ಆತಂಕ

ಕುಂಟೆಯೊಲು ಕುಂಟಾಗಿ ಭಂಟತನಕಂಟಾಗಿ
ಅಂಟಿಟ್ಟು ಹೊಲಸಿಟ್ಟು ಹೊಳೆಯಾಗದಿಹೆನು!

ಸಿರಿನೀಲ ಬಾನದಲಿ ಅರಿಯದೆಲೆ ತನು ಮನದ
ಕಿರುಕುಳದ ಭಾರವನು ತಿರುಗುತಿವೆ ಮೋಡಾ.
ಹಿಕ್ಕಿ ಹಿರಿಯುವ ಕಾರ್ಯ ಮಿಕ್ಕಿಲ್ಲವೆಂದೆಂದು
ಸೊಕ್ಕಿರುವ ಹಲಧರರು ಸಿಕ್ಕಿಲ್ಲ ಜತೆಗೆ.
ಬಿಳಿ ಮೋಡಗಳನುಟ್ಟು ಕಳೆದಿಟ್ಟು ಮತ್ತುಟ್ಟು
ತಿಳಿಯದೆಲೆ ನಿಜಮನವ ಸಿಲೆಯಾಗಿ ನಿಲುತ
ನೀರಗನ್ನಡಿಯಲ್ಲಿ ನೀಳದೇಹವ ನೋಡಿ
ಭಾಳನಾಚುವಳಾಕೆ ಶೈಲಸುತೆಯಾಕೆ.
ಚಿಗುರಿಲ್ಲ ಸೊಬಗಿಲ್ಲ ಮಘಮಗಿಪ ಪೂನಿಲ್ಲ
ಬಿಗಿ ಮೊಗದ ಬಂಜೆಯಿದು ನಗಲಿಲ್ಲ ಹೃದಯ!
ಅರಳುವಾತಾವರೆಯ ಹರಿಯುವಾ ನೀರುಗಳ
ಹರಿಸೋಡಿ ಚಿಗಿಯುವರ ಪರುಕಿಸಲೆ ಇಲ್ಲ!
ಕೆಲಸದೀ ಸುಳಿಯಲ್ಲಿ ಸಿಲುಕಿ ಬನ್ನಣಬಟ್ಟೆ.
ಸಲೆಜೀವದುಸಿರಿಲ್ಲ ಕೊಲುತಿಹುದು ಕೆಲಸ!
ಬಿಟ್ಟಿಹಿಡಿದೆನ್ನತಾ ಮಟ್ಟಿ ಹಿಂಡುತಲಿಹುದು
ಕೆಟ್ಟಹಟದೀಜನದ ಭ್ರಷ್ಟತರ ಕೆಲಸ,
ಹೊಟ್ಟೆಗೀ ಜಾಳಿಗೆಯು ಬಟ್ಟೆಗೀ ಯೂಳಿಗವು
ಕೆಟ್ಟೆ ಕೆಟ್ಟೆನು ನಾನು ಸೃಷ್ಟಿ ದೃಷ್ಟಿಯಲ್ಲಿ.

ಕವಿದಿಹುದು ಬಲು ತಮವು ರವವಿಲ್ಲ ಹೊಳಹಿಲ್ಲ!
ಶಿವನೊಡನೆ ನಿಲಲಿಲ್ಲ ಕವಿಯಾಗಲಿಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೪
Next post ನವಿಲುಗರಿ – ೭

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys