ಲೆವೆಲ್ ಕ್ರಾಸಿಂಗ್

ಡೀಸೆಲ್ ಫ್ಯಾಕ್ಟರಿಯ ಮಗ್ಗುಲಿನ ಕಿರಿದಾದ ಓಣಿಯಿಂದ ಹಾದುಬಂದರೆ,
ಮನುಷ್ಯನೊಬ್ಬನ ತಲೆಯನ್ನು ಸವರಿದಂತೆ ಕಾಣುವ ಹಿಪ್ಪೆಮರ ಭೀತಿ ಹುಟ್ಟಿಸುತ್ತದೆ.

ರೈಲ್ವೆ ಲೆವೆಲ್ ಕ್ರಾಸಿಂಗ್ ಕಾವಲುಗಾರ ಅಲ್ಲಿ,
ಆ ಮರಕ್ಕೆ ಆನಿಕೊಂಡು ಕುಳಿತಿರುತ್ತಾನೆ ಅಥವಾ ತೂಕಡಿಸುತ್ತಿರುತ್ತಾನೆ.

ಹಳೆ ಸಂಬಂಧಿಕರು ಅವನ ಯೋಗಕ್ಷೇಮ ವಿಚಾರಿಸಿದರೂ,
ಅಷ್ಟುದೂರ ಹೋದ ನಂತರ ಯಾಕೋ ತಿರುಗಿ ನೋಡುತ್ತಾರೆ.

ಸಂಜೆ ರೈಲು ಮರೆಯಾಗುತ್ತಿದ್ದಂತೆ
ಅವನು ಅಲ್ಲೇ ಗೂಟ ಹೊಡೆದುಕೊಂಡು ಬಿದ್ದಿರುವುದಿಲ್ಲ.

ಕರೆದವಳ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸುತ್ತಾನೆ;
ಹಾಲು ಕರೆದು ಆಕಳು ಬಿಡುತ್ತಾನೆ.

ನಡುಮನೆಯ ಸರುವೆಗಳಕ್ಕೆ ಬೆನ್ನು ಮಾಡಿ ಕುಳಿತು ಬಹಳ ಹೊತ್ತು
ಮಾತನಾಡುತ್ತಾರೆ. ಮನೆ ಕಂದಾಯ ಕಟ್ಟಲು ಕೇಳಿಕೊಳ್ಳುತ್ತಾಳೆ;

ನಾಳೆ ಹಂದಿದೊಡ್ಡಿಗೆ ತಡಿಕೆ ಕಟ್ಟಬಹುದೆನ್ನುತ್ತಾಳೆ.
ನಾಯಿಗಳು ಬೊಗಳುವ ಸದ್ದು ಕೇಳಿಸುತ್ತದೆ.

ಸರಿಯೆಂದು ಎದ್ದು, ಓಣಿ ಹಾದಿಗೆ ಬೀಳುತ್ತಿದ್ದಂತೆ-
ಇವನನ್ನು ಕಂಡೊಡನೇ ಉಚ್ಚೆ ಹೊಯ್ಯುವ ಹೆಂಗಸರು ಕಣ್ಣಿಗೆ ಕಟ್ಟಿಕೊಳ್ಳುವರು.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಡಿ ಮತ್ತು ಧವಳಪ್ಪನ ಗುಡ್ಡ
Next post ರಾಜನೀತಿಯಲ್ಲಿ ಜಯವೋ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…