ಹರಿ ನೀನೇ ಸರ್ವ

ಹರಿ ಮುಕುಂದ ನೀನೆ ಸರ್ವ
ನಿನ್ನಿಂದಲೆ ಈ ಬಾಳಿಗೊಂದು ಪರ್ವ
ನಾಳಿನ ಬಾಳಿಗೆ ನೀನೇ ಹಿತೈಷಿ
ನನ್ನ ಬದುಕಿಗೆ ನೀ ನಾದೆ ಖುಷಿ

ಹಗಲು ಇರಳು ಮಾಡಿ ನಿನ್ನ ಧ್ಯಾನವ
ಮತ್ತೆ ಪಡೆಯುತ್ತಿರುವೆ ಆತ್ಮ ಜ್ಞಾನವ
ನಿನ್ನ ನೆನಪೊಂದು ಅಮೃತದ ಪಾನ
ನಿನ್ನ ಸಾಮಿಪ್ಯದ ದರುಶನವ ಸೋಪಾನ

ನಿನ್ನಲ್ಲಿ ಬೇಡಿಕೊಂಬೆ ನಾನೊಂದು
ಅದೇ ನಿನ್ನದರುಶನ ನೀಡೋ ಹರಿ
ನಿನ್ನ ಕಂಡವರಿಗೆ ಇನ್ನೊಂದು ಬೇಕಿಲ್ಲ
ಏಕೆಂದರೆ ಅಲ್ಲೆ‌ಎಲ್ಲವೂ ಬೇರೆನಿಲ್ಲ

ನನ್ನ ಪೂರ್ವಜರ ಪುಣ್ಯ ಇರಲಿ
ನನ್ನ ಗುರು ಹಿರಿಯರ ಕೃಪೆ ಇರಲಿ
ನನ್ನ ಪ್ರಾರ್ಥನೆ ನಿತ್ಯ ಹೀಗೆ ಸಾಗಿರಲಿ
ಮಾಣಿಕ್ಯ ವಿಠಲನಿಗೆ ಹರಿ ಸಂದಿಸಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲವೇ ಎಲ್ಲಾ
Next post ಪಾಯಸ ಪುರಾಣ!

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…