Home / ಕವನ / ಅನುವಾದ / ಕೊನೆ, ಮೊದಲು

ಕೊನೆ, ಮೊದಲು

ಪ್ರತಿಯೊಂದು ಯುದ್ಧಮುಗಿದ ಮೇಲೂ
ಯಾರಾದರೂ ಮತ್ತೆ ಎಲ್ಲವನ್ನೂ ಅಣಿಗೊಳಿಸಬೇಕು.
ಹಾಳಾದದ್ದೆಲ್ಲ ಮತ್ತೆ ತನಷ್ಟಕ್ಕೇ
ಸರಿಯಾಗುವುದಿಲ್ಲ ತಾನೇ?

ಯಾರಾದರೂ ಬಂದು ರಸ್ತೆ ಮೇಲೆ ಬಿದ್ದ
ಕಲ್ಲು ಮಣ್ಣು ಪಕ್ಕಕ್ಕೆ ತಳ್ಳಿ
ಹೆಣ ಹೂತ್ತೆಗಾಡಿಗಳು
ಸಾಗುವುದಕ್ಕೆ ದಾರಿ ಮಾಡಬೇಕು.

ಯಾರಾದರೂ ಸರಿ
ಗಾಜಿನ ಚೂರು, ರಕ್ತದ ಬಟ್ಟೆ ರಾಶಿ,
ಸೋಫಾ ಸ್ಪ್ರಿಂಗು, ಕೆಸರು, ಬೂದಿ, ಇಟ್ಟಿಗೆ,
ಸಿಮೆಂಟು ಕಬ್ಬಿಣದ ಅವಶೇಷಗಳ ನಡುವೆ ಕಷ್ಪಪಡಲೇಬೇಕು

ಯಾರಾದರೂ ಬಂದು
ಗೋಡೆಗೆ ಆಸರೆಯಾಗಿ ಕಂಬವನ್ನು ಎತ್ತಿನಿಲ್ಲಿಸಬೇಕು,
ಕಿಟಕಿಗೆ ಗಾಜು ಹಾಕಬೇಕು, ಬಾಗಿಲುವಾಡ ಕೂಡಿಸಬೇಕು.

ಸಂಗೀತದ ಸದ್ದಿಲ್ಲ, ಫೋಟೋಗಳ ಸುಳಿವಿಲ್ಲ
ವರ್‍ಷಗಟ್ಟಲೆ ಸುಮೃನೆ ದುಡಿಯಬೇಕು.
ಕ್ಯಾಮೆರಾಗಳೆಲ್ಲ ಬೇರೆ ಹೊಸ ಯುದ್ಧಗಳ
ಫೋಟೋ ತೆಗೆಯಲು ಹೋಗಿವೆ.
ಸೇತುವೆಗಳು ಹೊಸವಾಗಬೇಕು,
ಅಂಗಿ ತೋಳು ಮೇಲಕ್ಕೆ ಮಡಿಸಿ ಮಡಿಸಿ
ಚಿಂದಿ ಚಿಂದಿಯಾಗಬೇಕು.

ಪೊರಕೆ ಹಿಡಿದ ಯಾರಾದರೂ
ಇದೆಲ್ಲ ಹೇಗಾಯಿತೆಂದು ನೆನಪು ಮಾಡಿಕೊಳ್ಳುತ್ತಾರೆ.
ಸುಮ್ಮನೆ ನಿಂತ ಇನ್ನು ಯಾರೋ
ಗಾಯವಿರದ ತಮ್ಮ ತಲೆ ತೂಗುತ್ತಾ ಕೇಳುತ್ತಾರೆ.
ಅಲ್ಲೆ ಸಮೀಪದಲ್ಲಿ ಬಹಳ ಜನ
ಈ ಹಳೆಯ ಯುದ್ಧದ ಕತೆಯೆಲ್ಲ
ಬರೀ ಬೋರು ಅಂದುಕೊಳ್ಳುತ್ತ ಇರಲೇಬೇಕು.
ಬೆಳೆದ ಮುಳ್ಳು ಪೊದೆಯ ಅಡಿಯಲ್ಲಿ
ಸಿಕ್ಕುಬಿದ್ದಿರುವ ತುಕ್ಕುಹಿಡಿದ
ವಾಗ್ವಾದವನ್ನು ಕಿತ್ತು ಆಗಾಗ ತಿಪ್ಪೆಗೆ ಎಸೆಯುವವರು
ಯಾರಾದರೂ ಇನ್ನೂ ಇರಲೇಬೇಕು.
ಇದೆಲ್ಲ ಆದದ್ದು ಏನು ಯಾಕೆ ಎಂದು
ತಿಳಿದಿರುವವರು
ಅಷ್ಟು ತಿಳಿಯದವರಿಗೆ ಅವಕಾಶ ಮಾಡಿಕೊಟ್ಟು
ಜಾಗಖಾಲಿ ಮಾಡಲೇಬೇಕು.
ಅಷ್ಟು ತಿಳಿಯದವರು
ಏನೂ ತಿಳಿಯದವರಿಗೆ
ಅವರು ಏನೇನೋ ತಿಳಿಯದು ಎಂದು ಕೂಡಾ ತಿಳಿಯದವರಿಗೆ
ಅವಕಾಶ ಮಾಡಿಕೊಡುತ್ತಾರೆ.
ಆಮೇಲೆ
ಕಾರ್‍ಯಕ್ರಮಗಳನ್ನೆಲ್ಲ ಮುಚ್ಚಿ ಬೆಳೆದ
ಹಸಿರು ಹುಲ್ಲಿನ ಮೇಲೆ,
ಹಲ್ಲಿನಲ್ಲಿ ಹುಲ್ಲಿನೆಳೆ ಕಚ್ಚುತ್ತಾ
ಮೇಲೆ ತೇಲುವ ಮೋಡವನ್ನು
ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ
ಅಂಗಾತ ಮಲಗಿದವನು ಇದ್ದೇ ಇರಬೇಕು.
*****
ಮೂಲ: ವಿಸ್ಲಾವಾ ಝ್ಯಿಂಬ್ರೊಸ್ಕ / Wisława Szymborska

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...