ಗುಣತ್ರಯ

ನಿತ್ಯ ಕಾಡುತ್ತಿವೆ ಏನಗೆ ಗುಣತ್ರಯಗಳು
ಅವೇ ರಜ ತಮ ಮತ್ತು ಸತ್ವಗಳು
ಒಂದೊಂದು ತನ್ನ ಇತಿಹಾಸ ಬಿತ್ತುವವು
ಈ ಮೂರು ಜೀವನ ಬಂಧನಕ್ಕೆ ಕಾರಣಗಳು

ಸ್ವಾರ್ಥ ಆಸೆ ಭೋಗದಲ್ಲಿ ತೇಲಿಸುವುದು
ತಮಗುಣವೆಂಬ ಕಾಣದ ಜಾತ ಶತ್ರು
ದೇಹ ಸುಖವೆ ಇದರ ಗುರಿಯಾಗಿಹುದು
ಜೀವನ ವಿನಾಶಕ್ಕೆ ಇದಾಗಿದೆ ಕತೃ

ತೃಸ್ಣೆಯ ಜಾಲವ ರಜೋ ಬೀಸುವುದು
ಕಾಮದ ಸನ್ನಿವೇಶಕ್ಕೆ ನಾಂದಿ ಹಾಡುವುದು
ಕರ್ಮಸಂಗದಿ ಈ ಆತ್ಮಕ್ಕೆ ಕಟ್ಟಿ ಹಾಕುವುದು
ಪಾಪದ ಹೊಂಡಗಳ ಆಳಕ್ಕೆ ತೋಡುವುದು

ಸತ್ವಗುಣ ಜ್ಞಾನದ ಸಲಾಕೆಯಾಗುವುದು
ದೇವರನ್ನು ತೋರುವ ಮಾರ್ಗನಿರ್ಮಿಸುವುದು
ಜ್ಞಾನ ಸಂಗದಿಂದ ಆತ್ಮ ಬಂಧಿಸುವುದು
ಮಾಣಿಕ್ಯ ವಿಠಲನಾದರೆ ಹರಿಯ ದರ್ಶಿಸುವುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನು ಯಾರು?
Next post ಕಾಲ್ತೊಡರುವ ಜಾತಿ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys