Home / ಕಥೆ / ಕಿರು ಕಥೆ / ಗುರುಗಳ ಹಿರಿಮೆ

ಗುರುಗಳ ಹಿರಿಮೆ

ಅದು ಒಂದು ದೊಡ್ಡ ಊರು. ಅಲ್ಲಿ ಹತ್ತು ಹಲವು ಗುರುಗಳ ಮಠಗಳು ಮತ್ತು ಅವರ ಶಿಷ್ಯರುಗಳು ಸೇರಿ ಇದ್ದರು. ಮಠಗಳ ಗುರುಗಳಲ್ಲಿ ಬಹಳ ಪೈಪೋಟಿ ಇತ್ತು. ಶಿಷ್ಯರು ಬಾಜಾ ಬಜಂತ್ರಿ ಹೊಡೆದು ತಮ್ಮ ಗುರುಗಳ ಮಹಿಮೆ ಪವಾಡಗಳ ಬಗ್ಗೆ ಗುಣಗಾನ ಮಾಡಿ ಇತರ ಮಠಗಳ ಅವಹೇಳನ ಮಾಡುತ್ತಿದ್ದರು.

ಆ ಊರಿಗೆ ಒಬ್ಬ ಸಾಧು ಬಂದರು. ಮಠಗಳ ನಡುವೆ, ಗುರುಗಳ ನಡುವೆ, ಶಿಷ್ಯರ ನಡುವೆ ಇರುವ ಈರ್ಷೆ ವೈಷಮ್ಯ, ಅಹಂಭಾವ, ಹೆಮ್ಮೆ ನೋಡಿ ಮರುಗುತಿದ್ದರು.

ಒಮ್ಮೆ ಅಲ್ಲಿ ಸಾಧು ಸಂತರ, ಗುರುಗಳ ಸಮ್ಮೇಳನ ನಡೆಯಿತು. ಎಲ್ಲಾ ಮಠಾಧೀಶರು ತಮಗಾಗಿ ಅಲಂಕರಿಸಿದ ಪೀಠಗಳಲ್ಲಿ ಆಸೀನರಾದರು. ಅವರವರ ಶಿಷ್ಯರು ವಂದಿಮಾಗದಿಗರಂತ ಅವರ ಬಗ್ಗೆ ಹಿರಿಮೆಯಿಂದ ಹೇಳುತಿದ್ದರು.

“ನಮ್ಮ ಮಠಾಧೀಶರು, ಸಾರ್ವಭೌಮ, ಬೆಟ್ಟವನ್ನು ಭುಜದಲ್ಲಿ ಹೊತ್ತವರು.” ಎಂದ ಓರ್ವ ಮಠದ ಶಿಷ್ಯ.

“ನಮ್ಮ ಮಠಾಧೀಶರು ಆಕಾಶವನ್ನೇ ತಲೆಯಲ್ಲಿ ಹೊತ್ತವರು” ಎಂದ.

ಮತ್ತೊರ್ವ ಶಿಷ್ಯ ಅತಿ ಹೆಮ್ಮೆಯಿಂದ ಇದೆಲ್ಲಾ, ಏನು ಮಹಾ? ”ನಮ್ಮ ಮಠಾಧೀಶರು ನದಿಯ ಒಂದು ದಡದಲ್ಲಿ ಕುಳಿತು ಇನ್ನೊಂದು ದಡದಲ್ಲಿ ಇರುವವರಿಗೆ ಉಪದೇಶಮಾಡುತ್ತಾರೆ” ಎಂದ.

“ನಿಮ್ಮ ಮಠಾಧೀಶರು ಏನು? ನಮ್ಮ ಗುರುಗಳು ನಕ್ಷತ್ರಗಳಿಂದ ದೇವರನ್ನು ಪೂಜಿಸುತ್ತಾರೆ” ಎಂದ ಮತ್ತೋರ್ವ.

ಅಲ್ಲಿ ನೆರದಿದ್ದ ಅತಿ ಸಾಮಾನ್ಯ ಸಾಧುವಿನ ಶಿಷ್ಯನೊಬ್ಬ ಎದ್ದು ನಿಂತು ಹೇಳಿದ- ”ನಮ್ಮ ಸಾಧು ಗುರುಗಳು ಮುಚ್ಚಿದ ಕಣ್ಣನ್ನು ತೆರೆಯಲು ಕಲಿಸಿದ್ದಾರೆ. ಮುಚ್ಚಿದ ಎದೆಯ ಬಾಗಿಲನ್ನು ತೆರೆಯಲು ಕಲಿಸಿದ್ದಾರೆ. ನಿರ್ಭಯ ಸತ್ಯ ಆಡುವದನ್ನು ಕಲಿಸಿದ್ದಾರೆ. ಹೆಚ್ಚೇಕೆ ಶಾಂತಿ ಬಾಳ್ವೆ ಮಾಡಿ ಬದುಕುವುದನ್ನು ಕಲಿಸಿದ್ದಾರೆ. ಈ ಸಾಮಾನ್ಯ ಪವಾಡಗಳು ನಮ್ಮ ಬಾಳಿಗೆ ಅಸಾಮಾನ್ಯ ಹಿರಿಮೆ ತಂದಿದೆ.” ಎಂದರು. – ಬೇರೆ ಮಠಾಧೀಶರು ತಲೆಗೆ ಮುಸುಕನ್ನು ಎಳೆದುಕೊಂಡು ತಮ್ಮ ತಮ್ಮ ಮಠಗಳಿಗೆ ತೆರಳಿದರು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...