಂದು ಬಾವಿ ತೆಗೆಯಲು ಹೋದೆ
ಗುದ್ದಲಿ ಹಿಡಿದು ಜಜ್ಜುಗಲ್ಲೆಲ್ಲ ತೆಗೆದೆ
ಅಗೆಯುತ್ತ ಅಗೆಯುತ್ತ
ಹೋದೆ;
ತಡೆಯೊಡ್ಡುವ ಬಂಡೆಗಳಿಗೆ ಡೈನಮೆಂಟಾದೆ
ಇಳಿಯುತ್ತ ಇಳಿಯುತ್ತ
ಇಳಿದೆ.


ನಿಯತ್ತಿನ ನೇಗಿಲ
ಯೋಗಿ
ಯಾಗಿ
ಬೀಜ ಬಿತ್ತಿ ನೀರು ಎತ್ತಿ
ಪ್ರಾಮಾಣಿಕ ಪೈರು
ಬೆಳೆಯುವ ಹೊತ್ತಿಗೆ
ಗೊಬ್ಬರಗೋಡು
ಎಂದು ಪಟ್ಟ ಪಾಡು
ಹಾಡಾಗಿ ಹರಿಯುತ್ತಿತ್ತು
ಹೊಲ ಹೊನ್ನುಟ್ಟು
ಅಕ್ಷತೆಯ ಅಂದದಲ್ಲಿ
ದಾಳಿಂಬೆಯುಬ್ಬು ಹೊಮ್ಮುತ್ತಿತ್ತು.


ಬರಬರುತ್ತ ಬಿಸಿಲ ಮೊಳೆ ಬಡಿತ
ನೀರು ಎತ್ತಲು ಹೋದಾಗ ಮತ್ತೆ ಮತ್ತೆ
ಕೈಕೊಡುವ ಕರೆಂಟು ಕೆನೆತ. ಮೀಸೆ ತಿರುವುತ್ತಿರುವಾಗ
ಕೆಳ ಹೊಲಗಳಲ್ಲಿ ಎದ್ದ ಹತ್ತೆಂಟು ಬಾವಿಗಳು
ಮೀಸೆ ತಿರುವುತ್ತಿರುವಾಗ
ನನ್ನ ಬಾವಿ ಬರಿದೇ ಬರಿದು!
ರಕ್ತ ಬಸಿದು ಹಸಿರಾದ ಹೊಲ
ಹೂ ಇಳಿಸಿ ಅಕ್ಷತೆ ಅಳಿಸಿ
ಕುಂಕುಮ ಕೆಡಿಸಿ
ಬಳೆ ಜಜ್ಜಿ ಬಯಲಾಗುತ್ತಿತ್ತು
ಅರ್ಥವಾಗದ ಆವರಣ ರಣರಣವೆನ್ನುತ್ತಿತ್ತು.


ಮಹಾಶಯರೆ
ಹಿಡಿದ ಗುದ್ದಲಿ ಬಿಡುವುದಿಲ್ಲ
ನಾನು
ಹುಟ್ಟಿದ್ದಕ್ಕೆ ನಿಮಗೆ ತೊಂದರೆಯ ತಂತಿ
ತಗುಲಿ ತಲ್ಲಣವಾಗದಿರಲೆಂದು
ನಾನೇ
ಆರೂ ಮೂರಡಿಯ ಗುಂಡಿ
ತೆಗೆಯುತ್ತೇನೆ
ಇಟ್ಟಿಗೆ ಸುಟ್ಟು ಚಟ್ಟ ಕಟ್ಟಿ
ಇಟ್ಟಿರುತ್ತೇನೆ
ನೆರಳಿಗೆಂದು ಗುಂಡಿಯ ಬಳಿ
ಸಸಿಯೊಂದ ನೆಟ್ಟಿರುತ್ತೇನೆ
ಇರುವವರೆಗೆ ನೆಟ್ಟಗಿರುತ್ತೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೂಮುಸಲ್ಮಾನರ ಐಕ್ಯ – ೨
Next post ಸ್ವಾರ್ಥ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…