ಬಾಯೊಡೆದ ಚೀಲ

ರಸ್ತೆ ನಡುವೆ ರಾಗಿ ಚೆಲ್ಲಿಕೊಂಡು
ಬಾಚಿ ಎತ್ತಲೂ ಆಗದೆ ನಿಂತಿದ್ದಾನೆ ಹುಡುಗ.
ಬಾಯೊಡೆದ ಚೀಲ ಬಿದ್ದಿದೆ ಬೀದಿನಡುವೆ;
ಹಾಯುತಿದೆ ಅದರದೆಯ ಮೇಲೆಯೇ ಒಂದೆ ಸಮ
ಕಾರು ಸ್ಕೂಟರ್ ಲಾರಿ,
ಈಟಿದನಿಯಲಿ ಮೈಲಿ ಎಚ್ಚರಿಕೆ ಚೀರಿ.

ಬಿದ್ದ ಕಾಳಿನ ಮೇಲೆ ಒದ್ದೆ ದೃಷ್ಟಿಯ ಚೆಲ್ಲಿ
ನಿಂತ ಹುಡುಗನ ದೀನ ನೋಟ,
ಎದುರೆ ಬಿದ್ದಿದೆ ಮಣ್ಣು ಪಾಲಾಗಿ ಮನೆಯವರ
ಅಂದಿನೂಟ,
ಏನೊ ತಲ್ಲಣ ಭೀತಿ ಕಲೆಸಿ ಕರಿಗಪ್ಪಾದ
ನೋವಿನ ಮುಖ,
ಗಾಜಿನಾಲಿಗಳಂಥ ಕಣ್ಣು ಜಿನುಗುತ್ತಿದೆ
ಅನಂತದುಃಖ.

ರಾಗಿ ಚಲ್ಲಿದ್ದಕ್ಕೆ ಕೂಗಿ ಗದರಿಸುತ್ತಿರುವ
ಪೋಲೀಸು ಪೇದೆ,
ಬರಲಿರುವ ಕತ್ತಲೆಯ ಕೂಗಿ ಕರೆಯುತ್ತಿರುವ
ಗಿರಣಿ ಕೊರಳಿನ ಕಪ್ಪುಬೇಗೆ,
ಬಾನ ಮೈತುಂಬೆಲ್ಲ ಬಿಳಿ ತೊನ್ನ ಹಚ್ಚಿರುವ
ತೇವವಿಲ್ಲದ ಮುಗಿಲ ಕ್ರೌರ್ಯ,
ಬಡವರೊಡಲಿನ ಕಿಚ್ಚೆ ಅಚ್ಚಾಗಿ ಆಗಸದ
ಅಂಚಿನಲಿ ಸಂಜೆ ಸೂರ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಳಲಿನಾ ಕರೆ
Next post ನಾನು ನಿನ್ನ ಪ್ರೀತಿ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…