ಕೊನೆ, ಮೊದಲು

ಪ್ರತಿಯೊಂದು ಯುದ್ಧಮುಗಿದ ಮೇಲೂ
ಯಾರಾದರೂ ಮತ್ತೆ ಎಲ್ಲವನ್ನೂ ಅಣಿಗೊಳಿಸಬೇಕು.
ಹಾಳಾದದ್ದೆಲ್ಲ ಮತ್ತೆ ತನಷ್ಟಕ್ಕೇ
ಸರಿಯಾಗುವುದಿಲ್ಲ ತಾನೇ?

ಯಾರಾದರೂ ಬಂದು ರಸ್ತೆ ಮೇಲೆ ಬಿದ್ದ
ಕಲ್ಲು ಮಣ್ಣು ಪಕ್ಕಕ್ಕೆ ತಳ್ಳಿ
ಹೆಣ ಹೂತ್ತೆಗಾಡಿಗಳು
ಸಾಗುವುದಕ್ಕೆ ದಾರಿ ಮಾಡಬೇಕು.

ಯಾರಾದರೂ ಸರಿ
ಗಾಜಿನ ಚೂರು, ರಕ್ತದ ಬಟ್ಟೆ ರಾಶಿ,
ಸೋಫಾ ಸ್ಪ್ರಿಂಗು, ಕೆಸರು, ಬೂದಿ, ಇಟ್ಟಿಗೆ,
ಸಿಮೆಂಟು ಕಬ್ಬಿಣದ ಅವಶೇಷಗಳ ನಡುವೆ ಕಷ್ಪಪಡಲೇಬೇಕು

ಯಾರಾದರೂ ಬಂದು
ಗೋಡೆಗೆ ಆಸರೆಯಾಗಿ ಕಂಬವನ್ನು ಎತ್ತಿನಿಲ್ಲಿಸಬೇಕು,
ಕಿಟಕಿಗೆ ಗಾಜು ಹಾಕಬೇಕು, ಬಾಗಿಲುವಾಡ ಕೂಡಿಸಬೇಕು.

ಸಂಗೀತದ ಸದ್ದಿಲ್ಲ, ಫೋಟೋಗಳ ಸುಳಿವಿಲ್ಲ
ವರ್‍ಷಗಟ್ಟಲೆ ಸುಮೃನೆ ದುಡಿಯಬೇಕು.
ಕ್ಯಾಮೆರಾಗಳೆಲ್ಲ ಬೇರೆ ಹೊಸ ಯುದ್ಧಗಳ
ಫೋಟೋ ತೆಗೆಯಲು ಹೋಗಿವೆ.
ಸೇತುವೆಗಳು ಹೊಸವಾಗಬೇಕು,
ಅಂಗಿ ತೋಳು ಮೇಲಕ್ಕೆ ಮಡಿಸಿ ಮಡಿಸಿ
ಚಿಂದಿ ಚಿಂದಿಯಾಗಬೇಕು.

ಪೊರಕೆ ಹಿಡಿದ ಯಾರಾದರೂ
ಇದೆಲ್ಲ ಹೇಗಾಯಿತೆಂದು ನೆನಪು ಮಾಡಿಕೊಳ್ಳುತ್ತಾರೆ.
ಸುಮ್ಮನೆ ನಿಂತ ಇನ್ನು ಯಾರೋ
ಗಾಯವಿರದ ತಮ್ಮ ತಲೆ ತೂಗುತ್ತಾ ಕೇಳುತ್ತಾರೆ.
ಅಲ್ಲೆ ಸಮೀಪದಲ್ಲಿ ಬಹಳ ಜನ
ಈ ಹಳೆಯ ಯುದ್ಧದ ಕತೆಯೆಲ್ಲ
ಬರೀ ಬೋರು ಅಂದುಕೊಳ್ಳುತ್ತ ಇರಲೇಬೇಕು.
ಬೆಳೆದ ಮುಳ್ಳು ಪೊದೆಯ ಅಡಿಯಲ್ಲಿ
ಸಿಕ್ಕುಬಿದ್ದಿರುವ ತುಕ್ಕುಹಿಡಿದ
ವಾಗ್ವಾದವನ್ನು ಕಿತ್ತು ಆಗಾಗ ತಿಪ್ಪೆಗೆ ಎಸೆಯುವವರು
ಯಾರಾದರೂ ಇನ್ನೂ ಇರಲೇಬೇಕು.
ಇದೆಲ್ಲ ಆದದ್ದು ಏನು ಯಾಕೆ ಎಂದು
ತಿಳಿದಿರುವವರು
ಅಷ್ಟು ತಿಳಿಯದವರಿಗೆ ಅವಕಾಶ ಮಾಡಿಕೊಟ್ಟು
ಜಾಗಖಾಲಿ ಮಾಡಲೇಬೇಕು.
ಅಷ್ಟು ತಿಳಿಯದವರು
ಏನೂ ತಿಳಿಯದವರಿಗೆ
ಅವರು ಏನೇನೋ ತಿಳಿಯದು ಎಂದು ಕೂಡಾ ತಿಳಿಯದವರಿಗೆ
ಅವಕಾಶ ಮಾಡಿಕೊಡುತ್ತಾರೆ.
ಆಮೇಲೆ
ಕಾರ್‍ಯಕ್ರಮಗಳನ್ನೆಲ್ಲ ಮುಚ್ಚಿ ಬೆಳೆದ
ಹಸಿರು ಹುಲ್ಲಿನ ಮೇಲೆ,
ಹಲ್ಲಿನಲ್ಲಿ ಹುಲ್ಲಿನೆಳೆ ಕಚ್ಚುತ್ತಾ
ಮೇಲೆ ತೇಲುವ ಮೋಡವನ್ನು
ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ
ಅಂಗಾತ ಮಲಗಿದವನು ಇದ್ದೇ ಇರಬೇಕು.
*****
ಮೂಲ: ವಿಸ್ಲಾವಾ ಝ್ಯಿಂಬ್ರೊಸ್ಕ / Wisława Szymborska

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುದ್ದು ಮುದ್ದು ಗೋಪಾಲ
Next post ಮುಸ್ಸಂಜೆಯ ಮಿಂಚು – ೫

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…