Home / ಕವನ / ಕವಿತೆ / ಆತಂಕ

ಆತಂಕ

ಕುಂಟೆಯೊಲು ಕುಂಟಾಗಿ ಭಂಟತನಕಂಟಾಗಿ
ಅಂಟಿಟ್ಟು ಹೊಲಸಿಟ್ಟು ಹೊಳೆಯಾಗದಿಹೆನು!

ಸಿರಿನೀಲ ಬಾನದಲಿ ಅರಿಯದೆಲೆ ತನು ಮನದ
ಕಿರುಕುಳದ ಭಾರವನು ತಿರುಗುತಿವೆ ಮೋಡಾ.
ಹಿಕ್ಕಿ ಹಿರಿಯುವ ಕಾರ್ಯ ಮಿಕ್ಕಿಲ್ಲವೆಂದೆಂದು
ಸೊಕ್ಕಿರುವ ಹಲಧರರು ಸಿಕ್ಕಿಲ್ಲ ಜತೆಗೆ.
ಬಿಳಿ ಮೋಡಗಳನುಟ್ಟು ಕಳೆದಿಟ್ಟು ಮತ್ತುಟ್ಟು
ತಿಳಿಯದೆಲೆ ನಿಜಮನವ ಸಿಲೆಯಾಗಿ ನಿಲುತ
ನೀರಗನ್ನಡಿಯಲ್ಲಿ ನೀಳದೇಹವ ನೋಡಿ
ಭಾಳನಾಚುವಳಾಕೆ ಶೈಲಸುತೆಯಾಕೆ.
ಚಿಗುರಿಲ್ಲ ಸೊಬಗಿಲ್ಲ ಮಘಮಗಿಪ ಪೂನಿಲ್ಲ
ಬಿಗಿ ಮೊಗದ ಬಂಜೆಯಿದು ನಗಲಿಲ್ಲ ಹೃದಯ!
ಅರಳುವಾತಾವರೆಯ ಹರಿಯುವಾ ನೀರುಗಳ
ಹರಿಸೋಡಿ ಚಿಗಿಯುವರ ಪರುಕಿಸಲೆ ಇಲ್ಲ!
ಕೆಲಸದೀ ಸುಳಿಯಲ್ಲಿ ಸಿಲುಕಿ ಬನ್ನಣಬಟ್ಟೆ.
ಸಲೆಜೀವದುಸಿರಿಲ್ಲ ಕೊಲುತಿಹುದು ಕೆಲಸ!
ಬಿಟ್ಟಿಹಿಡಿದೆನ್ನತಾ ಮಟ್ಟಿ ಹಿಂಡುತಲಿಹುದು
ಕೆಟ್ಟಹಟದೀಜನದ ಭ್ರಷ್ಟತರ ಕೆಲಸ,
ಹೊಟ್ಟೆಗೀ ಜಾಳಿಗೆಯು ಬಟ್ಟೆಗೀ ಯೂಳಿಗವು
ಕೆಟ್ಟೆ ಕೆಟ್ಟೆನು ನಾನು ಸೃಷ್ಟಿ ದೃಷ್ಟಿಯಲ್ಲಿ.

ಕವಿದಿಹುದು ಬಲು ತಮವು ರವವಿಲ್ಲ ಹೊಳಹಿಲ್ಲ!
ಶಿವನೊಡನೆ ನಿಲಲಿಲ್ಲ ಕವಿಯಾಗಲಿಲ್ಲ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...