Home / ಕವನ / ಕವಿತೆ / ಹೃದಯದೇವಿ

ಹೃದಯದೇವಿ

 

ಏಕಾಂಗಿತನ;
ಅಳಿದುಳಿದ ನೆನಪುಗಳ ಅಧೋಲೋಕಕ್ಕೆ ಇಳಿದಿದ್ದಾಗಿದೆ.

ವಿಷಪೂರಿತ ಮುಳ್ಳುಗಳು ಚಾಚಿಕೊಂಡಿರುವ
ಸುಂದರ ಕವಿತೆಯೊಂದರ ಮೇಲೆ ಅವಳನ್ನು ಜೀವಿಸಲು
ಬಿಟ್ಟು ಬಂದಿದ್ದೇನೆ.

ನಿತ್ಯ ಬದುಕಿಗೆ ಒಗ್ಗಿ ಹೋಗಿದ್ದೇನೆ ಎನ್ನುತ್ತಾಳೆ,
ತುಂಬು ಮನಸ್ಸಿನಲಿ ನಗುವುದನ್ನು ಎಂದೋ ಕೈ ಬಿಟ್ಟಿದ್ದು,
ಅಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದಾಳೆ.

ಮಳೆಗಾಲದಲ್ಲಿ ಅವಳು ಜೀವಿಸುವ ಪರಿ?
ಇಲ್ಲ, ನೋಡಿದ ನೆನಪಿಲ್ಲ.

ಮರದ ಟೊಂಗೆಗಳನ್ನು ಮುರಿಯುತಾ ಚಳಿಗಾಲದಲ್ಲಿ
ಮತ್ತು ಬೇಸಿಗೆಯಲ್ಲಿ ನಗ್ನಳಾಗಿ ಬಟ್ಟೆ ಒಣಹಾಕುತ್ತಿದ್ದುದ್ದನ್ನು
ಎಷ್ಟೋ ಸಲ ನೋಡಿದ್ದೇನೆ, ಅಲ್ಲಿ ವರಾಂಡದ ಕೆಂಬೆಳಕಿನಲಿ…….

ನುಸಿಸೊಳ್ಳೆಗಳು ಅರಚಿಕೊಳ್ಳುವ ಶಬ್ದವನ್ನೂ ಕೇಳಿಸಿಕೊಳ್ಳುತ್ತಿದ್ದೆ.

ನನ್ನದೇ ಪ್ರವೃತ್ತಿಯಲ್ಲಿ ಹಾಸುಹೊಕ್ಕಾಗಿರುವ ಮಾತು,
ಪ್ರೇಮಿಸುವ ನಿತ್ಯವಿನೂತನ ಭರಾಟೆ; ಆತುರತೆ
ಕನಸು ಕಾಣುವ ರೀತಿ, ಸಾವನ್ನು ಧಿಕ್ಕರಿಸುವ ಚಂಚಲತೆ,
ಲೋಕದ ಭಂಡತನವನ್ನು ಖಂಡಿಸುವುದು ಮತ್ತು ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು-
ಈ ಎಲ್ಲದರಲ್ಲೂ ಸೋಲುವುದು.

ಹೃದಯದೇವಿಯಾದವಳು ಗಳಿಸಿಕೊಂಡ ಈ ನಡಾವಳಿಗಳೆಲ್ಲವೂ
ಅವಳನ್ನು ಸ್ವರ್ಗದೇವಿಯನ್ನಾಗಿ ಪರಿವರ್ತಿಸಲಿ.
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...