ಹರಿ ನೀನೇ ಸರ್ವ

ಹರಿ ಮುಕುಂದ ನೀನೆ ಸರ್ವ
ನಿನ್ನಿಂದಲೆ ಈ ಬಾಳಿಗೊಂದು ಪರ್ವ
ನಾಳಿನ ಬಾಳಿಗೆ ನೀನೇ ಹಿತೈಷಿ
ನನ್ನ ಬದುಕಿಗೆ ನೀ ನಾದೆ ಖುಷಿ

ಹಗಲು ಇರಳು ಮಾಡಿ ನಿನ್ನ ಧ್ಯಾನವ
ಮತ್ತೆ ಪಡೆಯುತ್ತಿರುವೆ ಆತ್ಮ ಜ್ಞಾನವ
ನಿನ್ನ ನೆನಪೊಂದು ಅಮೃತದ ಪಾನ
ನಿನ್ನ ಸಾಮಿಪ್ಯದ ದರುಶನವ ಸೋಪಾನ

ನಿನ್ನಲ್ಲಿ ಬೇಡಿಕೊಂಬೆ ನಾನೊಂದು
ಅದೇ ನಿನ್ನದರುಶನ ನೀಡೋ ಹರಿ
ನಿನ್ನ ಕಂಡವರಿಗೆ ಇನ್ನೊಂದು ಬೇಕಿಲ್ಲ
ಏಕೆಂದರೆ ಅಲ್ಲೆ‌ಎಲ್ಲವೂ ಬೇರೆನಿಲ್ಲ

ನನ್ನ ಪೂರ್ವಜರ ಪುಣ್ಯ ಇರಲಿ
ನನ್ನ ಗುರು ಹಿರಿಯರ ಕೃಪೆ ಇರಲಿ
ನನ್ನ ಪ್ರಾರ್ಥನೆ ನಿತ್ಯ ಹೀಗೆ ಸಾಗಿರಲಿ
ಮಾಣಿಕ್ಯ ವಿಠಲನಿಗೆ ಹರಿ ಸಂದಿಸಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲವೇ ಎಲ್ಲಾ
Next post ಪಾಯಸ ಪುರಾಣ!

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…