ಬಾಯೊಡೆದ ಚೀಲ

ರಸ್ತೆ ನಡುವೆ ರಾಗಿ ಚೆಲ್ಲಿಕೊಂಡು
ಬಾಚಿ ಎತ್ತಲೂ ಆಗದೆ ನಿಂತಿದ್ದಾನೆ ಹುಡುಗ.
ಬಾಯೊಡೆದ ಚೀಲ ಬಿದ್ದಿದೆ ಬೀದಿನಡುವೆ;
ಹಾಯುತಿದೆ ಅದರದೆಯ ಮೇಲೆಯೇ ಒಂದೆ ಸಮ
ಕಾರು ಸ್ಕೂಟರ್ ಲಾರಿ,
ಈಟಿದನಿಯಲಿ ಮೈಲಿ ಎಚ್ಚರಿಕೆ ಚೀರಿ.

ಬಿದ್ದ ಕಾಳಿನ ಮೇಲೆ ಒದ್ದೆ ದೃಷ್ಟಿಯ ಚೆಲ್ಲಿ
ನಿಂತ ಹುಡುಗನ ದೀನ ನೋಟ,
ಎದುರೆ ಬಿದ್ದಿದೆ ಮಣ್ಣು ಪಾಲಾಗಿ ಮನೆಯವರ
ಅಂದಿನೂಟ,
ಏನೊ ತಲ್ಲಣ ಭೀತಿ ಕಲೆಸಿ ಕರಿಗಪ್ಪಾದ
ನೋವಿನ ಮುಖ,
ಗಾಜಿನಾಲಿಗಳಂಥ ಕಣ್ಣು ಜಿನುಗುತ್ತಿದೆ
ಅನಂತದುಃಖ.

ರಾಗಿ ಚಲ್ಲಿದ್ದಕ್ಕೆ ಕೂಗಿ ಗದರಿಸುತ್ತಿರುವ
ಪೋಲೀಸು ಪೇದೆ,
ಬರಲಿರುವ ಕತ್ತಲೆಯ ಕೂಗಿ ಕರೆಯುತ್ತಿರುವ
ಗಿರಣಿ ಕೊರಳಿನ ಕಪ್ಪುಬೇಗೆ,
ಬಾನ ಮೈತುಂಬೆಲ್ಲ ಬಿಳಿ ತೊನ್ನ ಹಚ್ಚಿರುವ
ತೇವವಿಲ್ಲದ ಮುಗಿಲ ಕ್ರೌರ್ಯ,
ಬಡವರೊಡಲಿನ ಕಿಚ್ಚೆ ಅಚ್ಚಾಗಿ ಆಗಸದ
ಅಂಚಿನಲಿ ಸಂಜೆ ಸೂರ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಳಲಿನಾ ಕರೆ
Next post ನಾನು ನಿನ್ನ ಪ್ರೀತಿ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…