Home / ಲೇಖನ / ವಿಜ್ಞಾನ / ದಂತ ಚಿಕತ್ಸೆಯಲ್ಲಿ ಹೊಸ ಹೆಜ್ಜೆ

ದಂತ ಚಿಕತ್ಸೆಯಲ್ಲಿ ಹೊಸ ಹೆಜ್ಜೆ

ಹಲ್ಲೇ ಮುಖಕ್ಕೆ ಭೂಷಣ. “ದಾಳಿಂಬೆಯ ಬೀಜದಂತೆ’ ಎಂದು ಹೊಗಳುವುದು ಸುಂದರವಾದ ಕ್ರಮಬದ್ದವಾದ ಹಲ್ಲುಗಳನ್ನು ನೋಡಿಯೆ. ಸಾಮಾನ್ಯವಾಗಿ ಕೆಲವರಿಗೆ ಹುಳಕಲ್ಲಿನಿಂದ ಹಲ್ಲು ಕೆಟ್ಟು ಹೋಗಬಹುದು ಅಥವಾ ಸ್ವಚ್ಛತೆ ಕಾಪಾಡದಿದ್ದರೆ ಕೊಳತು ಹೋಗಬಹುದು. ಆಗ ರಾತ್ರಿ ಇಡೀ ನಿದ್ದೆ ಬಾರದೇ ನೋವಿನಿಂದ ಪರಿತಪಿಸಬಹುದು.
ಕಪೋಲಗಳು ಊದಿಕೊಂಡು ಮುಖದ ಮುದ್ರೆಯೇ ಅಸಹ್ಯವಾಗಬಹುದು. ಇದಕ್ಕೆಲ್ಲಮದ್ದು ಎಂದರೆ ಹಲ್ಲುಕೀಳಿಸು- ವುದು. ಆಗಲೂ ಸಹ ವಸಡುಗಳಿಗೆ ಚುಚ್ಚುಮದ್ದು ಹಾಕಿ ಮರಗಟ್ಟಸಿ ಹಲ್ಲನ್ನು ಕೀಳಬೇಕಾಗುತ್ತದೆ. ಏನೇ ಮರಗಟ್ಟದ್ದರೂ ಇದೊಂದು ಯಮ ಶಿಕ್ಷೆಯೆ. ಅದರಲ್ಲೂ ಬೇರುಗಟ್ಟಿ ಇದ್ದರೆ ಕೀಳುವುದು ಬಹಳ ಹೊತ್ತಾಗಬಹುದು.

ಆದರೆ ಇತ್ತೀಚಿಗೆ ದಂತವೈದ್ಯ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ನೋವಿನಿಂದ ಪರಿತಪಿಸುವ, ಮುಖ ಊದಿಸಿಕೊಳ್ಳುವ ಸಂದರ್ಭಕ್ಕೆ ತಿಲಾಂಜಲಿಯನ್ನು ಇತ್ತೀಚಿನ ವಿಜ್ಞಾನಿಗಳು ಇಟ್ಟಿದ್ದಾರೆ. ಲೇಸರ್ ತಂತ್ರ ವಿಧಾನದಿಂದ ಸರ್ಜರಿಯ ಅಗತ್ಯವಿಲ್ಲದೆ ಕಡಿಮೆ ಎಂದರೆ 40 ಸೆಕೆಂಡಿನಿಂದ 3 ನಿಮಿಷದೊಳಗಾಗಿಯೇ ಲೇಸರ್ ಚಿಕಿತ್ಸೆಯಿಂದ ಗುಣಪಡಿಸಬಹುದೆಂದು ಹೇಳುತ್ತಾರೆ. ದಂತಗಳ ಚಿಕಿತ್ಸೆಗ ಲೇಸರ್ ತಂತ್ರವಿಧಾನ ಬಳಸುವು
ದರಿಂದ ಸೂಕ್ಷ್ಮವಾದ ವಸಡುಗಳಿಗೆ ಯಾವುದೇ ಅಪಾಯವಾಗಲೀ, ಗಾಯವಾಗಲೀ, ಆಗದೇ ವಾಸ್ತವ ಸ್ಲಿತಿಯ-
ಲ್ಲಿದ್ದಂತೆ ಇರಬಹುದು. ಈ ಲೇಸರ್ ಕಿರಣವು ಹಲ್ಲುಗಳ ಒಳಗಡೆಯ ವರೆಗೆ ಹೋಗಿ ಯಾವುದೇ ದಂತ ರೋಗವನ್ನು ನಿರ್ಮೂಲನೆ ಮಾಡುವ ಶಕ್ತಿಯನ್ನು ಹೊಂದಿದೆ. ಸಬ್‌ಮ್ಯೂಕಸ್ ಫೈಫ್ರೋಸಿಸ್ ರೋಗವು ಹೆಚ್ಚಾಗಿ ಪಾನ್‌ಮಸಾಲ, ತಂಬಾಕು, ಸಿಗರೇಟು ಸೇವನೆ, ಶರಾಬು, ಅತಿಯಾಗಿ ಯಾವುದೇ ಪದಾರ್ಥವನ್ಪು ಅಗಿದರೆ ಬಾಯಿಯ ಮೃದುವಾದ
(ಮಾಂಸ)ವು ಮೂಲಕ ಒರಟಾಗಿ, ಬಾಯಿಬಿಡಲಾಗುವುದೇ ಇಲ್ಲ. ಅಗಿಯುಲಾಗುವುದಿಲ್ಲ. ಹಿಂದೆ ಅಪರೇಷನ್ ಮೂಲಕ ಮಾಡಿಸಿಕೊಂಡ ಚಿಕಿತ್ಸೆಗೆ ಆರು ತಿಂಗಳು ಸಮಯ ಹಿಡಿದರೆ ಈಗ ಈ ಲೇಸರ್ ಕಿರಣ ಚಿಕಿತ್ಸೆಯಿಂದ 15 ರಿಂದ 2 ತಿಂಗಳೊಳಗಾಗಿ ವಾಸಿಯಾಗುತ್ತದೆ. ಪೂರ್ತಿ ಚಿಕಿತ್ಸೆ ನೋವಿಲ್ಲದೇ ನಡೆಯುತ್ತದೆ ಇದರಂತೆ ಹಲ್ಲುಗಳಿಗೆ ತಣ್ಣನೆಯ ಅಥವಾ ಬಿಸಿ ಪದಾರ್ಥಗಳು ಸ್ಪರ್ಷಗೊಂಡಾಗ ಮೈ’ಝುಂ’ ಎಂದು ನೋವಾಗುವ ದಂತ ಚಿಕಿತ್ಸೆಯನ್ನು ಕೂಡ ಒಂದು ನಿಮಿಷದಲ್ಲಿ ಮಾಡಬಹುದು. ಹುಳಕಲ್ಲು ಆದರೆ “ರೊಟ್‌ಕೆನಾಲ್’ ಚಿಕಿತ್ಸೆಯ ಮೂಲಕ
ಸರಿಪಡಿಸಬಹುದು.
1) ವಸಡುಗಳಲ್ಲಿ ರಕ್ತ ಕೀವು ಬರುತ್ತಿದ್ದರೆ,
2) ಹಲ್ಲುಗಳು ಅಲ್ಲಾಡುತ್ತಿದ್ದರೆ,
3) ಹಲ್ಲುಗಳ ಸಮಾನಾಂತರ ಮೂಳೆ ಸಡಿಲವಾಗಿದ್ದರೆ,
4) ಬಾಯಿಯಲ್ಲಿ ಹುಣ್ಣುಗಳಾಗಿದ್ದರೆ,
5) ಬಾಯಿಯ ನರಗಳಲ್ಲಿ ಆಗುವ ಸೊಂಕಿನಿಂದ ಒಳಕೆನ್ನೆ, ಹಣೆ, ತುಟಿಗಳಿಗೆ ನೋವಾಗುತ್ತಿದ್ದರೆ,
6) ಬಾಯಿ ತೆರೆದಾಗ ಮತ್ತು ಮುಚ್ಚುವಾಗ ಶಬ್ದಬರುತ್ತಿದ್ದರೆ.

ಹೀಗೆ ಬಾಯಿ ಮತ್ತು ವಸಡು, ಹಲ್ಲುಗಳಿಗೆ ಅದ ಯಾವುದೇ ರೀತಿಯ ರೋಗವನ್ನು ನಿವಾರಿಸಲು ಲೇಸರ್‌ಕಿರಣ ಚಿಕಿತ್ಸೆ ತಂತ್ರ ಹೊಂದಿದ ವೈದ್ಯರು ಮೊದಲು ಹಲ್ಲುಗಳನ್ನು ಶುಭಗ್ರಗೊಳಿಸಿ ಆಯಾ ರೋಗಕೈ ತಕ್ಕಂತೆ ಲೇಸರ್ ಕಿರಣಗಳ ಪ್ರಯೋಗ ಮಾಡಿ ಗುಣಪಡಿಸುತ್ತಾರೆ. ಈ ಮೊದಲು ವಸಡಿನ ಆಪರೇಷನ್ ಅಥವಾ ಬಾಯಿ ಊದುವಿಕೆ,
ತಿಂಗಳುಗಟ್ಟಲೆ ನರಳುವಿಕೆ, ಸಾವಿರಾರು ರೂಪಾಯಿಗಳ ವ್ಯಯ ಈ ಯಾವ ಸಮಸ್ಯೆಗಳೂ ಇಲ್ಲದೆ ಲೇಸರ್ ತಂತ್ರವಿಧಾನದಿಂದ ನೋವಿಲ್ಲದೇ ದಂತ ರೋಗವನ್ನು ಪರಿಹರಿಸಿ ಕೊಳ್ಳಬಹುದು. ಲೇಸರ್ ಕಿರಣಗಳ ಪ್ರಭಾವವನ್ನು ಡಾ|| ಟೌನ್ಸ್ ತಿಳಿಸುತ್ತಾರೆ. ಈ ಅದ್ಭುತವಾದ ಲೇಸರ್ ಶಕ್ತಿಯನ್ನು 1958ರಲ್ಲಿ ಇವರು ಕಂಡು ಹಿಡಿದರೂ ದಂತ ವೈದ್ಯಕೀಯದಲ್ಲಿ ಇತ್ತೀಚಿಗೆ ಈ ಪ್ರಯೋಗಗಳಾಗುತ್ತಿರುವುದು ಭವಿಷ್ಯದ ದಂತ ರೋಗಿಗಳಿಗೆ
ಶುಭ ಸೂಚನೆಯಾಗಿದೆ.

*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...