Home / ಕವನ / ಕವಿತೆ / ಹೃದಯದೇವಿ

ಹೃದಯದೇವಿ

 

ಏಕಾಂಗಿತನ;
ಅಳಿದುಳಿದ ನೆನಪುಗಳ ಅಧೋಲೋಕಕ್ಕೆ ಇಳಿದಿದ್ದಾಗಿದೆ.

ವಿಷಪೂರಿತ ಮುಳ್ಳುಗಳು ಚಾಚಿಕೊಂಡಿರುವ
ಸುಂದರ ಕವಿತೆಯೊಂದರ ಮೇಲೆ ಅವಳನ್ನು ಜೀವಿಸಲು
ಬಿಟ್ಟು ಬಂದಿದ್ದೇನೆ.

ನಿತ್ಯ ಬದುಕಿಗೆ ಒಗ್ಗಿ ಹೋಗಿದ್ದೇನೆ ಎನ್ನುತ್ತಾಳೆ,
ತುಂಬು ಮನಸ್ಸಿನಲಿ ನಗುವುದನ್ನು ಎಂದೋ ಕೈ ಬಿಟ್ಟಿದ್ದು,
ಅಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದಾಳೆ.

ಮಳೆಗಾಲದಲ್ಲಿ ಅವಳು ಜೀವಿಸುವ ಪರಿ?
ಇಲ್ಲ, ನೋಡಿದ ನೆನಪಿಲ್ಲ.

ಮರದ ಟೊಂಗೆಗಳನ್ನು ಮುರಿಯುತಾ ಚಳಿಗಾಲದಲ್ಲಿ
ಮತ್ತು ಬೇಸಿಗೆಯಲ್ಲಿ ನಗ್ನಳಾಗಿ ಬಟ್ಟೆ ಒಣಹಾಕುತ್ತಿದ್ದುದ್ದನ್ನು
ಎಷ್ಟೋ ಸಲ ನೋಡಿದ್ದೇನೆ, ಅಲ್ಲಿ ವರಾಂಡದ ಕೆಂಬೆಳಕಿನಲಿ…….

ನುಸಿಸೊಳ್ಳೆಗಳು ಅರಚಿಕೊಳ್ಳುವ ಶಬ್ದವನ್ನೂ ಕೇಳಿಸಿಕೊಳ್ಳುತ್ತಿದ್ದೆ.

ನನ್ನದೇ ಪ್ರವೃತ್ತಿಯಲ್ಲಿ ಹಾಸುಹೊಕ್ಕಾಗಿರುವ ಮಾತು,
ಪ್ರೇಮಿಸುವ ನಿತ್ಯವಿನೂತನ ಭರಾಟೆ; ಆತುರತೆ
ಕನಸು ಕಾಣುವ ರೀತಿ, ಸಾವನ್ನು ಧಿಕ್ಕರಿಸುವ ಚಂಚಲತೆ,
ಲೋಕದ ಭಂಡತನವನ್ನು ಖಂಡಿಸುವುದು ಮತ್ತು ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು-
ಈ ಎಲ್ಲದರಲ್ಲೂ ಸೋಲುವುದು.

ಹೃದಯದೇವಿಯಾದವಳು ಗಳಿಸಿಕೊಂಡ ಈ ನಡಾವಳಿಗಳೆಲ್ಲವೂ
ಅವಳನ್ನು ಸ್ವರ್ಗದೇವಿಯನ್ನಾಗಿ ಪರಿವರ್ತಿಸಲಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...